ಮಧುಮೇಹ ನಿಯಂತ್ರಿಸಲು ಈ ಕಾಳುಗಳನ್ನು ಸೇವನೆ ಮಾಡಿ…

11-03-22 10:24 pm       Source: Vijayakarnataka   ಡಾಕ್ಟರ್ಸ್ ನೋಟ್

ಬೇಳೆ ಕಾಳುಗಳು ಉತ್ತಮವಾದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಆ ಪಟ್ಟಿಯಲ್ಲಿ ರಾಜ್ಮಾ ಕೂಡ ಒಂದು. ಈ ರಾಜ್ಮಾ ಆರೋಗ್ಯದ ಮೇಲೆ ಮಾಡುವ ಜಾದುಗಳ ಬಗ್ಗೆ ಸಂಕ್ಷಿಪ್ತವಾದ...

 

ಇತ್ತೀಚೆಗಂತೂ ಬೇಳೆ, ಕಾಳುಗಳನ್ನು ಸೇವನೆ ಮಾಡುವುದು ಕಡಿಮೆಯಾಗಿಬಿಟ್ಟಿದೆ. ಮುಖ್ಯವಾಗಿ ತಾಜಾ ತರಕಾರಿಗಳು, ಹವಾಮಾನಕ್ಕೆ ಅನುಗುಣವಾಗಿ ಮಾರುಕಟ್ಟೆಗಳಿಗೆ ಬರುವ ಹಣ್ಣುಗಳು, ಬೇಳೆ ಕಾಳುಗಳನ್ನು ಅತಿ ಹೆಚ್ಚಾಗಿ ಸೇವನೆ ಮಾಡಬೇಕು.

ಈ ರೀತಿಯ ಆಹಾರವನ್ನು ಸೇವನೆ ಮಾಡುವವರಿಗೆ ಕಾಯಿಲೆಗಳು ಅಷ್ಟಾಗಿ ಕಾಡುವುದಿಲ್ಲ. ಬೇಳೆಕಾಳುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ನಿಮ್ಮ ಮೂಳೆಗಳನ್ನು ಬಲಿಷ್ಠಗೊಳಿಸುತ್ತದೆ. ಆ ಪಟ್ಟಿಯಲ್ಲಿ ರಾಜ್ಮಾ ಕಾಳುಗಳು ಅಥವಾ ಕಿಡ್ನಿ ಬೀನ್ಸ್‌ಗಳು ಒಂದು.ಕಿಡ್ನಿ ಬೀನ್ಸ್‌ ಸೇವನೆ ಮಾಡುವುದರಿಂದ ಆಗುವಂತಹ ಪ್ರಯೋಜನಗಳೇನು? ಎಂಬುದನ್ನು ತಿಳಿದು, ತಪ್ಪದೇ ಉತ್ತಮವಾದ ಆರೋಗ್ಯಕ್ಕೆ ಬೇಳೆ ಕಾಳುಗಳನ್ನು ಹೆಚ್ಚಾಗಿ ಸೇವನೆ ಮಾಡಿ.

ಕಿಡ್ನಿ ಬೀನ್ಸ್‌ ಅಥವಾ ರಾಜ್ಮಾದಲ್ಲಿ ಏನೆಲ್ಲಾ ಪೋಷಕಾಂಶಗಳಿವೆ?

See the source image

ಕಿಡ್ನಿ ಬೀನ್ಸ್‌ನಲ್ಲಿ ಪ್ರೋಟೀನ್‌ನ ಅತ್ಯುತ್ತಮವಾದ ಮೂಲವನ್ನು ಹೊಂದಿದೆ. ಇದರಲ್ಲಿ ವಿವಿಧ ಖನಿಜಗಳು, ವಿಟಮಿನ್‌ಗಳು, ಫೈಬರ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಶ್ರೀಮಂತವಾಗಿದೆ. ಇದು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಲು, ತೂಕವನ್ನು ಕಡಿಮೆ ಮಾಡಲು ಉತ್ತೇಜಿಸುತ್ತದೆ. ಅದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಮುಂದೆ ಓದಿ.

