ಈ ಪಾನೀಯಗಳನ್ನು ಕುಡಿದರೆ, ಮಧುಮೇಹದ ರೋಗಲಕ್ಷಣಗಳು ಇರುವುದೇ ಇಲ್ಲ!!

05-09-22 07:52 pm       Source: Vijayakarnataka   ಡಾಕ್ಟರ್ಸ್ ನೋಟ್

ಸಕ್ಕರೆ ಕಾಯಿಲೆ ಇರುವವರು ಸಿಹಿ ಹೆಚ್ಚು ತಿನ್ನಬಾರದು. ಅದರ ಜೊತೆಗೆ ಯಾವ ಆಹಾರ ಪದಾರ್ಥಗಳನ್ನು ತಿಂದರೆ ಸಕ್ಕರೆ ಕಾಯಿಲೆ ನಿಯಂತ್ರಣ ದಲ್ಲಿರುತ್ತದೆ ಎಂಬುದನ್ನು ಸಹ...

ಮಧುಮೇಹ ಒಂದು ದೀರ್ಘಕಾಲ ಕಾಡುವ ಆರೋಗ್ಯ ಸಮಸ್ಯೆ. ಇದು ಒಂದು ವೇಳೆ ನಿಯಂತ್ರಣ ತಪ್ಪಿದರೆ ಒಳಗಿನ ಅಂಗಾಂಗಗಳಿಗೆ ತೊಂದರೆ ತಪ್ಪಿದ್ದಲ್ಲ. ಹೃದಯ, ಕಿಡ್ನಿ ಹೀಗೆ ಪ್ರಮುಖವಾದ ಅಂಗಾಂಗಗಳು ಹಾನಿಗೆ ಒಳಗಾಗುತ್ತವೆ. ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಕೆಲವೊಂದು ಮನೆಮದ್ದುಗಳನ್ನು ಇಲ್ಲಿ ತಿಳಿಸಿಕೊಡಲಾಗಿದೆ. ಆದರೆ ಇವುಗಳು ಶಾಶ್ವತ ಪರಿಹಾರವಲ್ಲ. ನೀವು ತೆಗೆದುಕೊಳ್ಳುವ ಸಕ್ಕರೆ ಕಾಯಿಲೆಯ ಔಷಧಿಗಳ ಜೊತೆಗೆ ಇವುಗಳನ್ನು ಟ್ರೈ ಮಾಡಬಹುದು.

ತುಳಸಿ ನೀರು

basil leaves benefits, ತುಳಸಿ ಎಲೆಗಳ ಪ್ರಯೋಜನಗಳನ್ನು ಎಷ್ಟು ಹೊಗಳಿದರೂ ಕಮ್ಮಿಯೇ! -  what will happens, to our health if we add tulsi leaves in our daily diet -  Vijaya Karnataka

  • ತುಳಸಿ ಒಂದು ಪೂಜನೀಯ ಗಿಡ. ಇದರ ಎಲೆಗಳು ಅಷ್ಟೇ ಮನುಷ್ಯನ ಆರೋಗ್ಯಕ್ಕೆ ತುಂಬಾ ಉಪಯುಕ್ತ. ಇದರಲ್ಲಿ ರಕ್ತದಲ್ಲಿನ ಗ್ಲೂಕೋಸ್ ಅಂಶವನ್ನು ಕಡಿಮೆ ಮಾಡುವ ಗುಣವಿದೆ. ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ತಗ್ಗಿಸಿ ಮಧುಮೇಹವನ್ನು ನಿಯಂತ್ರಣದಲ್ಲಿರಿಸಲು ಕೆಲಸ ಮಾಡುತ್ತದೆ.
  • ಇದಕ್ಕಾಗಿ ನೀವು ಒಂದು ಲೋಟ ನೀರಿನಲ್ಲಿ ಆರರಿಂದ ಎಂಟು ತುಳಸಿ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ ಅದು ಬಿಸಿಯಿರುವಾಗ ಅಥವಾ ಆರಿದ ಮೇಲೆ ಇಡೀ ದಿನ ಕುಡಿಯುವುದು ಒಳ್ಳೆಯದು.

ಶುಂಠಿ ನೀರು

Ginger Health Benefits: ಹಸಿ ಶುಂಠಿಯಷ್ಟೇ ಅಲ್ಲಾ, ಒಣ ಶುಂಠಿಯೂ ಉಪಕಾರಿ; ಹಸಿ ಹಾಗೂ  ಒಣ ಶುಂಠಿಯ ಪ್ರಯೋಜನಗಳೇನು ಗೊತ್ತಾ! - ಆರೋಗ್ಯ

  • ಹಲವಾರು ಆರೋಗ್ಯ ಪ್ರಯೋಜನಗಳು ಶುಂಠಿ ನೀರಿನಲ್ಲಿ ಸಿಗುತ್ತವೆ. ಇನ್ಸುಲಿನ್ ಪ್ರಮಾಣವನ್ನು ಪ್ರಮುಖವಾಗಿ ದೇಹದಲ್ಲಿ ಉತ್ಪತ್ತಿಯಾಗುವ ಹಾಗೆ ಮಾಡಿ ಆರೋಗ್ಯವನ್ನು ಕಾಪಾಡುವಂತೆ ಇದರಲ್ಲಿನ ಜಿಂಕ್ ಕೆಲಸ ಮಾಡುತ್ತದೆ.
  • ಆಂಟಿಆಕ್ಸಿಡೆಂಟ್ ಮತ್ತು ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳು ಇದರಲ್ಲಿ ಸಾಕಷ್ಟು ಕಂಡು ಬರುತ್ತದೆ. ಹೀಗಾಗಿ ನೀರಿನಲ್ಲಿ ಶುಂಠಿಯನ್ನು ಕುದಿಸಿ ಸೋಸಿಕೊಂಡು ಆನಂತರ ಕುಡಿದರೆ ಮಧುಮೇಹ ಸಮಸ್ಯೆ ಪರಿಹಾರವಾಗುತ್ತದೆ.

