ಬ್ರೇಕಿಂಗ್ ನ್ಯೂಸ್
13-06-22 10:45 pm Mangalore Correspondent ಕರಾವಳಿ
ಮಂಗಳೂರು, ಜೂನ್ 13: ಮಳಲಿ ಮಸೀದಿಯ ವಿವಾದದ ಕುರಿತು ಮಂಗಳೂರಿನ ಕೋರ್ಟಿನಲ್ಲಿ ಜಟಾಪಟಿ ನಡೆಯುತ್ತಿರುವ ನಡುವಲ್ಲೇ ವಿಶ್ವ ಹಿಂದು ಪರಿಷತ್ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲದೆ, ಮಸೀದಿ ಕಮಿಟಿಯಿಂದ ಸಲ್ಲಿಸಿರುವ ತಡೆಯಾಜ್ಞೆ ತೆರವು ಮತ್ತು ಅರ್ಜಿಯ ಸಿಂಧುತ್ವ ಪ್ರಶ್ನಿಸುವ ಅರ್ಜಿ ಪರಿಗಣಿಸಿ ಮಧ್ಯಂತರ ಆದೇಶ ನೀಡದಂತೆ ಮಂಗಳೂರಿನ ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆ ನೀಡಿದೆ ಎನ್ನುವ ಮಾಹಿತಿ ಲಭಿಸಿದೆ.
ಮಳಲಿ ಪೇಟೆಯ ಜುಮ್ಮಾ ಮಸೀದಿಯ ನವೀಕರಣ ಕಾಮಗಾರಿಗೆ ತಡೆ ವಿಧಿಸಿ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಎಪ್ರಿಲ್ 21ರಂದು ಆದೇಶ ಮಾಡಿತ್ತು. ಆದರೆ ಆ ತಡೆಯನ್ನು ತೆರವುಗೊಳಿಸಬೇಕೆಂದು ಮಸೀದಿ ಕಮಿಟಿ ಪರವಾಗಿ ಅರ್ಜಿ ಸಲ್ಲಿಸಲಾಗಿತ್ತು. ಅಲ್ಲದೆ, ವಿಶ್ವ ಹಿಂದು ಪರಿಷತ್ ಪರ ವಕೀಲರ ಅರ್ಜಿಯನ್ನು 1991ರ ಆರಾಧನಾ ಸ್ಥಳಗಳ ಕಾಯ್ದೆಯಂತೆ ಪರಿಗಣಿಸಬಾರದು. ವಕ್ಫ್ ಆಸ್ತಿಯೆಂದು ಪರಿಗಣಿಸಲ್ಪಟ್ಟ ಮಸೀದಿಯ ಕುರಿತು ಈ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲು ಅವಕಾಶ ಇಲ್ಲ ಎಂದು ಮಸೀದಿ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಅದೇ ಹಿನ್ನೆಲೆಯಲ್ಲಿ ವಕೀಲರು ಪ್ರಬಲ ವಾದ ಮಂಡಿಸಿದ್ದರು.

ಮಂಗಳೂರಿನ ಕೋರ್ಟಿನಲ್ಲಿ ಈ ಕುರಿತು ಎರಡೂ ಕಡೆಗಳಿಂದ ಏಳೆಂಟು ಅರ್ಜಿ ಸಲ್ಲಿಕೆಯಾಗಿರುವುದರಿಂದ ಯಾವ ಅರ್ಜಿಯನ್ನು ಮೊದಲು ಪರಿಗಣಿಸಬೇಕು ಅನ್ನುವ ಬಗ್ಗೆಯೇ ನ್ಯಾಯಾಧೀಶರು ನಿರ್ಧರಿಸಿರಲಿಲ್ಲ. ಇದರ ನಡುವೆ, ಎರಡೂ ಕಡೆಗಳಿಂದ ಭಾರೀ ವಾದ ಮಂಡನೆಯೂ ನಡೆದಿತ್ತು. ಹೀಗಾಗಿ ವಿಶ್ವ ಹಿಂದು ಪರಿಷತ್ ಮುಖಂಡರು ಹೈಕೋರ್ಟಿನಲ್ಲಿ ಹಿರಿಯ ವಕೀಲ ವಿವೇಕ್ ರೆಡ್ಡಿ ಮೂಲಕ ಶುಕ್ರವಾರ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಅನುಸರಿಸಿ ಮಧ್ಯಂತರ ಆದೇಶ ನೀಡಲು ಕೆಳಗಿನ ಕೋರ್ಟಿಗೆ ಅವಕಾಶ ನೀಡಬಾರದು ಎಂದು ವಾದಿಸಿದ್ದರು.

