ಈ ಮೂರು ಬಗೆಯ ಎಲೆಗಳಲ್ಲಿದೆ ಮಧುಮೇಹ, ಬಿಪಿ, ನಿಯಂತ್ರಿಸುವ ಶಕ್ತಿ!

03-02-22 11:16 am       Source: ManoharV Shetty, Vijayakarnataka   ಡಾಕ್ಟರ್ಸ್ ನೋಟ್

ಇತ್ತೀಚಿನ ಜನರು ತಾವು ಅನುಸರಿಸುತ್ತಿರುವ ಕೆಟ್ಟ ಜೀವನ ಶೈಲಿಂದಾಗಿ, ಅವರ ದೇಹದ ಆರೋಗ್ಯವನ್ನು ತುಂಬಾ ಕಷ್ಟದ ಅಂಚಿಗೆ ದೂಡುತ್ತಿದ್ದಾರೆ. ಇಂದಿನ ಲೇಖನದಲ್ಲಿ ರಕ್ತದೊತ್ತಡ ಹಾಗೂ ಮಧುಮೇಹ ನಿಯಂತ್ರಣಕ್ಕೆ ಬಳಸಬಹುದಾಗಿ ಮೂರು ಗಿಡಮೂಲಿಕೆಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ.

ಇತ್ತೀಚಿನ ಜನರು ತಾವು ಅನುಸರಿಸುತ್ತಿರುವ ಕೆಟ್ಟ ಜೀವನ ಶೈಲಿಂದಾಗಿ, ಅವರ ದೇಹದ ಆರೋಗ್ಯವನ್ನು ತುಂಬಾ ಕಷ್ಟದ ಅಂಚಿಗೆ ದೂಡುತ್ತಿದ್ದಾರೆ. ಕೆಲಸದ ಅತಿಯಾದ ಒತ್ತಡದಿಂದ ಕೆಲಸ ಮಾಡುವ ಜನರು, ಒಂದು ರೀತಿಯ ಸಮಸ್ಯೆಯನ್ನು ಎದುರಿಸಿದರೆ, ಇನ್ನು ಕೆಲವರು ತಮ್ಮಪಾಡಿಗೆ ತಾವು ಇದ್ದು, ಯಾವುದೇ ಕಾರ್ಯ ಚಟುವಟಿಕೆಗಳನ್ನು ಮಾಡದೇ, ಸುಮ್ಮನೆ ಕುಳಿತು ಆರಾಮವಾಗಿ ಕಾಲ ಕಳೆಯುವ ಮಂದಿ ಇನ್ನೊಂದು ಬಗೆಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ.

ಇದೆಲ್ಲಾ ಕಾರಣಗಳಿಂದ, ಜನರಿಗೆ ಸಣ್ಣ ವಯಸ್ಸಿನಲ್ಲಿಯೇ, ಇಲ್ಲಸಲ್ಲದ ಕಾಯಿಲೆಗಳು ಆವರಿಸುತ್ತಿದೆ. ಅದರಲ್ಲೂ ಮಧುಮೇಹ, ರಕ್ತದ ಒತ್ತಡ, ಇತರ ಆರೋಗ್ಯ ಸಮಸ್ಯೆಗಳು, ಬಹಳ ಬೇಗನೇ ಕಾಡುತ್ತಿರುವುದು ನಿಜಕ್ಕೂ ಆಘಾತಕಾರಿ ವಿಷಯವಾಗಿದೆ. ಇತ್ತೀಚಿನ ಬ್ಯೂಸಿ ಲೈಫ್‌ ಸ್ಟೈಲ್‌ನಿಂದಾಗಿ ಮನೆಯಲ್ಲಿ ತಿಂಡಿ ತಿಂದು ಆಫೀಸ್ ಗೆ ಅಥವಾ ಬೇರೆ ಕೆಲಸಕ್ಕೆ ಹೋಗುವಷ್ಟು ಕೂಡ ಟೈಮ್ ಇರುವುದಿಲ್ಲ. ಹಾಗಾಗಿ ಹೆಚ್ಚಿನವರು, ರಸ್ತೆ ಬದಿಯ ತಿಂಡಿ-ತಿನಿಸುಗಳನ್ನೇ ಅವಲಂಬಿಸಿ ಬಿಡುತ್ತಾರೆ.

