ಬಿಪಿ ಸಮಸ್ಯೆ ಇದ್ದವರು ಹಸಿ ಈರುಳ್ಳಿ ತಿನ್ನುವ ಅಭ್ಯಾಸ ಮಾಡಿಕೊಳ್ಳಿ!

19-03-22 08:50 pm       Source: ManoharV Shetty, Vijayakarnataka   ಡಾಕ್ಟರ್ಸ್ ನೋಟ್

ರಕ್ತದ ಒತ್ತಡವನ್ನು ಸುಲಭವಾಗಿ ನಿಯಂತ್ರಣ ಮಾಡಬಲ್ಲ ಎಲ್ಲಾ ಗುಣಲಕ್ಷಣಗಳ ಹಸಿ ಈರುಳ್ಳಿಯಲ್ಲಿದೆ.

ಇತ್ತೀಚಿನ ದಿನಗಳಲ್ಲಿ ರಕ್ತದೊತ್ತಡದ ಸಮಸ್ಯೆ ಅಥವಾ ಬಿಪಿ ಸಮಸ್ಯೆ ಹೆಚ್ಚಿನವರ ಪ್ರಾಣ ಹಿಂಡುತ್ತಿದೆ. ಅಸಮರ್ಪಕ ಜೀವನ ಶೈಲಿ ಹಾಗೂ ಸರಿಯಾದ ಆಹಾರ ಪದ್ಧತಿಗಳನ್ನು ಅನುಸರಿಸದೇ ಇರುವುದೇ ಈ ಸಮಸ್ಯೆಗೆ ಪ್ರಮುಖ ಕಾರಣ. ವೈದ್ಯರೇ ಹೇಳುವ ಪ್ರಕಾರ ರಕ್ತದ ಒತ್ತಡವನ್ನು ಹೆಚ್ಚು ಅಥವಾ ಕಡಿಮೆ ಆಗದಂತೆ ನೋಡಿಕೊಳ್ಳುವುದು ಬಹು ಮುಖ್ಯ. ಒಂದು ವೇಳೆ ಇದರಲ್ಲಿ ಏರುಪೇರಾದರೆ ಮುಂಬರುವ ದಿನಗಳಲ್ಲಿ ಸಾಕಷ್ಟು ತೊಂದರೆಯನ್ನು ಎದುರಿಸಬೇಕಾಗಿ ಬರುತ್ತದೆ.

ಹೀಗಾಗಿ, ಸರಿಯಾದ ಜೀವನಶೈಲಿ ಹಾಗೂ ಆರೋಗ್ಯಕಾರಿ ಆಹಾರಗಳನ್ನು ಸೇವಿಸಿದರೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡಬಹುದು. ಕೇವಲ ರಕ್ತದೊತ್ತಡ ಮಾತ್ರವಲ್ಲದೆ, ನಾವು ಸೇವನೆ ಮಾಡುವಂತಹ ಆಹಾರವು ಆರೋಗ್ಯಕಾರಿಯಾಗಿದ್ದರೆ, ಆಗ ಪ್ರತಿಯೊಂದು ಅನಾರೋಗ್ಯಗಳನ್ನು ದೂರವಿಡಬಹುದು. ಬನ್ನ ಇಂದಿನ ಲೇಖನದಲ್ಲಿ ರಕ್ತದೊತ್ತಡದ ಸಮಸ್ಯೆಗೆ ಹಸಿ ಈರುಳ್ಳಿ ಸೇವಿಸುವುದರ ಮೂಲ ಹೇಗೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂಬುದನ್ನು ನೋಡೋಣ...

ಬಿಪಿ ಸಮಸ್ಯೆ ಬರಲು ಕೆಲವೊಂದು ಕಾರಣಗಳು

See the source image

  • ದೇಹದ ತೂಕ ಹಾಗೂ ಬೊಜ್ಜಿನ ಸಮಸ್ಯೆ
  • ಧೂಮಪಾನದ ಚಟ
  • ಅತಿಯಾದ ಉಪ್ಪಿನಾಂಶ ಇರುವ ಆಹಾರಗಳು ಅಥವಾ ಜಂಕ್ ಫುಡ್ ಸೇವನೆ.
  • ಕೆಲವೊಮ್ಮೆ ಅನುವಂಶೀಯ ಕಾರಣಗಳು
  • ವ್ಯಾಯಾಮ, ದೈಹಿಕ ಚಟುವಟಿಕೆಗಳನ್ನು ಮಾಡದೇ ಇರುವುದು
  • ಅತಿಯಾದ ಎಣ್ಣೆ ಅಂಶ ಇರುವ ಆಹಾರಗಳ ಸೇವನೆ
  • ಅತಿಯಾದ ಕಾಫೀ- ಟೀ ಕುಡಿಯುವುದು
  • ನಾರಿನಂಶವಿರುವ ಆಹಾರವನ್ನು ಸೇವಿಸದಿರುವುದು
  • ಒತ್ತಡದ ಜೀವನಶೈಲಿ
  • ಸರಿಯಾಗಿ ನಿದ್ದೆ ಮಾಡದೇ ಇರುವುದು

ಈರುಳ್ಳಿಯ ಪ್ರಯೋಜನಗಳು

See the source image

  • ಈರುಳ್ಳಿಗಳಲ್ಲಿ ಬಹಳಷ್ಟು ಪೌಷ್ಟಿಕಾಂಶಗಳು ಹೇರಳವಾಗಿ ಕಂಡುಬರುತ್ತದೆ, ಆದರೆ ಜನರು ಮಾತ್ರ ಹಸಿ ಈರುಳ್ಳಿ ಸೇವನೆಗೆ ಮುಂದಾಗುವುದಿಲ್ಲ. ಏಕೆಂದರೆ ಅದರ ರುಚಿ ಮತ್ತು ವಾಸನೆ ಅಷ್ಟಾಗಿ ಹಿಡಿಸುವುದಿಲ್ಲ. ಆದ್ರೆ ನಿಮಗೆ ಗೊತ್ತಿರಲಿ, ಕೆಲವೊಂದು ಆಹಾರ ಸಾಮಗ್ರಿಗಳು ಬಹಳಷ್ಟು ವಿಶಿಷ್ಟವಾದ ಸ್ಥಾನದಲ್ಲಿ ನಿಲ್ಲುತ್ತವೆ ಎಂಬುದನ್ನು ಮೊದಲು ತಿಳಿಯಬೇಕು. ಅದರಲ್ಲಿ ಈರುಳ್ಳಿ ಸಹ ಒಂದು.
  • ಹೌದು ಈರುಳ್ಳಿಯಲ್ಲಿ ಕಂಡುಬರುವ ಔಷಧೀಯ ಗುಣಗಳಾದ ಆಂಟಿ ಆಕ್ಸಿಡೆಂಟ್ ಹಾಗೂ ಆಂಟಿ ಇನ್ಫಾಮೇಟರಿ ಅಂಶಗಳು, ಮನುಷ್ಯನ ರಕ್ತ ಸಂಚಾರದಲ್ಲಿ ಏರುಪೇರಾಗದಂತೆ ನೋಡಿಕೊಂಡು, ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕೂಡ ನಿಯಂತ್ರಿಸಿ, ಹೃದಯದ ಆರೋಗ್ಯವನ್ನು ಉತ್ತಮವಾಗಿ ನಿರ್ವಹಣೆ ಮಾಡುವಂತಹ ಶಕ್ತಿ ಈರುಳ್ಳಿಗಿದೆ.
  • ಅದರಲ್ಲೂ ಸಣ್ಣ ತುಂಡು ಈರುಳ್ಳಿ ಮತ್ತು ಬೆಲ್ಲವನ್ನು ಪ್ರತಿ ದಿನ ತಿನ್ನುವ ಅಭ್ಯಾಸ ಮಾಡಿ ಕೊಂಡರೆ ರಕ್ತದೊತ್ತಡದ ಸಮಸ್ಯೆ ನಿಯಂತ್ರಣಕ್ಕೆ ಬಂದು ಹೃದಯದ ಆರೋಗ್ಯ ಚೆನ್ನಾಗಿರುತ್ತದೆ.

ಬಿಪಿ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ...

See the source image

 

  • ಅಧ್ಯಾಯಾನ ವರದಿಯ ಪ್ರಕಾರ ಈರುಳ್ಳಿಯಲ್ಲಿ ಔಷಧೀಯ ಗುಣಲಕ್ಷಣಗಳು ಹೊಂದಿರುವ ಕ್ವಾರ್ಸಿಟಿನ್ ಎಂಬ ಆಂಟಿ ಆಕ್ಸಿಡೆಂಟ್ ಅಂಶ ಹೇರಳವಾಗಿ ಕಂಡುಬರುತ್ತದೆ. ಇದು ವಿಶೇಷವಾಗಿ ರಕ್ತದ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಾಯಕ್ಕೆ ನಿಲ್ಲುತ್ತದೆ
  • ಇದರಿಂದಾಗಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ನಿಯಂತ್ರಣಕ್ಕೆ ಬಂದು, ಹೃದಯದ ಸಮಸ್ಯೆಗಳು ಕೂಡ ಕಮ್ಮಿ ಆಗುತ್ತಾ ಹೋಗುತ್ತದೆ. ಅಷ್ಟೇ ಅಲ್ಲದೇ ಹೃದಯ ಬಡಿತ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ.

ಬೇಯಿಸಿ ತಿನ್ನುವುದರ ಬದಲು ಹಸಿಯಾಗಿ ತಿನ್ನಿ! 

See the source image

  • ಅಧ್ಯಯನದಲ್ಲಿ ಹೇಳಿರುವ ಹಾಗೆ ಈರುಳ್ಳಿಯನ್ನು ಬೇಯಿಸಿ ಅಥವಾ ಎಣ್ಣೆಯಲ್ಲಿ ಕರಿದು ತಿನ್ನುವ ಅಭ್ಯಾಸ ಬದಲು, ಹಸಿಯಾಗಿ ಅದನ್ನು ಸೇವಿಬೇಕಂತೆ! ಯಾಕೆಂದರೆ ಯಾವುದೇ ಒಂದು ತರಕಾರಿಗೆ ಬಿಸಿಯ ತಾಪಮಾನ ಸೋಕಿದರೆ, ಅದರಲ್ಲಿನ ಕೆಲವೊಂದು ಅಂಶಗಳು ನಶಿಸುತ್ತವೆ. ಇದಕ್ಕೆ ಈರುಳ್ಳಿ ಕೂಡ ಹೊರತಲ್ಲ!
  • ಇನ್ನು ಇದನ್ನು ಸಾಬೀತು ಪಡಿಸುವುದಕ್ಕಾಗಿ ಇಲಿಗಳ ಮೇಲೆ ಪ್ರಯೋಗ ಮಾಡಿದ ಸಮಯದಲ್ಲಿ ಇದು ಸಂಶೋಧಕರಿಗೆ ತಿಳಿದುಬಂದ ಕಾರಣ ಬೇಯಿಸಿದ ಈರುಳ್ಳಿ ರಕ್ತದ ಒತ್ತಡದ ನಿಯಂತ್ರಣ ದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂಬುದನ್ನು ತಿಳಿಸಿದ್ದಾರೆ.
  • ಹೀಗಾಗಿ ಸಣ್ಣ ತುಂಡು ಈರುಳ್ಳಿಯನ್ನು ಕಟ್ ಮಾಡಿಕೊಂಡು, ಮಿತವಾಗಿ ಸೇವನೆ ಮಾಡುವು ದರಿಂದ ರಕ್ತದ ಒತ್ತಡದ ಸಮಸ್ಯೆ ನಿಮ್ಮಿಂದ ದೂರ ಇರುವುದು

​ಮೊಸರಿನ ಜೊತೆ

See the source image

  • ಡೈರಿ ಉತ್ಪನ್ನವಾದ ಮೊಸರಿನ ಆರೋಗ್ಯ ಪ್ರಯೋಜನಗಳು ನಮಗೆ ಗೊತ್ತೇ ಇದೆ, ಅದರಲ್ಲೂ ಬೇಸಿಗೆಯಲ್ಲಿ ಊಟದ ಜೊತೆಗೆ ಮೊಸರನ್ನು ಸೇರಿಸುವುದರಿಂದ ನಮಗೆ ತುಂಬಾ ಅನುಕೂಲಕರ ವಾಗಲಿದೆ. ಹೀಗಾಗಿ ಸ್ವಲ್ಪ ಮೊಸರಿನ ಜೊತೆ ಕೂಡ ಒಂದು ಸಣ್ಣ ತುಂಡು ಹೆಚ್ಚಿದ ಈರುಳ್ಳಿಯನ್ನು ಮಿಕ್ಸ್ ಮಾಡಿ ಸೇವನೆ ಮಾಡಬಹುದು.
  • ನೆನಪಿಡಿ ಇವೆಲ್ಲಾ ಜಸ್ಟ್ ಮನೆಮದ್ದುಗಳು ಅಷ್ಟೇ, ಹಾಗಾಗಿ ಹಸಿ ಈರುಳ್ಳಿ ಸೇವನೆ ಮಾಡಿಕೊಂಡು ರಕ್ತದ ಒತ್ತಡವನ್ನು ನಿಯಂತ್ರಣ ಮಾಡಿಕೊಳ್ಳುತ್ತೇವೆ ಎನ್ನುವ ಬಲವಾದ ನಂಬಿಕೆ ಬೇಡ.
  • ವೈದ್ಯರು ರಕ್ತದ ಒತ್ತಡದ ನಿಯಂತ್ರಣಕ್ಕೆ ನೀಡಿರುವ ಔಷಧಿಗಳನ್ನು ತಪ್ಪದೇ ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಿ ಹಾಗೂ ಸರಿಯಾದ ಜೀವನಶೈಲಿ ಹಾಗೂ ಆಹಾರ ಪದ್ಧತಿಯನ್ನು ಅನುಸರಿಸಿ.

Impressive Health Benefits Of Raw Onions To Control Blood Pressure.