ಬ್ರೇಕಿಂಗ್ ನ್ಯೂಸ್
10-02-22 05:41 pm Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ನಮ್ಮ ಹಳ್ಳಿಕಡೆ ಒಂದು ಮಾತಿದೆ, ಬಾಳೆಗೆ ಒಂದೇ ಗೊನೆ, ರಾಗಿಗೆ ಒಂದೇ ತೆನೆ! ಇದು ಅಕ್ಷರಶಃ ಸತ್ಯ. ಬಾಳೆಗಿಡ ಎಂದಾಗ ನಮಗೆ ತಟ್ಟನೆ ನೆನಪಿಗೆ ಬರುವುದು, ಬಾಳೆಹಣ್ಣು ಮಾತ್ರ! ಆದರೆ ನಿಮಗೆ ಗೊತ್ತಿರಲಿ, ಬಾಳೆಗಿಡದ ಕಾಂಡ, ಬಾಳೆ ಗಿಡದ ಬೇರು, ಬಾಳೆ ಎಲೆ ಇತ್ಯಾದಿಗಳು ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕ್ಕೆ ಬರುತ್ತದೆ.
ಮನೆಯಲ್ಲಿ ಅಥವಾ ದೇವಸ್ಥಾನಗಳಲ್ಲಿ ಏನೇ ಪೂಜೆ ಪುನಸ್ಕಾರಗಳಲ್ಲಿ, ಹೂವಿನ ಜೊತೆಗೆ ಬಾಳೆಹಣ್ಣುಗಳನ್ನು ಇರಿಸಿ ದೇವರಿಗೆ ಪೂಜೆ ಮಾಡುತ್ತೇವೆ. ಆದರೆ ಆರೋಗ್ಯದ ವಿಚಾರ ಬಂದಾಗ ಬಾಳೆಹಣ್ಣಿಗಿಂತ ಬಾಳೆ ಹೂವಿನ ಬಳಕೆ ಹೆಚ್ಚಾಗಿ ನಡೆಯುತ್ತದೆ ಎಂದರೆ ಆಶ್ಚರ್ಯವಾಗುತ್ತದೆ. ಇಂದಿನ ಈ ಲೇಖನದಲ್ಲಿ ಬಾಳೆ ಹೂವಿನಿಂದ ಸಿಗುವ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳೋಣ..
ನಾರಿನಾಂಶ ಹೆಚ್ಚಾಗಿದೆ

ಮಧುಮೇಹ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ

ಅಧಿಕ ರಕ್ತಸ್ರಾವವನ್ನು ಇಲ್ಲವಾಗಿಸುತ್ತದೆ

ಸಾಮಾನ್ಯವಾಗಿ ಮಹಿಳೆಯರಿಗೆ, ಅಧಿಕ ರಕ್ತಸ್ರಾವ ಕಾಣಿಸಿಕೊಂಡಾಗ, ದೈಹಿಕ ಅಸ್ವಸ್ಥತೆಗೆ ಒಳಗಾಗುತ್ತಾರೆ, ಜೊತೆಗೆ ಮಾನಸಿಕವಾಗಿಯೂ ಕುಗ್ಗಿ ಹೋಗುತ್ತಾರೆ. ಈ ಸಮಯದಲ್ಲಿ ಅವರಲ್ಲಿ ಕಾಡುವ ಅಧಿಕ ರಕ್ತಸ್ರಾವ ಸಮಸ್ಯೆಯನ್ನು ತಡೆದು, ಮುಂದೆ ರಕ್ತ ಹೀನತೆ ಸಮಸ್ಯೆ ಕಂಡು ಬರದಂತೆ ನೋಡಿಕೊಳ್ಳುತ್ತದೆ.
ಮಹಿಳೆಯರಿಗೆ ಸ್ತನಗಳಲ್ಲಿ ಹಾಲಿನ ಉತ್ಪತ್ತಿ ಹೆಚ್ಚಿಸುತ್ತದೆ

ಹೆರಿಯ ನಂತರ ಬಾಣಂತಿಯರು ನಿಯಮಿತವಾಗಿ, ಅಂದರೆ ತಿಂಗಳಿಗೆ ಎರಡು ಬಾರಿಯಾದರೂ, ಬಾಳೆ ಹೂವಿನ ಪಲ್ಯ ಮಾಡಿ ಸೇವಿಸಿದರೂ ಸಾಕು, ಸ್ತನಗಳಲ್ಲಿ ಹಾಲಿನ ಉತ್ಪತ್ತಿ ಹೆಚ್ಚಾಗುತ್ತದೆ ಎಂದು ತಿಳಿದುಬಂದಿದೆ.
ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ

ನಿಮಗೆ ಗೊತ್ತಿರಲಿ, ಮೊದಲೇ ಹೇಳಿದ ಹಾಗೆ, ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳನ್ನು ಹೊಂದಿರುವ ಈ ಬಾಳೆ ಹೂವಿನಲ್ಲಿ ದೇಹದ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುವ ಗುಣಲಕ್ಷಣಗಳು ಕಂಡುಬರುತ್ತದೆ. ಇನ್ನೂ ವಿಶೇಷವಾಗಿ ಹೃದಯದ ಕಾಯಿಲೆಗಳನ್ನು ಮತ್ತು ಕ್ಯಾನ್ಸರ್ ಸಮಸ್ಯೆಯನ್ನು ನಿಯಂತ್ರಿಸುವ ಗುಣಲಕ್ಷಣಗಳು ಇದರಲ್ಲಿ ಅಪಾರ ಪ್ರಮಾಣದಲ್ಲಿ ಕಂಡುಬರುತ್ತವೆ.
ಒತ್ತಡ ನಿವಾರಕ