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ

See the source image

ನೋಡಲು ಸುಂದರವಾದ ಬಣ್ಣವನ್ನು ಹೊಂದಿರುವ ಈ ಕಿಡ್ನಿ ಬೀನ್ಸ್ ಅಥವಾ ರಾಜ್ಮಾ ಮಾಂಸದಲ್ಲಿರುವ ಕೊಲೆಸ್ಟ್ರಾಲ್‌ನ ಇತರ ಪ್ರೋಟೀನ್‌ ಮೂಲಗಳಿಗೆ ಪರ್ಯಾಯವಾಗಿದೆ. ಇದನ್ನು ಸಸ್ಯಹಾರಿಗಳು ಸೇವನೆ ಮಾಡಿದಾಗ ಆರೋಗ್ಯದ ಮೇಲೆ ಧನಾತ್ಮಕವಾದ ಪರಿಣಾಮವನ್ನು ಬೀರುತ್ತದೆ.

ನಿಮ್ಮ ಆಹಾರದಲ್ಲಿ ರಾಜ್ಮಾ ಕಾಳುಗಳನ್ನು ಸೇರಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬಹುದು. ಅಲ್ಲದೆ, ಮುಂದೆ ಎದುರಾಗುವ ಹೃದಯದ ತೊಂದರೆಗಳನ್ನು ಮೊಳಕೆಯಲ್ಲಿಯೇ ತಡೆಯುವ ಶಕ್ತಿ ಈ ಕಾಳುಗಳಿಗೆ ಇದೆ.

ಕಡಿಮೆ ಕೊಬ್ಬು ಹೊಂದಿದೆ

See the source image

ಬೇರೆ ಕಾಳುಗಳಿಗೆ ಹೋಲಿಸಿದರೆ ಕಿಡ್ನಿ ಬೀನ್ಸ್‌ನಲ್ಲಿ ಕಡಿಮೆ ಕೊಬ್ಬು ಮತ್ತು ಸ್ಯಾಚುರೇಟೆಡ್‌ ಕೊಬ್ಬನ್ನು ಹೊಂದಿದೆ. ಇದರಲ್ಲಿ ಫೈಬರ್‌ ಮತ್ತು ಪ್ರೋಟೀನ್‌ ಶ್ರೀಮಂತವಾಗಿರುವುದರಿಂದ ಆರೋಗ್ಯವನ್ನು ಉತ್ತಮವಾಗಿ ನಿರ್ವಹಿಸುತ್ತದೆ.

ಕರುಳಿನ ಕ್ಯಾನ್ಸರ್‌ ತಡೆಯುತ್ತದೆ

See the source image

ರಾಜ್ಮಾ ಕಾಳುಗಳನ್ನು ನಿಯಮಿತವಾಗಿ ಸೇವನೆ ಮಾಡುವವರು ಕರುಳಿನ ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳಿಂದ ಪಾರಾಗಬಹುದು ಎಂದು ಸಂಶೋಧನೆಗಳು ತೋರಿಸುತ್ತವೆ. ಸಾಮಾನ್ಯವಾಗಿ ಬೀನ್ಸ್‌ನಲ್ಲಿರುವ ಜೀರ್ಣವಾಗದ ಫೈಬರ್‌ ಕೊಲೊನ್‌ನಲ್ಲಿ ಜೀವಕೋಶದ ಬೆಳವಣಿಗೆಯನ್ನು ನಿಯಂತ್ರಿಸುವಲ್ಲಿ ಧನಾತ್ಮಕವಾದ ಪಾತ್ರವನ್ನು ವಹಿಸುತ್ತದೆ. ಇದು ಕರುಳಿನ ಕ್ಯಾನ್ಸರ್‌ ಅನ್ನು ಅಭಿವೃದ್ಧಿ ಪಡಿಸುವ ಮೂಲಕ ಅಪಾಯವನ್ನು ಕಡಿಮೆ ಮಾಡಲು ಉತ್ತೇಜಿಸುತ್ತದೆ.

ಮಧುಮೇಹ ಹೊಂದಿರುವವರು ಸೇವನೆ ಮಾಡಬಹುದೇ?

See the source image

ರಾಜ್ಮಾ ಕಾಳುಗಳನ್ನು ಮಧುಮೇಹ ಹೊಂದಿರುವವರು ಸೇವನೆ ಮಾಡುವುದು ಬಹಳ ಒಳ್ಳೆಯದು. ಏಕೆಂದರೆ, ರಾಜ್ಮಾ ಕಾಳುಗಳು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವ ಆಹಾರವಾಗಿದೆ. ಹಾಗಾಗಿ ಇವುಗಳನ್ನು ಸೇವನೆ ಮಾಡಿದಾಗ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಿಕೊಳ್ಳಬಹುದು. ಅಲ್ಲದೆ, ದೇಹಕ್ಕೆ ಬೇಕಾದ ಶಕ್ತಿಯನ್ನು ಇದು ತುಂಬುತ್ತದೆ.

ತೂಕವನ್ನು ನಿಯಂತ್ರಿಸುತ್ತದೆ

See the source image

ತೂಕವನ್ನು ಕಳೆದುಕೊಳ್ಳಲು ರಾಜ್ಮಾಕ್ಕಿಂತ ಉತ್ತಮವಾದ ಆಹಾರ ಬೇರೊಂದಿಲ್ಲ. ವಿಶೇಷವಾಗಿ ಕಡಿಮೆ ಕಾರ್ಬೋಹೈಡ್ರೇಟ್‌ ಆಹಾರವನ್ನು ಅಳವಡಿಸಿಕೊಳ್ಳುವಾಗ ಮತ್ತು ಫೈಬರ್‌ನಲ್ಲಿ ಹೆಚ್ಚಿನ ಆಹಾರಗಳನ್ನು ಸೇವಿಸುವುದರಿಂದ ತ್ವರಿತವಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಈ ಕಾಳುಗಳಲ್ಲಿ ಫೈಬರ್‌ ತುಂಬಿರುವುದರಿಂದ ಜನರು ಹೆಚ್ಚು ಸಮಯ ಪೂರ್ಣವಾಗಿರುವಂತೆ ಮಾಡುತ್ತದೆ. ಪದೇ ಪದೇ ಹೆಚ್ಚೆಚ್ಚು ಕ್ಯಾಲೋರಿಗಳ ಸೇವನೆ ಮಾಡುವುದನ್ನು ತಪ್ಪಿಸುತ್ತದೆ. ಪ್ರತಿನಿತ್ಯ ನಿಯಮಿತವಾಗಿ ರಾಜ್ಮಾ ಬೀನ್ಸ್‌ಗಳನ್ನು ಸೇವನೆ ಮಾಡುವುದರಿಂದ ಗಮನಾರ್ಹವಾಗಿ ತೂಕವನ್ನು ಕಳೆದುಕೊಳ್ಳಬಹುದು ಎಂದು ಅಧ್ಯಯನಗಳು ತೋರಿಸಿಕೊಟ್ಟಿದೆ.

ಮೂತ್ರಪಿಂಡದ ಆರೋಗ್ಯಕ್ಕೆ ಒಳ್ಳೆಯದು

ಮೂತ್ರಪಿಂಡದ ಆರೋಗ್ಯ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯ, ಹೇಗೆ?- Kannada Prabha

ಹೆಸರೇ ಸೂಚಿಸುವುದಂತೆ ಕಿಡ್ನಿ ಬೀನ್ಸ್‌, ಮೂತ್ರಪಿಂಡದ ಆರೋಗ್ಯವನ್ನು ಉತ್ತೇಜಿಸುವ ಅನೇಕ ಪೌಷ್ಟಿಕಾಂಶದ ಗುಣಗಳನ್ನು ಹೊಂದಿದೆ. ಬಹಳಷ್ಟು ಕರಗುವ ಮತ್ತು ಕರಗದ ಫೈಬರ್‌ ಅನ್ನು ಹೊಂದಿರುವುದರಿಂದ ಹೃದಯರಕ್ತನಾಳದ ಆರೋಗ್ಯವನ್ನು ಹೆಚ್ಚಿಸುತ್ತದೆ. ಇನ್ನು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

Effective Health Benefits Of Rajma Beans In Kannada.