ಮನೆಯಲ್ಲಿ ವಿವಿಧ ಬಗೆಯ ತರಕಾರಿಗಳನ್ನು ಬಳಸಿ ತಯಾರು ಮಾಡುವ ಆಹಾರ ಪದಾರ್ಥಗಳಿಂದ ಮತ್ತು ಅಡುಗೆಗಳಿಂದ ದೂರವಿದ್ದು, ಕೇವಲ ಮನೆಯ ಹೊರಗಿನ ತಿಂಡಿಯನ್ನು ತಿನ್ನುವವರಿಗೆ ಬಗೆಬಗೆಯ ಆರೋಗ್ಯ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಇಂದಿನ ಲೇಖನದಲ್ಲಿ ರಕ್ತದೊತ್ತಡ ಹಾಗೂ ಮಧುಮೇಹ ನಿಯಂತ್ರಣಕ್ಕೆ ಬಳಸಬಹುದಾಗಿ ಮೂರು ಗಿಡಮೂಲಿಕೆಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಅದನ್ನು ನೀವು ಕೂಡ ಅಳವಡಿಸಿಕೊಂಡರೆ ಖಂಡಿತವಾಗಿಯೂ, ಆರೋಗ್ಯವನ್ನು ಕಾಪಾಡಿಕೊಳ್ಳಬಹುದು

ಕರಿಬೇವಿನ ಎಲೆಯು

 

  • ನೈಸರ್ಗಿಕ ಗಿಡಮೂಲಿಕೆಯಾದ, ಈ ಕರಿಬೇವಿನ ಎಲೆಯು ತನ್ನಲ್ಲಿ ಅಪಾರ ಪ್ರಮಾಣದ ಪೋಷಕಾಂಶಗಳನ್ನು ಒಳಗೊಂಡಿದೆ. ಹಾಗಾಗಿ ಇದನ್ನು ಪೋಷಕಾಂಶಗಳ ಆಗರ, ಎಂದೇ ಕರೆಯಲಾಗುತ್ತದೆ
  • ಈ ಪುಟ್ಟ ಎಲೆಗಳಲ್ಲಿ, ಅಧಿಕ ಪ್ರಮಾಣದಲ್ಲಿ, ವಿಟಮಿನ್ ಎ, ಬಿ, ಸಿ ಮತ್ತು ಬಿ12 ಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲದೇ, ಕರಿಬೇವಿನಲ್ಲಿಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಪ್ರಮಾಣ ಅಧಿಕವಾಗಿರುವುದರಿಂದ, ನಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಂಡರೆ ಅನೇಕ ಬಗೆಯ ಅನಾರೋಗ್ಯ ಸಮಸ್ಯೆಗಳಿಂದ ದೂರ ಇಡಬಹುದು.
  • ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಕರಿಬೇವಿನ ಎಲೆಗಳನ್ನು ನಿಯಮಿತವಾಗಿ, ಅಡುಗೆಗಳಲ್ಲಿ ಸೇವಿಸದರೆ, ಅದರಿಂದ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಮಾಡುವ ಪ್ರಕ್ರಿಯೆಯು ಚುರುಕುಗೊಳ್ಳುವುದು ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟ ಕೂಡ ಸಮತೋಲನಕ್ಕೆ ಬರುವುದು.

ತುಳಸಿ ಎಲೆಗಳಿಗೆ-ಮಧುಮೇಹ ಕಂಟ್ರೋಲ್ ಮಾಡುವ ಪವರ್ ಇದೆ 

  • ಭಾರತದಲ್ಲಿ ಅದರಲ್ಲೂ, ನಮ್ಮ ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ತುಂಬಾವೇ ಪವಿತ್ರವೆಂದು ಭಾವಿಸುವರು. ತುಳಸಿ ಗಿಡದಲ್ಲಿ ದೇವದೇವತೆಗಳು ನೆಲೆಸಿರುವರು ಎಂದು ಪುರಾಣಗಳು ಕೂಡ ಹೇಳಿವೆ. ಅದೇ ರೀತಿಯಲ್ಲಿ ತುಳಸಿ ಗಿಡವನ್ನು ಪುರಾತನ ಕಾಲದಿಂದಲೂ ಆಯುರ್ವೇದ ದಲ್ಲಿ ಔಷಧಿಯಾಗಿಯೂ ಬಳಸಿಕೊಂಡು ಬರಲಾಗುತ್ತಾ ಇದೆ. ಇದರ ಎಲೆಗಳಲ್ಲಿ ಹಲವಾರು ಕಾಯಿಲೆಗಳನ್ನು ನಿಯಂತ್ರಿಸುವ ಶಕ್ತಿ ಇದೆ.
  • ಅಧ್ಯಾಯಾನದ ವರದಿಯ ಪ್ರಕಾರ, ಖಾಲಿ ಹೊಟ್ಟೆಗೆ, ಮೂರು ನಾಲ್ಕು ತುಳಸಿ ಎಲೆಗಳನ್ನು ಜಗಿದು ತಿಂದು, ಅದರ ರಸವನ್ನು ನುಂಗಿದರೆ, ಅದರಿಂದ ಟೈಪ್ 2 ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು ಕಡಿಮೆ ಆಗುವುದು ಎಂದು ಕಂಡುಕೊಂಡಿದೆ. ಅಷ್ಟೇ ಅಲ್ಲದೇ ತುಳಸಿಯು ಹೃದಯದ ಕಾಯಿಲೆಗಳಾಗಿರುವಂತಹ ಹೃದಯಾಘಾತ, ಪಾರ್ಶ್ವವಾಯು ಮತ್ತು ಅಧಿಕ ರಕ್ತದೊತ್ತಡ ಕಡಿಮೆ ಮಾಡುವುದು.
  • ತುಳಸಿಯ ಎಲೆಗಳಲ್ಲಿ, ಪಾದರಸದ ಜೊತೆಗೆ ಕಬ್ಬಿನಾಂಶದ ಪ್ರಮಾಣ ಅಧಿಕ ಪ್ರಮಾಣದಲ್ಲಿದೆ. ಅಷ್ಟೇ ಅಲ್ಲದೇ, ಇವುಗಳನ್ನು (ತುಳಸಿ ಎಲೆಗಳನ್ನು) ಬಾಯಿಗೆ ಹಾಕಿ ಜಗಿದರೆ, ಇವೆರಡು ಬಿಡುಗಡೆ ಆಗುವುದು.
  • ಈ ಖನಿಜಾಂಶಗಳು ಹಲ್ಲುಗಳಿಗೆ ಹಾನಿ ಉಂಟು ಮಾಡಬಹುದು, ಅಲ್ಲದೇ ಹಲ್ಲಿನ ಬಣ್ಣ ಕೂಡ ಕೆಡಿಸ ಬಹುದು! ಇದಕ್ಕಿಂತ ಒಳ್ಳೆಯ ಐಡಿಯಾ ಅದರೆ, ತುಳಸಿ ಎಲೆಗಳನ್ನು ನೀರಿನೊಂದಿಗೆ ಕುದಿಸಿ ಕುಡಿಯಬಹುದು, ಇಲ್ಲಾಂದ್ರೆ ಟೀ ಮಾಡುವಾಗ, ತುಳಸಿ ಎಲೆಗಳನ್ನು ಹಾಕಿ, ನಂತರ ಸೇವಿಸಬಹುದು