ಮಾನಸಿಕ ಒತ್ತಡ ಮತ್ತು ಮಾನಸಿಕ ಖಿನ್ನತೆಯಿಂದ ಬಳಲಿ ಬೆಂಡಾಗಿರುವ ಮಂದಿ ತಮ್ಮ ಆಹಾರ ಪದ್ಧತಿಯಲ್ಲಿ ಬಾಳೆ ಹೂವಿನಿಂದ ತಯಾರು ಮಾಡಿದ ಪಲ್ಯ, ಸಾರು ಇತ್ಯಾದಿಗಳನ್ನು ಬಳಕೆ ಮಾಡುವುದರಿಂದ ಕೇವಲ ಮಾನಸಿಕ ಒತ್ತಡ ಮಾತ್ರ ದೂರವಾಗದೆ, ವಿಪರೀತ ಭಯ ಮತ್ತು ಮಾನಸಿಕವಾಗಿ ಹೊರಬರಲಾರದೆ ಅನುಭವಿಸುತ್ತಿರುವ ಸಾಕಷ್ಟು ಸಮಸ್ಯೆಗಳು ದೂರವಾಗುತ್ತದೆ. ಮಾನಸಿಕ ಸ್ಥಿತಿಯನ್ನು ಸರಿಪಡಿಸುವ ಒಂದು ನೈಸರ್ಗಿಕ ಔಷಧಿ ಎಂದು ಇದನ್ನು ಕರೆಯಬಹುದು.
Add Banana Flower Recipes In Your Diet To Control Sugar, Irregular Periods And Other Disease.
24-05-26 09:03 pm
HK News Staffer
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
ಬೆಂಗಳೂರು ಜಿಬಿಎ ಚುನಾವಣೆಗೆ ವಿಜಯ್ ಪಕ್ಷ ಎಂಟ್ರಿ ?...
23-05-26 11:37 pm
ಸರ್ಕಾರಿ ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ...
23-05-26 10:40 pm
ಹಾವೇರಿ ; ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದ 8 ವರ್...
22-05-26 10:24 pm
25-05-26 10:19 am
HK News Staffer
ರಾಜ್ಯಸಭೆ ಚುನಾವಣೆ ; ಮಲ್ಲಿಕಾರ್ಜುನ ಖರ್ಗೆ, ದೇವೇಗೌ...
23-05-26 08:47 pm
ಸಕಲೇಶಪುರ ವಿದ್ಯುದೀಕರಣ, ಸದ್ಯದಲ್ಲೇ 'ಮಂ- ಬೆಂ' ವಂದ...
23-05-26 03:53 pm
ಬೆಲೆ ಏರಿಕೆ, ನಿರುದ್ಯೋಗ, ಮೋದಿ ವಿದೇಶ ಪ್ರವಾಸ ವಿರೋ...
23-05-26 01:59 pm
ಪೆಟ್ರೋಲ್ - ಡೀಸೆಲ್ ಬೆಲೆ ಮತ್ತೆ ಏರಿಕೆ ! ಬೆಂಗಳೂರಿ...
23-05-26 09:15 am
25-05-26 01:08 pm
HK News Staffer
Mukka Accident, Mangalore: ಮುಕ್ಕ ಬಳಿ ಭೀಕರ ಅಪಘ...
24-05-26 09:22 pm
ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹ...
24-05-26 04:45 pm
ಮಂಗಳೂರು ವಿಮಾನ ದುರಂತಕ್ಕೆ 16 ವರ್ಷ ; 158 ಜೀವಗಳನ್...
22-05-26 09:47 pm
ಬೈಕಂಪಾಡಿ- KIOCL ಜಂಕ್ಷನ್ ಮಧ್ಯೆ ಬಹು ನಿರೀಕ್ಷಿತ ಫ...
22-05-26 08:10 pm
25-05-26 02:23 pm
HK News Staffer
ಭಟ್ಕಳ ದುರಂತ ; ಮೃತರ ಸಂಖ್ಯೆ 10ಕ್ಕೆ ಏರಿಕೆ, ತಲಾ 5...
25-05-26 09:27 am
Bangalore Digital Arrest: ಅಕ್ರಮ ಹಣ ವರ್ಗಾವಣೆ ಹ...
24-05-26 09:01 pm
Assault on police Mangalore: ಗಸ್ತಿನಲ್ಲಿದ್ದ ಉರ...
24-05-26 06:44 pm
ವರದಕ್ಷಿಣೆ ಕಿರುಕುಳ ; ಪೊಲೀಸ್ ಕಾನ್ಸ್ ಟೇಬಲ್ ಪತ್ನಿ...
24-05-26 02:01 pm