ಮೆಂತ್ಯ ನೀರು

benefits of fenugreek seeds, ನೆನೆಸಿಟ್ಟ ಮೆಂತೆ ಕಾಳಿನ ನೀರು ಮಧುಮೇಹಿಗಳಿಗೆ  ತುಂಬಾನೇ ಒಳ್ಳೆಯದು - health benefits of drinking soaked fenugreek water -  Vijaya Karnataka

ಇನ್ಸುಲಿನ್ ಪ್ರತಿರೋಧವನ್ನು ನಿಯಂತ್ರಣ ಮಾಡುವಲ್ಲಿ ಮತ್ತು ಮಧುಮೇಹ ಸಮಸ್ಯೆಗೆ ರಾಮ ಬಾಣವಾಗಿ ಮೆಂತ್ಯ ಕೆಲಸ ಮಾಡುತ್ತದೆ. ಯಾರಿಗೆ ಮಧುಮೇಹ ಇರುತ್ತದೆ ಅಂತಹವರು ಮೆಂತೆ ಕಾಳುಗಳನ್ನು ಇಡೀ ರಾತ್ರಿ ನೆನೆಹಾಕಿ ನಂತರ ಬೆಳಗ್ಗೆ ಕುಡಿಯುವುದು ಒಳ್ಳೆಯದು. ಆದರೆ ಕುಡಿಯುವ ಮುಂಚೆ ಒಮ್ಮೆ ಇದನ್ನು ಕುದಿಸಿ, ಸೋಸಿ ಆನಂತರ ಕುಡಿಯುವುದು ಒಳ್ಳೆಯದು.

ದಾಲ್ಚಿನ್ನಿ ನೀರು

ದಾಲ್ಚಿನ್ನಿ'' ಅಥವಾ "ಚಕ್ಕೆ" (CINNAMON) ಯ ಔಷಧೀಯ ಗುಣಗಳು || ಆರೋಗ್ಯ ಸಂಜೀವಿನಿ (ಮನೆ  ಮದ್ದು)

  • ಇದು ನಿಮ್ಮ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಹೆಚ್ಚಾಗುವಂತೆ ಮಾಡುತ್ತದೆ. ಇದರಿಂದ ಗ್ಲೂಕೋಸ್ ಸಂಸ್ಕರಣೆ ಸಾಧ್ಯವಾಗುತ್ತದೆ. ಇದಕ್ಕಾಗಿ ನೀವು ಒಂದು ಲೋಟ ನೀರಿನಲ್ಲಿ ಒಂದು ಟೀ ಚಮಚ ದಾಲ್ಚಿನ್ನಿ ಪುಡಿಯನ್ನು ಹಾಕಿ ಇಡೀ ರಾತ್ರಿ ಹಾಗೆ ಬಿಡಿ.
  • ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಸಹಜವಾಗಿ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ.

ಬೇವು ಮಿಶ್ರಿತ ನೀರು

neem leaf benefits, ಬೇವಿನ ಸೊಪ್ಪಿನ ಖಾದ್ಯಗಳು ಮತ್ತು ಆರೋಗ್ಯ ಪ್ರಯೋಜನಗಳು - unique  health benefits of a neem leaves and their benefits - Vijaya Karnataka

  • ಇದು ಆರೋಗ್ಯದ ಮೇಲೆ ಚಮತ್ಕಾರವನ್ನೇ ಮಾಡುತ್ತದೆ. ಮಧುಮೇಹ ತೊಂದರೆ ಇರುವವರಿಗೆ ಬೇವು ತನ್ನಲ್ಲಿನ ಆಂಟಿ ಇನ್ಫಾಮೇಟರಿ ಮತ್ತು ಆಂಟಿ ವೈರಲ್ ಗುಣ ಲಕ್ಷಣಗಳಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಒಂದು ಹಂತದಲ್ಲಿ ನಿಯಂತ್ರಣಕ್ಕೆ ತರುತ್ತದೆ.
  • ನೀರಿನಲ್ಲಿ 7 ರಿಂದ 8 ಬೇವಿನ ಎಲೆಗಳನ್ನು ಹಾಕಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದು ಸಹಜವಾಗಿ ನಿಮ್ಮ ಬಾಯಿ ರುಚಿಗೆ ಕಹಿ ಅನುಭವ ಉಂಟು ಮಾಡುತ್ತದೆ ಆದರೆ ನಿಮ್ಮ ಆರೋಗ್ಯದ ವಿಚಾರದಲ್ಲಿ ಮಾತ್ರ ನಿಮಗೆ ಸಿಹಿಸುದ್ದಿಯನ್ನು ನೀಡುತ್ತದೆ.

Sugar Patients Drinking These Can Have A Control Over Diabetes.