ಬೇವಿನ ಎಲೆಗಳು 

  • ನಿಮಗೆ ಗೊತ್ತಿರಲಿ, ರುಚಿಯಲ್ಲಿ ಕಹಿ ಎನ್ನುವ ಒಂದೇ ಅವಗುಣವನ್ನು ಬಿಟ್ಟರೆ ಬೇವು ಎಲ್ಲಾ ರೀತಿಯಲ್ಲಿ ಆರೋಗ್ಯವರ್ಧಕವಾಗಿದೆ. ಬೇವಿನ ಗಿಡದ ಪ್ರತಿಯೊಂದು ಭಾಗವೂ ಅಂದರೆ, ಎಲೆಗಳು, ಕೊಂಬೆಗಳು, ತೊಗಟೆ, ಬೀಜಗಳು, ಬೇರು, ಅಥವಾ ಹೂವುಗಳಾಗಿರಲಿ, ಇವೆಲ್ಲವನ್ನೂ ಅಪಾರ ಪ್ರಮಾಣದಲ್ಲಿ ಉರಿಯೂತ, ಸೋಂಕು ಜ್ವರ, ಚರ್ಮರೋಗ ಮತ್ತು ಹಲ್ಲಿನ ಕಾಯಿಲೆಗಳಿಂದ ಹಿಡಿದು ಅನೇಕ ಸಮಸ್ಯೆಗಳಿಗೆ ಆಯುರ್ವೇದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.
  • ಇನ್ನು ಇದರಲ್ಲಿ ಬ್ಯಾಕ್ಟೀರಿಯಾ ನಿರೋಧಕ, ಸೂಕ್ಷ್ಮಜೀವಿ ನಿರೋಧಕ, ಉರಿಯೂತ ನಿವಾರಕ, ಆಂಟಿಆಕ್ಸಿಡೆಂಟ್, ನಂಜುನಿರೋಧಕ, ವೈರಸ್ ನಿವಾರಕ, ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಗುಣಲಕ್ಷಣಗಳಿಂದ ತುಂಬಿರುವ ಬೇವು ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಬಹುತೇಕ ಪರಿಹಾರವಾಗಿದೆ.
  • ಒಂದೆರಡು ಬೇವಿನ ಎಲೆಗಳನ್ನು ಜಗಿದು ಅದರ ರಸವನ್ನು ಸೇವನೆ ಮಾಡಿದರೆ ಆಗ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು, ಎಂದು ಆಯುರ್ವೇದಲ್ಲಿಯೇ ಹೇಳಲಾಗಿದೆ. ಅಷ್ಟೇ ಅಲ್ಲದೇ, ಬೇವಿನ ಎಲೆಗಳಲ್ಲಿ ಇರುವಂತಹ ಉರಿಯೂತ ನಿವಾರಕ, ಆಂಟಿಆಕ್ಸಿಡೆಂಟ್,ಗುಣಗಳು ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣಲಕ್ಷಣಗಳನ್ನು ಹೊಂದಿದೆ.

These natural leaves will help you to control your hypertension and blood sugar level.