ಕೆಂಪು ಈರುಳ್ಳಿಯ ಪವರ್ ಗೊತ್ತಾ? ಮಧುಮೇಹ ಕಾಯಿಲೆಯನ್ನು ಕಂಟ್ರೋಲ್‌ ಮಾಡುತ್ತೆ!

17-10-22 11:10 pm       Source: Vijayakarnataka   ಡಾಕ್ಟರ್ಸ್ ನೋಟ್

ಮಧುಮೇಹ ಕಾಯಿಲೆ ಇದೆ ಎಂದು ಗೊತ್ತಾದ ಬಳಿಕ, ಆದಷ್ಟು ಆಹಾರ ಕ್ರಮದಲ್ಲಿ ಕೆಂಪು ಈರುಳ್ಳಿಯನ್ನು ಬಳಸುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು.

ಮಧುಮೇಹ ಅಥವಾ ಸಕ್ಕರೆಕಾಯಿಲೆ ಎನ್ನುವುದು ಇಂದು ವಿಶ್ವದೆಲ್ಲೆಡೆಯಲ್ಲಿ ಕಾಡುತ್ತಿರು ವಂತಹ ಬಹುದೊಡ್ಡ ಅನಾರೋಗ್ಯ ಕಾಯಿಲೆ ಎಂದರೆ ತಪ್ಪಾಗಲಾರದು. ಕೆಟ್ಟ ಜೀವನಶೈಲಿ, ಅನಾರೋಗ್ಯಕಾರಿ ಆಹಾರ ಪದ್ಧತಿ, ಇತ್ಯಾದಿ ಸಮಸ್ಯೆಗಳಿಂದ ಈ ಕಾಯಿಲೆ ಇಂದು ಹೆಚ್ಚಿನ ವರಲ್ಲಿ ಕಂಡು ಬರುತ್ತಿದೆ.

ಇನ್ನು ಈ ಕಾಯಿಲೆಯ ಬಗ್ಗೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಈ ಕಾಯಿಲೆ ಬಂದ ಬಳಿಕ ಸಂಪೂರ್ಣವಾಗಿ ನಿವಾರಣೆ ಮಾಡಲು ಸಂಪೂರ್ಣವಾಗಿ ಸಾಧ್ಯವಿಲ್ಲದೆ ಇದ್ದರೂ ಅದನ್ನು ನಿಯಂತ್ರಣ ದಲ್ಲಿ ಇಡಬಹುದು ಹಾಗೂ ಬರದಂತೆ ಕೂಡ ತಡೆಯಲು ಸಾಧ್ಯ ಎಂದು ಅಭಿಪ್ರಾಯಾ ಪಡುತ್ತಾರೆ. ಇದಕ್ಕೆ ಸರಿಯಾದ ಜೀವನಶೈಲಿ ಹಾಗೂ ಆರೋಗ್ಯಕಾರಿ ಆಹಾರವು ಅತೀ ಅಗತ್ಯ. ಬನ್ನಿ ಇಂದಿನ ಲೇಖನದಲ್ಲಿ, ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಕೆಂಪು ಈರುಳ್ಳಿಯನ್ನು ಸೇರಿಸಿಕೊಳ್ಳುವುದರಿಂದ ಏನೆಲ್ಲಾ ಆರೋಗ್ಯಕಾರಿ ಪ್ರಯೋಜನಗಳನ್ನು ನಿರೀಕ್ಷಿಸಬಹುದು ಎನ್ನುವುದನ್ನು ನೋಡೋಣ...

ಕೆಂಪು ಈರುಳ್ಳಿ

Onion benefits in diabetes | Here's how onion helps in managing diabetes

  • ಈರುಳ್ಳಿಯ ಬಣ್ಣಗಳನ್ನು ನೋಡುವುದಾದರೆ ನಮಗೆ ಎರಡು ಬಗೆಯ ಈರುಳ್ಳಿಗಳು ಮಾರು ಕಟ್ಟೆಯಲ್ಲಿ ನೋಡಲು ಸಿಗುತ್ತದೆ. ಒಂದು ಕೆಂಪು ಬಣ್ಣದ ಈರುಳ್ಳಿ, ಇನ್ನೊಂದು ಬಿಳಿ ಬಣ್ಣದ ಈರುಳ್ಳಿ. ಸಾಮಾನ್ಯವಾಗಿ ಬಿಳಿ ಬಣ್ಣದ ಈರುಳ್ಳಿಗಳಿಗೆ ಹೋಲಿಸಿದರೆ ಕೆಂಪು ಬಣ್ಣದ ಈರುಳ್ಳಿಗಳು ತುಂಬಾನೇ ಆರೋಗ್ಯಕಾರಿ ಎಂದು ಹೇಳಬಹುದು.
  • ಯಾಕೆಂದರೆ, ಈ ಈರುಳ್ಳಿ ಗಳಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿನ ಪ್ರಮಾಣದಲ್ಲಿ ಸಿಗುವುದರ ಜೊತೆಗೆ ಆಂಟಿ - ಆಕ್ಸಿಡೆಂಟ್ ಅಂಶ ಬಹಳಷ್ಟು ಕಂಡು ಬರುತ್ತದೆ.
  • ಅಷ್ಟೇ ಅಲ್ಲದೆ ಇದರಲ್ಲಿ ಹೆಚ್ಚಿನ ಪ್ರಮಾಣದ ಆಂಟಿ - ಇನ್ಫಾಮೇಟರಿ ಗುಣ ಲಕ್ಷಣಗಳು ಕೂಡ ಕಂಡು ಬರುವುದರಿಂದ, ರಕ್ತದಲ್ಲಿನ ಸಕ್ಕರೆ ಮಟ್ಟದ ಪ್ರಮಾಣವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಮಧುಮೇಹವನ್ನು ಕಂಟ್ರೋಲ್‌ನಲ್ಲಿಡಲು ನೆರವಿಗೆ ಬರುತ್ತದೆ.

ಸಕ್ಕರೆಕಾಯಿಲೆ ನಿರ್ವಹಣೆಯಲ್ಲಿ ಕೆಂಪು ಈರುಳ್ಳಿಗಳ ಪಾತ್ರ

High blood sugar: What causes rise in blood sugar among non-diabetics | The  Times of India

ಮೊದಲೇ ಹೇಳಿದ ಹಾಗೆ ಕೆಂಪು ಈರುಳ್ಳಿಯಲ್ಲಿ ಮನುಷ್ಯನ ಆರೋಗ್ಯಕ್ಕೆ ಸಂಬಂಧ ಪಟ್ಟ ಹಲವಾರು ಬಗೆಯ ಪೌಷ್ಟಿಕ ಸತ್ವಗಳು ಇರುವುದರ ಜೊತೆಗೆ, ರಕ್ತದಲ್ಲಿ ಕಂಡುಬರುವ ಸಕ್ಕರೆ ಪ್ರಮಾಣವನ್ನು ಕೂಡ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿ, ಮಧುಮೇಹವನ್ನು ಕಂಟ್ರೋಲ್ ನಲ್ಲಿಡುವ ಎಲ್ಲಾ ಗುಣಲಕ್ಷಣಗಳು ಇದರಲ್ಲಿ ಕಂಡು ಬರುವುದರಿಂದ, ಸಕ್ಕರೆಕಾಯಿಲೆ ಇರುವವರು, ಈರುಳ್ಳಿಯನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ಬಹಳ ಒಳ್ಳೆಯದು.

ಗ್ಲೈಸೆಮಿಕ್ ಸೂಚ್ಯಂಕ

Is 108 A High Fasting Glucose Level?