ಮಸೀದಿ ನವೀಕರಣದ ಕಾಮಗಾರಿಯ ತಡೆಯಾಜ್ಞೆ ತೆರವು ಮಾಡಿದಲ್ಲಿ ಕೋರ್ಟಿನಲ್ಲಿ ವಾದಿಸುವುದಕ್ಕೆ ಅರ್ಥ ಇರುವುದಿಲ್ಲ. ಹೀಗಾಗಿ ವಿವಿಧ ಅರ್ಜಿಗಳ ವಿಚಾರಣೆ ಪೂರ್ತಿಯಾಗದ ಹೊರತು ತಡೆಯಾಜ್ಞೆ ತೆರವು ಮಾಡಬಾರದು ಎಂದು ಸೋಮವಾರ ಹೈಕೋರ್ಟಿನಲ್ಲಿ ವಾದಿಸಲಾಗಿತ್ತು. ಅಲ್ಲದೆ, ಮಸೀದಿಯಲ್ಲಿ ದೇಗುಲ ಪತ್ತೆಯಾಗಿರುವ ವಿಚಾರದಲ್ಲಿ ಪರಿಶೀಲನೆಯಾಗಬೇಕು. ಪುರಾತನ ದೇಗುಲವಾಗಿದ್ದರಿಂದ ಅಲ್ಲಿಗೆ ಆರಾಧನಾ ಸ್ಥಳಗಳ ಕಾಯ್ದೆ ಅನ್ವಯ ಆಗಲ್ಲ. ಕೋರ್ಟ್ ಕಮಿಷನ್ ನೇಮಿಸಿ ಪರಿಶೀಲನೆಗೆ ಅವಕಾಶ ನೀಡಬೇಕು. ಅಲ್ಲಿಯ ವರೆಗೆ, ಅರ್ಜಿಯ ಸಿಂಧುತ್ವದ ಬಗ್ಗೆ ಮಧ್ಯಂತರ ಆದೇಶ ನೀಡದಂತೆ ಕೆಳಗಿನ ಕೋರ್ಟಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಮಳಲಿ ಮಸೀದಿ ವಿವಾದ ; ವಕ್ಫ್ ದಾಖಲೆ ಪ್ರಕಾರ ಮಸೀದಿಯೆಂದೇ ಇದೆ, ಸ್ಮಾರಕ ಎನ್ನಲು ನೋಟಿಫಿಕೇಶನ್ ಇಲ್ಲ ಎಂದು ಪ್ರತಿವಾದ
ಮಳಲಿ ಮಸೀದಿ ; ಐತಿಹಾಸಿಕ ಸ್ಮಾರಕವಾಗಿ ಉಳಿಸಿಕೊಳ್ಳಲು ಸರ್ವೆ ಆಗಲೇಬೇಕು – ವಿಎಚ್ ಪಿ ವಕೀಲರ ವಾದ
Malali Mosque temple row enters High court by VHP lawyer. High court orders Mangalore additional court not to permit interim orders to the reconstruction of Mosque at Malali in Mangalore.
17-11-25 07:25 pm
Bangalore Correspondent
ಖರ್ಗೆ ಕೋಟೆಯಲ್ಲಿ ಆರೆಸ್ಸೆಸ್ ಸಂಚಲನ ; ಒಂದೂವರೆ ಕಿಮ...
16-11-25 09:15 pm
ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕೊ...
13-11-25 08:33 pm
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
17-11-25 10:58 pm
HK News Desk
Delhi Blast Probe Widens: ದೆಹಲಿ ಸ್ಫೋಟ ; ಹರ್ಯಾ...
17-11-25 07:33 pm
ಉಮ್ರಾ ಯಾತ್ರೆ ತೆರಳಿದ್ದ ಹೈದ್ರಾಬಾದ್ ಮೂಲದ 45 ಯಾತ್...
17-11-25 06:13 pm
ರಾಜ್ಯದಲ್ಲಿ ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್ ; ಸಿ...
15-11-25 11:12 pm
ದೆಹಲಿ ಕಾರು ಸ್ಫೋಟ ಪ್ರಕರಣ ; ಪಶ್ಚಿಮ ಬಂಗಾಳದಲ್ಲಿ ಮ...
15-11-25 07:09 pm
18-11-25 10:18 pm
Mangaluru Staff
UT Khader, Ullal, Mangalore Dc, Ashwini: ತನ್ನ...
18-11-25 07:03 pm
Mangalore case, Police, Inspector Balakrishna...
18-11-25 11:27 am
ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ...
17-11-25 06:16 pm
ದೇರಳಕಟ್ಟೆ ಕಾಲೇಜಿನ ಕೇರಳ ವಿದ್ಯಾರ್ಥಿ ನಾಪತ್ತೆ ; ಗ...
16-11-25 10:48 pm
18-11-25 09:09 pm
Mangaluru Staff
ರಾಜ್ಯದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ ; ಸ...
18-11-25 11:18 am
ದುಬಾರಿ ಪಾರ್ಸೆಲ್ ಇದೆ, ಕಸ್ಟಮ್ಸ್ ಸುಂಕ ಕಟ್ಟಲು ಹೇಳ...
17-11-25 12:54 pm
ಬೆಳಗಾವಿಯಲ್ಲಿ ಕುಳಿತು ಅಮೆರಿಕನ್ನರಿಗೆ ಗಾಳ ; ಆನ್ಲೈ...
14-11-25 05:32 pm
Ullal News, Animal Attack, Crime, Kumpala: ಕಣ...
14-11-25 11:16 am