ಹತ್ರಾಸ್ ಪ್ರಕರಣ: ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮೊಂಬತ್ತಿ ಜಾಥಾ

03-10-20 11:56 am       Headline Karnataka News Network   ಕರಾವಳಿ

ಹತ್ರಾಸ್ ಜಿಲ್ಲೆಯಲ್ಲಿ ನಡೆದ ಅತ್ಯಾಚಾರವನ್ನು ಖಂಡಿಸಿ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈಯವರ ನೇತೃತ್ವದಲ್ಲಿ ಶುಕ್ರವಾರ ಮೊಂಬತ್ತಿ ಜಾಥಾ ನಡೆಸಿದರು

ಮಂಗಳೂರು, ಅಕ್ಟೋಬರ್.03 : ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದ ದಲಿತ ಯುವತಿ ಅತ್ಯಾಚಾರ ಹಾಗೂ ಅಮಾನವೀಯವಾಗಿ ಆಕೆಯ ಮೃತದೇಹವನ್ನು ಪೊಲೀಸರೇ ಅಂತ್ಯ ಸಂಸ್ಕಾರ ನಡೆಸಿದ ರೀತಿಯನ್ನು ಖಂಡಿಸಿ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈಯವರ  ನೇತೃತ್ವದಲ್ಲಿ ಮೊಂಬತ್ತಿ ಜಾಥಾ ನಡೆಸಿದರು .

ಈ ಕೃತ್ಯವನ್ನು ಉನ್ನತ ಮಟ್ಟದಲ್ಲಿ  ತನಿಖೆ ಮಾಡಿ ಯುವತಿಯ ಕುಟುಂಬದವರಿಗೆ ನ್ಯಾಯ ದೊರಕಿಸಿಕೊಡುವ ಜೊತೆಗೆ ಅಪರಾಧಿಗಳಿಗೆ  ಕಠಿಣ ಶಿಕ್ಷೆ ಕೊಡಿಸುವಂತೆ ಜಿಲ್ಲಾದಿಕಾರಿಗಳ ಮುಖಾಂತರ ಒತ್ತಾಯಿಸಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ ಎಸ್ ಮೊಹಮ್ಮದ್, ಚಂದ್ರ ಪ್ರಕಾಶ್ ಶೆಟ್ಟಿ, ಮಂಜುಳಾ ಮಾವೆ, ತಾಲೂಕು  ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಆಲಿ, ತಾ ಪಂ ಸದಸ್ಯರಾದ ಗಾಯತ್ರಿ ರವೀಂದ್ರ ಸಪಲ್ಯ, ಮತ್ತಿತರ ಅನೇಕ ಕಾರ್ಯಕರ್ತರು ಕ್ಯಾಂಡಲ್ ದೀಪ ಉರಿಸಿ ಬಿ ಸಿ ರೋಡ್ ಕೈಕಂಬದಿಂದ ರಕ್ತೇಶ್ವರಿ ದೇವಸ್ಥಾನದ ಮುಂಭಾಗ ತನಕ ಶಾಂತಿಯುತವಾಗಿ ಸಮಾಜಿಕ ಆಂತರ ಕಾಯ್ದುಕೊಂಡು ಮೊಂಬತ್ತಿ ಜಾಥಾ ನಡೆಸಿದರು