ಬ್ರೇಕಿಂಗ್ ನ್ಯೂಸ್
05-08-22 10:40 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 5: ಹಳೆ ಪೇಪರ್, ಹಳೆ ಕಬ್ಬಿಣ ಅಂತ ಸಿನಿಮಾ ಪದ್ಯ ಕೇಳಿರಬಹುದು. ಹೌದು.. ಈಗ ಹಳೆ ಪೇಪರ್ ಅನ್ನೋದು ಬರೀಯ ಗುಜರಿ ಸರಕಲ್ಲ. ಅತ್ಯಂತ ಬೇಡಿಕೆಯ ವಸ್ತುವಾಗಿದೆ. ತುಂಡು ಪೇಪರನ್ನೂ ಒಟ್ಟು ಮಾಡಿ, ಗುಜರಿಗೆ ಕೊಟ್ಟರೆ ಕೈತುಂಬ ಗಳಿಸುವ ದಿನ ಬಂದಿದೆ. ವರ್ಷದ ಹಿಂದೆ ಕೇವಲ ಕೇಜಿಗೆ 12ರಿಂದ 14 ರೂಪಾಯಿ ಇದ್ದ ಹಳೆ ಪೇಪರ್ ರೇಟು ಒಂದೇ ವರ್ಷದಲ್ಲಿ ದುಪ್ಪಟ್ಟು ಆಗಿದೆ. ಹೀಗಾಗಿ ಮನೆಯಲ್ಲಿ ಅಲ್ಲಲ್ಲಿ ಬೀಸಾಕುತ್ತಿದ್ದ ಹಳೆ ಪತ್ರಿಕೆಯನ್ನೆಲ್ಲ ಜನರು ಜೋಪಾನ ಇಟ್ಟುಕೊಳ್ಳಲು ತೊಡಗಿದ್ದಾರೆ.
ವರ್ಷದ ಹಿಂದೆ ನ್ಯೂಸ್ ಪ್ರಿಂಟ್ ದರವು ಕೇಜಿಗೆ 35 ರೂಪಾಯಿ ಇತ್ತು. ಈಗ ಅದರ ರೇಟು ಕೇಜಿಗೆ 80ರಿಂದ 90 ರೂಪಾಯಿ ಆಗಿದೆ. ನ್ಯೂಸ್ ಪ್ರಿಂಟ್ ದರ ಹೆಚ್ಚಿರುವುದರಿಂದ ಸಹಜವಾಗೇ ಹಳೆ ಪತ್ರಿಕೆಗಳ ದರವೂ ಹೆಚ್ಚಿದೆ. ಇಲ್ಲಿ ರೇಟ್ ಏರುವುದಕ್ಕೂ ಯುಕ್ರೇನ್- ರಷ್ಯಾ ಯುದ್ಧಕ್ಕೂ ತಾಳೆಯಿದೆ. ಅಲ್ಲಿನ ಯುದ್ಧದ ಕಾರಣ ಚೀನಾದಿಂದ ಬರುತ್ತಿದ್ದ ನ್ಯೂಸ್ ಪ್ರಿಂಟ್ ಕಡಿತಗೊಂಡಿದೆ. ಹೀಗಾಗಿ ಪೇಪರ್ ಮಿಲ್ ಗಳು ನ್ಯೂಸ್ ಪ್ರಿಂಟ್ ದರವನ್ನೂ ಒಮ್ಮೆಲೇ ಏರಿಸಿದೆ. ಇದರಿಂದಾಗಿ ಹಳೆ ಪತ್ರಿಕೆಯ ದರವೂ ಏರತೊಡಗಿದೆ.
ಗುಜರಿ ವ್ಯಾಪಾರಿಗಳು ಮನೆಗಳಿಂದ ಕೇಜಿಗೆ 25-26 ರೂಪಾಯಿ ಕೊಟ್ಟು ಖರೀದಿಸುವ ಹಳೆ ಪತ್ರಿಕೆಯನ್ನು ಎರಡು ರೂ. ಹೆಚ್ಚಿಗೆ ದರ ಪಡೆದು ನೇರವಾಗಿ ಪೇಪರ್ ಮಿಲ್ ಗಳಿಗೆ ಸಪ್ಲೈ ಮಾಡುತ್ತಾರೆ. ಮಿಲ್ ಗಳಲ್ಲಿ ಅದನ್ನು ರಿ ಸೈಕಲ್ ಮಾಡಿ, ಮತ್ತೆ ನ್ಯೂಸ್ ಪ್ರಿಂಟ್ ಆಗಿಸಿ ಕೇಜಿಗೆ 60 ರೂ.ಗೆ ಮಾರುತ್ತಾರೆ. ಹಳೆ ಪತ್ರಿಕೆ, ಹಳೆ ನೋಟ್ ಬುಕ್ಸ್ ಇವೆಲ್ಲದಕ್ಕೂ ಈಗ ಭಾರೀ ಡಿಮ್ಯಾಂಡ್ ಆಗಿದೆ. ಹಿಂದೆಲ್ಲಾ ಇಂಗ್ಲಿಷ್ ಹಳೆ ಪತ್ರಿಕೆಗಳಿಗೆ ಹೆಚ್ಚು ರೇಟ್ ಇತ್ತು. ಈಗ ಕನ್ನಡ- ಇಂಗ್ಲಿಷ್ ಎಲ್ಲ ಪತ್ರಿಕೆ, ಪುಸ್ತಕಕ್ಕೂ ಒಂದೇ ರೇಟಲ್ಲಿ ಗುಜರಿ ವ್ಯಾಪಾರಿಗಳು ಖರೀದಿಸುತ್ತಾರೆ. ಒಟ್ನಲ್ಲಿ ಯುಕ್ರೇನಲ್ಲಿ ಯುದ್ಧ ಆಗಿರುವುದು ಗುಜರಿ ಪತ್ರಿಕೆಗಳಿಗೆ ಡಿಮ್ಯಾಂಡ್ ಆಗುವಂತಾಗಿದೆ.
The demand for old newspapers and scrap paper has risen in the market. While old newspapers are being bought at up to Rs 26 a kilo, the price is likely to go up further. Last year, old newspapers were bought at Rs 12 to 15 a kilo which has now doubled. While households are carefully staking up old newspapers at home, scrap vendors have become equally careful in keeping the scrap paper intact.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm