ಕಲ್ಲಂಗಡಿ ಹಣ್ಣಿನ ಬೀಜಗಳಲ್ಲಿ ಎಂತಹ, ಆರೋಗ್ಯದ ಪವರ್ ಇದೆ ಗೊತ್ತಾ?

04-04-22 08:16 pm       Source: Vijayakarnataka   ಡಾಕ್ಟರ್ಸ್ ನೋಟ್

ಅಬ್ಬರಿಸಿ ಬರುವ ಅಷ್ಟೋ ಇಷ್ಟೋ ಪೌಷ್ಟಿಕಾಂಶಗಳನ್ನು ಏಕೆ ಬಿಡಬೇಕು ಅಲ್ಲವೇ! ಕಲ್ಲಂಗಡಿ ಹಣ್ಣಿನ ಬೀಜಗಳಲ್ಲಿ ನಿಮ್ಮ ಊಹೆಗೂ ಮೀರಿದ ಅತ್ಯುತ್ತಮ ಆರೋಗ್ಯದ ಲಾಭಗಳಿವೆ...

ಇದು ಹೇಳಿ ಕೇಳಿ ಬೇಸಿಗೆ ಸೀಸನ್. ಈಗ ಎಲ್ಲಿ ನೋಡಿದರೂ ಕಲ್ಲಂಗಡಿ ಹಣ್ಣಿನ ಕಲರವ! ಅವುಗಳ ಮಾರಾಟ, ಕೊಂಡುಕೊಳ್ಳುವುದು ಎಲ್ಲವೂ ಭರ್ಜರಿಯಾಗಿ ನಡೆಯುತ್ತಿದೆ. ಬಿಸಿಲಿನ ಬೇಗೆಗೆ ಶರಣಾಗಿ ನಾವು ಕೂಡ ಮನೆಗೆ ಬೇರೆಯವರಂತೆ ಕಲ್ಲಂಗಡಿ ಹಣ್ಣನ್ನು ಏಕೆ ತೆಗೆದು ಕೊಂಡು ಹೋಗಬಾರದು ಎಂದು ಆಲೋಚನೆ ಮಾಡುತ್ತೇವೆ.

ಆದರೆ ಮನೆಗೆ ಬಂದ ನಂತರ ಕಲ್ಲಂಗಡಿ ಹಣ್ಣಿನಿಂದ ಬೀಜಗಳನ್ನು ಬೇರ್ಪಡಿಸಿ ಹೊರಗಡೆ ಬಿಸಾಡಿ ಹಣ್ಣು ತಿನ್ನುತ್ತೇವೆ. ಆದರೆ ಕಲ್ಲಂಗಡಿ ಹಣ್ಣಿನ ಬೀಜಗಳ ಮಹತ್ವ ನಮಗೆ ಗೊತ್ತೇ ಇಲ್ಲ. ಬನ್ನಿ ಇಲ್ಲಿ ಅವುಗಳ ವಿವಿಧ ಆರೋಗ್ಯ ಪ್ರಯೋಜನಗಳ ಬಗ್ಗೆ ಮಾಹಿತಿ ಕಲೆ ಹಾಕೋಣ...

ಹೃದಯಕ್ಕೆ ತುಂಬಾ ಒಳ್ಳೆಯದಂತೆ!

foods that cause heart disease: ಹೃದಯದ ಕಾಯಿಲೆ ಇರುವವರು ಈ ಆಹಾರಗಳನ್ನು  ಕಡೆಗಣಿಸಲೇಬೇಕು! - Vijaya Karnataka

ಕಲ್ಲಂಗಡಿ ಹಣ್ಣಿನ ಬೀಜಗಳಲ್ಲಿ ಮೆಗ್ನೀಷಿಯಂ ಅಂಶಕ್ಕೆ ಯಾವುದೇ ಕೊರತೆಯಿಲ್ಲ. ಇದು ಹೃದಯದ ಕಾರ್ಯ ಚಟುವಟಿಕೆಯನ್ನು ಉತ್ತಮ ಪಡಿಸುವುದು ಮಾತ್ರವಲ್ಲದೆ ರಕ್ತದ ಒತ್ತಡವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತದೆ.
ಪ್ರಮುಖವಾಗಿ ಕಂಡು ಬರುವ ಆಂಟಿ ಆಕ್ಸಿಡೆಂಟ್ ಅಂಶಗಳು ಮತ್ತು ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳು ಹೃದಯದ ಆರೋಗ್ಯ ವನ್ನು ನೋಡಿಕೊಂಡರೆ, ರಕ್ತದ ಒತ್ತಡ ಕೂಡ ಪರೋಕ್ಷವಾಗಿ ಮತ್ತು ಅಚ್ಚುಕಟ್ಟಾಗಿ ನಿರ್ವಹಣೆಯಾಗುತ್ತದೆ. ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಿರುವ ದೇಹದಲ್ಲಿ ಎಲೆಕ್ಟ್ರೋಲೈಟ್ ಅಂಶಗಳ ಬ್ಯಾಲೆನ್ಸ್ ತಪ್ಪಿದ ಜನರಿಗೆ ಕಲ್ಲಂಗಡಿ ಹಣ್ಣಿನ ಬೀಜಗಳು ಒಂದು ರೀತಿಯ ವರದಾನವಿದ್ದಂತೆ!

ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

A Smile Helps Boost Your Immune System | Dental Image

  • ಕಾಯಿಲೆಗಳು ಬರುವಂತಹ ಸಂದರ್ಭದಲ್ಲಿ, ನಮ್ಮ ರೋಗನಿರೋಧಕ ಶಕ್ತಿ ಒಂದು ಬಲವಾಗಿದ್ದರೆ, ಯಾವುದೇ ಸೋಂಕುಗಳು ಅಥವಾ ಸೋಂಕು ಕಾರಕ ಕ್ರಿಮಿಗಳು ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ.
  • ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಹುರಿದು ತಿನ್ನುವುದರಿಂದ ಅವುಗಳಲ್ಲಿ ಕಂಡುಬರುವ ಕಬ್ಬಿಣದ ಅಂಶ ಮತ್ತು ವಿಟಮಿನ್ ಬಿ ಅಂಶ ದೇಹಕ್ಕೆ ಸಿಗುತ್ತದೆ. ನಿಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗಲು ನೆರವಾಗುತ್ತದೆ. ನಿಮಗೆ ಅಲರ್ಜಿ ಸಮಸ್ಯೆ ಏನಾದರೂ ಇದ್ದರೆ ಅದಕ್ಕೆ ಇವುಗಳು ಒಳ್ಳೆಯ ಪರಿಹಾರ.

ಸಕ್ಕರೆ ಕಾಯಿಲೆ ಇರುವವರಿಗೆ ಬೆಸ್ಟ್!

ಪೋಷಕರಲ್ಲಿ ಒಬ್ಬರು ಮಧುಮೇಹಿಗಳಾಗಿದ್ದರೆ, ಮಕ್ಕಳನ್ನೂ ಕಾಡಬಹುದಾ? | If either or both  of the parents have sugar, what is the risk of diabetes

ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಜನರಿಗೆ ಒಂದು ತರಹದ ಶಾಪವೇ ಸರಿ. ಏಕೆಂದರೆ ಅದು ಒಮ್ಮೆ ಬಂದುಬಿಟ್ಟರೆ ಇಡೀ ಜೀವನ ಪರ್ಯಂತ ಅದರ ಜೊತೆ ನರಳಬೇಕಾಗುತ್ತದೆ.
ಆದರೆ ದೇಹದಲ್ಲಿ ಗ್ಲೈಕೋಜನ್ ಅಂಶವನ್ನು ಕಡಿಮೆ ಮಾಡಿಕೊಳ್ಳುತ್ತಾ ಹೋದರೆ, ಕ್ರಮೇಣವಾಗಿ ಮಧುಮೇಹ ಸಮಸ್ಯೆಯಿಂದ ತಾತ್ಕಾಲಿಕವಾಗಿ ಮುಕ್ತಿ ಪಡೆದುಕೊಳ್ಳಬಹುದು. ಇರಾನ್ ದೇಶದ ಅಧ್ಯಯನವೊಂದು ಹೇಳುವ ಹಾಗೆ ಕಲ್ಲಂಗಡಿ ಹಣ್ಣಿನ ಬೀಜಗಳಲ್ಲಿ ಒಮೆಗಾ ಫ್ಯಾಟಿ ಆಮ್ಲಗಳು ಸಾಕಷ್ಟು ಕಂಡುಬರುತ್ತವೆ. ಇವುಗಳು ಜಿಂಕ್ ಅಂಶಗಳ ಸಹಿತ ಗ್ಲೈಸೆಮಿಕ್ ನಿಯಂತ್ರಣ ಮಾಡುತ್ತವೆ. ಇದರಿಂದ ಕ್ರಮೇಣವಾಗಿ ನಿಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ.

ಮೆದುಳಿನ ಆರೋಗ್ಯ ಅಭಿವೃದ್ಧಿಯಾಗುತ್ತದೆ

ನವ ಕರ್ನಾಟಕ: 2014

  • ಒಂದು ಪ್ರಮುಖ ಅಧ್ಯಯನ ಹೇಳುವಂತೆ, ನಾವು ಹೆಚ್ಚಾಗಿ ಮೆಗ್ನೀಷಿಯಂ ಅಂಶವನ್ನು ನಮ್ಮ ದೇಹಕ್ಕೆ ಸೇರಿಸುತ್ತಾ ಹೋದರೆ, ವಯಸ್ಸಾದಂತೆ ಎದುರಾಗುವ ನೆನಪಿನ ಶಕ್ತಿಯ ಕೊರತೆ ಸಮಸ್ಯೆ ಬರುವುದಿಲ್ಲ ಹಾಗೂ ಆರಂಭದಿಂದಲೇ ಕಡಿಮೆಯಾಗುತ್ತ ಹೋಗುತ್ತದೆ.
  • ಓದುವ ಮಕ್ಕಳಿಗೂ ಕೂಡ ಇದು ಅನುಕೂಲಕರ. ಹಾಗಾಗಿ ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಹುರಿದು ಆಗಾಗ ಸೇವನೆ ಮಾಡುವುದರಿಂದ ಇಂತಹ ಸಾಕಷ್ಟು ಉಪಯೋಗ ಕಂಡು ಕೊಳ್ಳಬಹುದು.

ಜೀರ್ಣಾಂಗ ವ್ಯವಸ್ಥೆ ವೃದ್ಧಿಸುತ್ತದೆ

ಶ್ವಾಸಕೋಶದ ಕ್ಯಾನ್ಸರ್ ಕ್ರಮೇಣ ಪರಿಹಾರ ನೀಡುತ್ತೆ ಮಾರ್ಷ್ಮೆಲ್ಲೋ ಗಿಡಮೂಲಿಕೆ |  Marshmallow Root Health Benefits, Dosage, Side Effects and Marshmallow Tea  Recipe in Kannada - Kannada BoldSky

  • ಕಲಂಗಡಿ ಹಣ್ಣಿನ ಬೀಜಗಳಲ್ಲಿ ಜಿಂಕ್ ಪ್ರಮಾಣ ಸಾಕಷ್ಟಿದೆ. ದೇಹದಲ್ಲಿ ಜಿಂಕ್ ಕೊರತೆ ಉಂಟಾದರೆ ಅದರಿಂದ ಜೀರ್ಣಾಂಗ ವ್ಯವಸ್ಥೆಗೆ ತೊಂದರೆ ಕಟ್ಟಿಟ್ಟ ಬುತ್ತಿ.
  • ಇದರಿಂದ ಕರುಳಿಗೆ ಸಂಬಂಧಪಟ್ಟ ಸಮಸ್ಯೆಗಳು ಸಹ ಕಾಣಿಸುವ ಸಾಧ್ಯತೆ ಇದೆ. ಆದರೆ ಮೆಗ್ನೀಷಿಯಂ ಮತ್ತು ಜಿಂಕ್ ಅಂಶ ಹೆಚ್ಚಾಗಿರುವ ಕಲ್ಲಂಗಡಿ ಹಣ್ಣಿನ ಬೀಜಗಳು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಅಭಿವೃದ್ಧಿ ಮಾಡುತ್ತವೆ.

ವಯಸ್ಸಾಗುವಿಕೆ ಸಮಸ್ಯೆಗೆ ಉತ್ತಮ ಪರಿಹಾರ

ಅಧ್ಯಯನಗಳು ಹೇಳುವಂತೆ ಮೆಗ್ನೀಷಿಯಂ ಅಂಶ ನಿಮ್ಮ ವಯಸ್ಸಾಗುವಿಕೆ ಪ್ರಕ್ರಿಯೆಗೆ ಕಡಿವಾಣ ಹಾಕುತ್ತದೆ. ಕಲ್ಲಂಗಡಿ ಬೀಜಗಳಲ್ಲಿ ಕಂಡು ಬರುವ ಗುಣಲಕ್ಷಣಗಳು ಕ್ರಮೇಣವಾಗಿ ನಿಮ್ಮ ಮುಖದ ಮೇಲೆ ಸುಕ್ಕುಗಳು ಕಂಡುಬರುವುದು, ಚರ್ಮದ ಮೇಲೆ ಗೆರೆಗಳು ಕಾಣಿಸುವುದು ಇತ್ಯಾದಿ ತೊಂದರೆಗಳನ್ನು ಪರಿಹಾರ ಮಾಡುತ್ತವೆ.

Know The Magical Health Benefits Of Watermelon Seeds, It Will Surprise You.