ಬ್ರೇಕಿಂಗ್ ನ್ಯೂಸ್
10-02-22 05:41 pm Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ನಮ್ಮ ಹಳ್ಳಿಕಡೆ ಒಂದು ಮಾತಿದೆ, ಬಾಳೆಗೆ ಒಂದೇ ಗೊನೆ, ರಾಗಿಗೆ ಒಂದೇ ತೆನೆ! ಇದು ಅಕ್ಷರಶಃ ಸತ್ಯ. ಬಾಳೆಗಿಡ ಎಂದಾಗ ನಮಗೆ ತಟ್ಟನೆ ನೆನಪಿಗೆ ಬರುವುದು, ಬಾಳೆಹಣ್ಣು ಮಾತ್ರ! ಆದರೆ ನಿಮಗೆ ಗೊತ್ತಿರಲಿ, ಬಾಳೆಗಿಡದ ಕಾಂಡ, ಬಾಳೆ ಗಿಡದ ಬೇರು, ಬಾಳೆ ಎಲೆ ಇತ್ಯಾದಿಗಳು ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕ್ಕೆ ಬರುತ್ತದೆ.
ಮನೆಯಲ್ಲಿ ಅಥವಾ ದೇವಸ್ಥಾನಗಳಲ್ಲಿ ಏನೇ ಪೂಜೆ ಪುನಸ್ಕಾರಗಳಲ್ಲಿ, ಹೂವಿನ ಜೊತೆಗೆ ಬಾಳೆಹಣ್ಣುಗಳನ್ನು ಇರಿಸಿ ದೇವರಿಗೆ ಪೂಜೆ ಮಾಡುತ್ತೇವೆ. ಆದರೆ ಆರೋಗ್ಯದ ವಿಚಾರ ಬಂದಾಗ ಬಾಳೆಹಣ್ಣಿಗಿಂತ ಬಾಳೆ ಹೂವಿನ ಬಳಕೆ ಹೆಚ್ಚಾಗಿ ನಡೆಯುತ್ತದೆ ಎಂದರೆ ಆಶ್ಚರ್ಯವಾಗುತ್ತದೆ. ಇಂದಿನ ಈ ಲೇಖನದಲ್ಲಿ ಬಾಳೆ ಹೂವಿನಿಂದ ಸಿಗುವ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳೋಣ..
ನಾರಿನಾಂಶ ಹೆಚ್ಚಾಗಿದೆ

ಮಧುಮೇಹ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ

ಅಧಿಕ ರಕ್ತಸ್ರಾವವನ್ನು ಇಲ್ಲವಾಗಿಸುತ್ತದೆ

ಸಾಮಾನ್ಯವಾಗಿ ಮಹಿಳೆಯರಿಗೆ, ಅಧಿಕ ರಕ್ತಸ್ರಾವ ಕಾಣಿಸಿಕೊಂಡಾಗ, ದೈಹಿಕ ಅಸ್ವಸ್ಥತೆಗೆ ಒಳಗಾಗುತ್ತಾರೆ, ಜೊತೆಗೆ ಮಾನಸಿಕವಾಗಿಯೂ ಕುಗ್ಗಿ ಹೋಗುತ್ತಾರೆ. ಈ ಸಮಯದಲ್ಲಿ ಅವರಲ್ಲಿ ಕಾಡುವ ಅಧಿಕ ರಕ್ತಸ್ರಾವ ಸಮಸ್ಯೆಯನ್ನು ತಡೆದು, ಮುಂದೆ ರಕ್ತ ಹೀನತೆ ಸಮಸ್ಯೆ ಕಂಡು ಬರದಂತೆ ನೋಡಿಕೊಳ್ಳುತ್ತದೆ.
ಮಹಿಳೆಯರಿಗೆ ಸ್ತನಗಳಲ್ಲಿ ಹಾಲಿನ ಉತ್ಪತ್ತಿ ಹೆಚ್ಚಿಸುತ್ತದೆ

ಹೆರಿಯ ನಂತರ ಬಾಣಂತಿಯರು ನಿಯಮಿತವಾಗಿ, ಅಂದರೆ ತಿಂಗಳಿಗೆ ಎರಡು ಬಾರಿಯಾದರೂ, ಬಾಳೆ ಹೂವಿನ ಪಲ್ಯ ಮಾಡಿ ಸೇವಿಸಿದರೂ ಸಾಕು, ಸ್ತನಗಳಲ್ಲಿ ಹಾಲಿನ ಉತ್ಪತ್ತಿ ಹೆಚ್ಚಾಗುತ್ತದೆ ಎಂದು ತಿಳಿದುಬಂದಿದೆ.
ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ

ನಿಮಗೆ ಗೊತ್ತಿರಲಿ, ಮೊದಲೇ ಹೇಳಿದ ಹಾಗೆ, ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳನ್ನು ಹೊಂದಿರುವ ಈ ಬಾಳೆ ಹೂವಿನಲ್ಲಿ ದೇಹದ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುವ ಗುಣಲಕ್ಷಣಗಳು ಕಂಡುಬರುತ್ತದೆ. ಇನ್ನೂ ವಿಶೇಷವಾಗಿ ಹೃದಯದ ಕಾಯಿಲೆಗಳನ್ನು ಮತ್ತು ಕ್ಯಾನ್ಸರ್ ಸಮಸ್ಯೆಯನ್ನು ನಿಯಂತ್ರಿಸುವ ಗುಣಲಕ್ಷಣಗಳು ಇದರಲ್ಲಿ ಅಪಾರ ಪ್ರಮಾಣದಲ್ಲಿ ಕಂಡುಬರುತ್ತವೆ.
ಒತ್ತಡ ನಿವಾರಕ

ಮಾನಸಿಕ ಒತ್ತಡ ಮತ್ತು ಮಾನಸಿಕ ಖಿನ್ನತೆಯಿಂದ ಬಳಲಿ ಬೆಂಡಾಗಿರುವ ಮಂದಿ ತಮ್ಮ ಆಹಾರ ಪದ್ಧತಿಯಲ್ಲಿ ಬಾಳೆ ಹೂವಿನಿಂದ ತಯಾರು ಮಾಡಿದ ಪಲ್ಯ, ಸಾರು ಇತ್ಯಾದಿಗಳನ್ನು ಬಳಕೆ ಮಾಡುವುದರಿಂದ ಕೇವಲ ಮಾನಸಿಕ ಒತ್ತಡ ಮಾತ್ರ ದೂರವಾಗದೆ, ವಿಪರೀತ ಭಯ ಮತ್ತು ಮಾನಸಿಕವಾಗಿ ಹೊರಬರಲಾರದೆ ಅನುಭವಿಸುತ್ತಿರುವ ಸಾಕಷ್ಟು ಸಮಸ್ಯೆಗಳು ದೂರವಾಗುತ್ತದೆ. ಮಾನಸಿಕ ಸ್ಥಿತಿಯನ್ನು ಸರಿಪಡಿಸುವ ಒಂದು ನೈಸರ್ಗಿಕ ಔಷಧಿ ಎಂದು ಇದನ್ನು ಕರೆಯಬಹುದು.
Add Banana Flower Recipes In Your Diet To Control Sugar, Irregular Periods And Other Disease.
17-12-25 12:45 pm
Bangalore Correspondent
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
ದೆಹಲಿಯಲ್ಲು ಹೈಕಮಾಂಡ್ ಡಿನ್ನರ್ ಮೀಟಿಂಗ್ ; ಡಿಸಿಎಂ...
15-12-25 02:23 pm
17-12-25 01:38 pm
HK News Desk
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ...
15-12-25 08:09 pm
16-12-25 10:25 pm
Mangalore Correspondent
Bride Missing, Mangalore: ಬೇರೆ ಲವ್ ಇದೆಯೆಂದರೂ...
16-12-25 08:53 pm
ಕೇರಳಕ್ಕೆ ನಾಲ್ಕು ಲಕ್ಷ ಮೌಲ್ಯದ ಎಂಡಿಎಂ ಡ್ರಗ್ಸ್ ಸಾ...
16-12-25 05:24 pm
ಕೊರಗ ಸಮುದಾಯದಲ್ಲಿ ಮೊಟ್ಟಮೊದಲ ವೈದ್ಯಕೀಯ ಪದವಿ ಪಡೆದ...
16-12-25 04:26 pm
ಆವರಣ ಗೋಡೆ ಕಾಮಗಾರಿ ವೇಳೆ ಗುಡ್ಡ ಕುಸಿತ ; ಮಣ್ಣಿನಡಿ...
16-12-25 01:23 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm