ಈ ವಿಷ್ಯ ಗೊತ್ತಾದ ಬಳಿಕ, ಹೀರೆಕಾಯಿ ತಿನ್ನದವರು, ಕೂಡ ಇಷ್ಟಪಟ್ಟು ತಿನ್ನುತ್ತಾರೆ!

25-04-22 08:39 pm       Source: Vijayakarnataka   ಡಾಕ್ಟರ್ಸ್ ನೋಟ್

ಹೀರೆಕಾಯಿ ಎಂದರೆ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ! ಆದರೆ ಇದರಲ್ಲಿರುವ ಆರೋಗ್ಯಕಾರಿ ಪ್ರಯೋಜನಗಳು ಗೊತ್ತಾದರೆ, ದಿನಾ ಇಷ್ಟ ಪಟ್ಟು ತಿನ್ನುತ್ತಾರೆ

ನಮ್ಮ ಆರೋಗ್ಯವನ್ನು ಸುತ್ತ-ಮುತ್ತಲಿನ ಪ್ರಕೃತಿಯಿಂದಲೇ ಸಿಗುವ ಹಣ್ಣು-ತರಕಾರಿಗಳನ್ನು ಸೇವನೆ ಮಾಡಿಕೊಂಡು, ಆರೋಗ್ಯಕರ ಜೀವನವನ್ನು ನಡೆಸಬಹುದು. ಆದರೆ ಇಂದಿನ ದಿನಗಳಲ್ಲಿ ನಾವೆಲ್ಲಾ ಪಾಶ್ಚಾತ್ಯದ ಆಹಾರಕ್ರಮಗಳ ಮೋಹಕ್ಕೆ ಬಲಿಯಾಗಿ, ಪ್ರಕೃತಿಗೆ ವಿರುದ್ಧವಾಗಿ ಕೆಲ ವೊಂದು ಆಹಾರಗಳ ಸೇವನೆಯಲ್ಲಿ ತೊಡಗಿದ್ದು, ಇಲ್ಲಸಲ್ಲದ ಆರೋಗ್ಯ ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದೇವೆ.. ಇದರಿಂದಾಗಿ ಹಲವಾರು ದೀರ್ಘಕಾಲಿಕ ಸಮಸ್ಯೆಗಳು ನಮ್ಮ ಹಿಂದೆ ಬೀಳಲು ಶುರು ಮಾಡಿಬಿಟಿದೆ

ಇನ್ನು ಕೆಲವೊಂದು ಹಸಿರೆಲೆ-ತರಕಾರಿಗಳಂತೆ, ಹಸಿರು ತರಕಾರಿಗಳು ಕೂಡ, ಮನುಷ್ಯನ ಆರೋ ಗ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇಂತಹ ಒಂದು ತರಕಾರಿಯಲ್ಲಿ ಹೀರೆಕಾಯಿ ಕೂಡ ಒಂದು. ನಾವೆಲ್ಲಾ ಸಣ್ಣವರಿದ್ದಾಗ, ಹಳ್ಳಿಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಹೀರೆಕಾಯಿ ಹಾಗೂ ತೊಂಡೆಕಾಯಿ ಹೆಚ್ಚಾಗಿ ಬೆಳೆಸುತ್ತಿದ್ದರು.

ಅದರಲ್ಲೂ ಮನೆಯಲ್ಲಿ ಕುಚ್ಚಲಕ್ಕಿಯ ಗಂಜಿಯ ಜೊತೆಗೆ ಹೀರೆಕಾಯಿ ಚಟ್ನಿ ಮಾಡಿದರಂತೂ, ಆಹಾ ಸ್ವಗರ್ಕ್ಕೆ ಮೂರೇ ಗೇಣು! ಇನ್ನು ಹೀರೆಕಾಯಿ ಬಳಸಿ ಮಾಡುವ ಸಾಂಬಾರ್, ಬಜ್ಜಿ, ಪಕೋಡ, ಎಲ್ಲವೂ ಕೂಡ ಅಷ್ಟೇ ಬಾಯಿಯಲ್ಲಿ ನೀರೂರಿಸುತ್ತದೆ. ಈ ತರಕಾರಿ ನೋಡಲು ಸ್ವಲ್ಪ ಒರಟಾಗಿ, ಹಾಗೂ ಮೇಲ್ಭಾಗದ ಸಿಪ್ಪೆ ದಪ್ಪಗೆ ಹಾಗೂ ಮುಳ್ಳಿನ ರೀತಿ ಉದ್ದನೆಯ ಬಾಲದ ರೀತಿ ಕಂಡು ಬಂದರೂ ಕೂಡ, ಇದರ ಮೇಲ್ಭಾಗದ ಸಿಪ್ಪೆಯನ್ನು ನಿವಾರಿಸಿ ಒಳಭಾಗದಲ್ಲಿ ಕಂಡುಬರುವ ಮೆತ್ತನೆಯ ತಿರುಳನ್ನು, ಪಲ್ಯ, ಚಟ್ನಿ ಅಥವಾ ಸಾಂಬರ್ ಮಾಡಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ದುಪ್ಪಟ್ಟು ಪ್ರಯೋಜನಗಳನ್ನು ನಿರೀಕ್ಷಿಸಬಹುದು!

ಹೀರೆಕಾಯಿಯಲ್ಲಿ ಸಿಗುವ ಆರೋಗ್ಯಕಾರಿ ಅಂಶಗಳು

Ridge gourd-Rishi

ತನ್ನಲ್ಲಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿಗಳನ್ನು ಹೊಂದಿರುವ ಈ ತರಕಾರಿಯಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಅಂಶ ಕಡಿಮೆ ಇದೆ. ಅಲ್ಲದೇ ಕರಗುವ ನಾರಿನಾಂಶ ಹಾಗೂ ನೀರಿನಾಂಶವನ್ನು ಅಧಿಕ ಪ್ರಮಾಣದಲ್ಲಿ ಒಳಗೊಂ ಡಿದೆ. ಇನ್ನು ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ6, ಕಬ್ಬಿಣಾಂಶ, ಮೆಗ್ನಿಶಿಯಂನ್ನು ಯಥೇಚ್ಛ ವಾಗಿ ಒಳ ಗೊಂಡಿದೆ.

ಕಣ್ಣಿನ ದೃಷ್ಟಿಗೆ

blurry vision exercise: ಇದೇ ಕಾರಣಕ್ಕೆ ಕಣ್ಣಿನ ದೃಷ್ಟಿ ಮಂಜಾಗುವುದು! ಇರಲಿ ಎಚ್ಚರ -  Vijaya Karnataka

  • ಸ್ವತಃ ಕಣ್ಣಿನ ವೈದ್ಯರೇ ಹೇಳುವ ಪ್ರಕಾರ, ಹೀರೆಕಾಯಿ ಹಾಗೂ ಕ್ಯಾರೆಟ್‌ನಲ್ಲಿ ವಿಟಮಿನ್ ' ಎ ' ಅಂಶ ಗಣನೀಯ ಪ್ರಮಾಣದಲ್ಲಿ, ನೈಸರ್ಗಿಕವಾಗಿ ಸಿಗುತ್ತಿರುವುದರಿಂದ, ಈ ಎರಡು ತರಕಾರಿ ಗಳನ್ನು ಮಿತವಾಗಿ ಸೇವಿಸಿದರೆ,ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಂತೆ.
  • ವಿಶೇಷವಾಗಿ ಹೀರೆಕಾಯಿಯಲ್ಲಿ ಸಿಗುವ ಬೀಟಾ-ಕ್ಯಾರೋಟಿನ್ ಎನ್ನುವ ಸಂಯುಕ್ತ ಹಾಗೂ ವಿಟಮಿನ್ ಎ ಅಂಶವು ವಯಸ್ಸಾದವರಲ್ಲಿ ಕಂಡುಬರುವ ಕಣ್ಣಿನ ಪೊರೆಯ ಸಮಸ್ಯೆಯನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಈ ತರಕಾರಿಯಲ್ಲಿ ಉರಿಯೂತ ಸಮಸ್ಯೆಗಳನ್ನು ನಿವಾರಿಸುವ ಗುಣ ಲಕ್ಷಣಗಳು ಸಮೃದ್ಧ ವಾಗಿರುವುದರಿಂದ, ಫ್ರೀ ರಾಡಿಕಲ್‌ಗಳ ಹಾನಿಯಿಂದ ಕಣ್ಣುಗಳ ರಕ್ಷಣೆ ಮಾಡುತ್ತವೆ.