  • ಮೊಟ್ಟ ಮೊದಲು ಹೇಳಬೇಕೆಂದರೆ, ಸಕ್ಕರೆಕಾಯಿಲೆಯಿಂದ ಬಳಲುತ್ತಿರುವವರು, ಆದಷ್ಟು ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುವ ಆಹಾರ ಪದಾರ್ಥಗಳು ಮಾತ್ರ, ಸೇವನೆ ಮಾಡಬೇಕು. ಇಲ್ಲವೆಂದರೆ ರಕ್ತದಲ್ಲಿ ಉಳಿಯುವ ಸಕ್ಕರೆ ಪ್ರಮಾಣ ಯಾವ ಸಮಯದಲ್ಲಿ ಬೇಕಾದರೂ ಏರು ಪೇರಾಗುವ ಸಾಧ್ಯತೆ ಹೆಚ್ಚಿರುತ್ತದೆ.
  • ಇನ್ನು ಆರೋಗ್ಯ ತಜ್ಞರು ಹೇಳುವ ಪ್ರಕಾರ ಕೆಂಪು ಈರುಳ್ಳಿಯಲ್ಲಿ ಶೇಕಡ 10% ಗಿಂತ ಕಡಿಮೆ ಪ್ರಮಾಣದಲ್ಲಿ ಗ್ಲೈಸೆಮಿಕ್ ಸೂಚ್ಯಂಕ ಇರುವ ಕಾರಣ, ಮಧುಮೇಹಿಗಳು ತಮ್ಮ ಆಹಾರ ಪದ್ಧತಿ ಯಲ್ಲಿ ಸೇರಿಸಿಕೊಂಡರೆ ಬಹಳ ಒಳ್ಳೆಯದು.

ಕ್ರೋಮಿಯಂ ಅಂಶ ಕೆಂಪು ಈರುಳ್ಳಿಯಲ್ಲಿ ಕಂಡು ಬರುತ್ತದೆ...

How to Slice an Onion (With Video)

  • ಆರೋಗ್ಯ ತಜ್ಞರು ಹೇಳುವ ಪ್ರಕಾರ, ವ್ಯಕ್ತಿಯಲ್ಲಿ ಸಕ್ಕರೆಕಾಯಿಲೆ ಇದೆ ಎಂದು ಗೊತ್ತಾದ ಬಳಿಕ, ಅವರು ತಮ್ಮ ಆಹಾರ ಪದ್ಧತಿಯಲ್ಲಿ ಆದಷ್ಟು ಕೆಂಪು ಈರುಳ್ಳಿಯನ್ನು ಸೇರಿಸಿ ಕೊಳ್ಳುವುದನ್ನು ಮರೆಯಬಾರದು.
  • ಯಾಕೆಂದರೆ ಕೆಂಪು ಈರುಳ್ಳಿಯಲ್ಲಿ ಹೇರಳವಾಗಿ ಕ್ರೋಮಿಯಂ ಅಂಶ ಕಂಡುಬರುರುದರಿಂದ, ರಕ್ತದಲ್ಲಿನ ಗ್ಲುಕೋಸ್ ಮಟ್ಟ ಅಚ್ಚುಕಟ್ಟಾಗಿ ನಿರ್ವಹಣೆಯಾಗುತ್ತದೆ, ಇದರಿಂದ ಮಧುಮೇಹ ಕಾಯಿಲೆ ಕೂಡ ನಿಯಂತ್ರಣದಲ್ಲಿರುತ್ತದೆ.

ಕೊನೆಯ ಮಾತು

Fasting Blood Sugar Level: Normal levels & testing - MyHealth

  • ಮಧುಮೇಹ ಇದೆ ಎಂದು ಗೊತ್ತಾದ ಬಳಿಕ, ಸರಿಯಾದ ಜೀವನಶೈಲಿ ಹಾಗೂ ಆರೋಗ್ಯಕಾರಿ ಆಹಾರಗಳನ್ನು ಸೇವನೆ ಮಾಡಿ...
  • ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯುವ ಅಭ್ಯಾಸಮಾಡಿಕೊಳ್ಳಬೇಕು
  • ವಾರಕ್ಕೆ ಒಮ್ಮೆಯಾದರೂ ಹತ್ತಿರದಲ್ಲಿರುವ ವೈದ್ಯರ ಬಳಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಪರೀಕ್ಷೆ ಮಾಡಿ ಮಾಹಿತಿ ಪಡೆದುಕೊಳ್ಳಿ.
  • ಆದಷ್ಟು ಜಂಕ್ ಫುಡ್, ಎಣ್ಣೆಯಾಂಶ ಇರುವ ಆಹಾರಗಳಿಂದ ದೂರವಿರಿ

Add Red Onions In Your Diet Will Help You To Manage Your Blood Sugar Level.