ರಕ್ತಹೀನತೆ ಸಮಸ್ಯೆಗೆ ಒಳ್ಳೆಯದು

ರಕ್ತಹೀನತೆಯ ಲಕ್ಷಣಗಳು, ನೀವು ಎಲ್ಲಾ ಸಮಯದಲ್ಲೂ ದಣಿದ ಮತ್ತು ನಿದ್ರೆಯಲ್ಲಿದ್ದೀರಾ? | ಬೆ  zz ಿಯಾ

  • ಇನ್ನು ಮೊದಲೇ ಹೇಳಿದ ಹಾಗೆ, ಹೀರೆಕಾಯಿಯಲ್ಲಿ ಕಬ್ಬಿಣಾಂಶ ಸಾಕಷ್ಟು ಪ್ರಮಾಣದಲ್ಲಿ ಸಿಗುವುದರಿಂದ ರಕ್ತಹೀನತೆ ಸಮಸ್ಯೆಯನ್ನು ನಿವಾರಿಸಲು ನೆರವಾಗುತ್ತದೆ. ಒಂದು ವೇಳೆ ವೈದ್ಯರು ನಿಮಗೆ ಕಬ್ಬಿಣಾಂಶ ಕಡಿಮೆ ಯಾಗಿ ರಕ್ತಹೀನತೆ ಸಮಸ್ಯೆ ಉಂಟಾಗಿದೆ ಎಂದು ಹೇಳಿದರೆ, ಈ ಸಮಯದಲ್ಲಿ ಮಿತವಾಗಿ ಆಹಾರ ಪದ್ಧತಿ ಯಲ್ಲಿ ಹೀರೆಕಾಯಿ ಬಳಸಿ ಮಾಡಿದ ಸಾಂಬರ್, ಪಲ್ಯ ಅಥವಾ ಸಾಗು ಮಾಡಿಕೊಂಡು, ಸೇವಿಸಬಹುದು.
  • ಇನ್ನೂ ಸಿಹಿ ಸುದ್ದಿ ಅಂದ್ರೆ, ಹೀರೆಕಾಯಿಯಲ್ಲಿ ಕಂಡುಬರುವ ವಿಟಮಿನ್ ಬಿ6 ಎನ್ನುವ ಆರೋಗ್ಯಕಾರಿ ಅಂಶವು, ದೇಹದಲ್ಲಿ ಕಂಡು ಬರುವ ಕೆಂಪು ರಕ್ತ ಕಣಗಳ ಆರೋಗ್ಯವನ್ನು ಕಾಪಾಡುತ್ತದೆ.

ಮಲಬದ್ಧತೆ ಸಮಸ್ಯೆ ಇರುವವರು..

ಬೆಳಿಗ್ಗೆ ಮಲಬದ್ಧತೆ ಸಮಸ್ಯೆ ಕಾಣಿಸಿಕೊಂಡರೆ-ಈ ಮನೆಮದ್ದನ್ನು ಪ್ರಯತ್ನಿಸಿ | Effective  Home Remedies To Treat Constipation - Kannada BoldSky

  • ಮೊದಲನೆಯದಾಗಿ ಹೀರೆಕಾಯಿಯಲ್ಲಿ ನೀರಿನಾಂಶ ಯಥೇಚ್ಛವಾಗಿ ಸಿಗುವುದರಿಂದ, ದೇಹದಲ್ಲಿ ನಿರ್ಜಲೀಕರ ಣದ ಸಮಸ್ಯೆ ಬರದೇ ಇರುವ ಹಾಗೆ ತಡೆಯುತ್ತದೆ. ಅಲ್ಲದೇ ಈ ಸಮಯದಲ್ಲಿ ನಾವು ಸೇವಿಸುವ ಯಾವುದೇ ಆಹಾರ ಪದಾರ್ಥಗಳು ಸರಿಯಾಗಿ ಜೀರ್ಣಮಾಡುವಷ್ಟು ನೀರಿನ ಪ್ರಮಾಣ ವನ್ನು ದೇಹದಲ್ಲಿ ಲಭ್ಯ ಇರುವಂತೆ ನೋಡಿಕೊಳ್ಳುತ್ತದೆ.
  • ಇನ್ನು ತಜ್ಞರು ಹೇಳುವ ಹಾಗೆ ಮಧ್ಯಾಹ್ನ ಊಟ ಮಾಡಿದ ಬಳಿಕ, ಒಂದು ಲೋಟ ಹೀರೆಕಾಯಿ ಜ್ಯೂಸ್‌‌ಗೆ ಒಂದು ಟೀಚಮಚ ಆಗುವಷ್ಟು ಜೇನುತುಪ್ಪ ಮಿಕ್ಸ್ ಮಾಡಿ ಕುಡಿಯುವ ಅಭ್ಯಾಸ ಇಟ್ಟುಕೊಂಡರೆ, ಮಲಬದ್ಧತೆಯ ಸಮಸ್ಯೆ ಕ್ರಮೇಣವಾಗಿ ನಿಯಂತ್ರಣಕ್ಕೆ ಬರುತ್ತದೆಯಂತೆ.

ದೇಹದ ತೂಕ ಕಡಿಮೆ ಮಾಡುತ್ತದೆ

ವ್ಯಾಯಾಮ ಮಾಡದೆಯೂ ದೇಹದ ತೂಕ ಇಳಿಸಿಕೊಳ್ಳಿ: ಇಲ್ಲಿದೆ ಸರಳ ಉಪಾಯ | Weight loss tips  without excercise for maintaing good health | TV9 Kannada

  • ಇನ್ನು ಈಗಾಗಲೇ ಹೇಳಿದ ಹಾಗೆ, ಇದರಲ್ಲಿ ಕ್ಯಾಲೋರಿಗಳ ಪ್ರಮಾಣ ಕಡಿಮೆ ಇರುವುದರ ಜೊತೆಗೆ ಕೊಬ್ಬಿನ ಅಂಶ ಮತ್ತು ಕೊಲೆಸ್ಟ್ರಾಲ್ ಅಂಶ ಕೂಡ ಸಾಕಷ್ಟು ಕಡಿಮೆ ಇದೆ.
  • ಹೀಗಾಗಿ ಮಿತವಾಗಿ ಈ ತರಕಾರಿಯನ್ನು ಬಳಸಿ, ಮಾಡಿದ ಸಾಂಬರ್, ಪಲ್ಯ, ಚಟ್ನಿಯನ್ನು ಮಾಡಿ ಸೇವನೆ ಮಾಡು ವುದರಿಂದ, ಕಟ್ಟ ಕೊಬ್ಬಿನ ಅಂಶಗಳು ದೇಹದಲ್ಲಿ ಶೇಖರಣೆ ಆಗುವುದನ್ನು ತಪ್ಪಿಸಿ, ದೇಹದ ತೂಕ ಇಳಿಸಲು ನೆರವಾಗುತ್ತದೆ.

ಮಧುಮೇಹ ಸಮಸ್ಯೆಯ ಭಯವಿಲ್ಲ!

acupuncture points: ಆಕ್ಯುಪಂಕ್ಚರ್‌ನಿಂದ ಮಧುಮೇಹವನ್ನು ನಿವಾರಣೆ ಮಾಡಿಕೊಳ್ಳಬಹುದೇ ?  - treating diabetes with acupuncture, things you must know | Vijaya  Karnataka

ಕಡಿಮೆ ಕಡಿಮೆ ಕ್ಯಾಲೋರಿ ಹಾಗೂ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿ ಈ ತರಕಾರಿಗಳಲ್ಲಿ ಸಿಗುವುದರಿಂದ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಜೊತೆಗೆ ಮಧುಮೇಹ ಸಮಸ್ಯೆ, ನಿಮ್ಮ ಹತ್ತಿರನೂ ಬಾರದಂತೆ ನೋಡಿಕೊಳ್ಳುತ್ತದೆ.

Add Ridge Gourd In Your Diet To Get Rid From Weight Loss To Control Diabetes.