ಕಲ್ಲಾಪಿನಲ್ಲಿ ಲಾರಿಯ ಧಾವಂತಕ್ಕೆ ಪಾದಚಾರಿ ಬಲಿ ; ಮಾರ್ಕೆಟ್ ತೆರಳುತ್ತಿದ್ದವನಿಗೆ ಯಮನಾಗಿ ಕಾಡಿದ ಲಾರಿ ! 

03-09-22 11:26 am       Mangalore Correspondent   ಕರಾವಳಿ

ಸರಕು ಹೊತ್ತ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮಾರ್ಕೆಟ್ ಗೆ ಕೆಲಸಕ್ಕೆ ತೆರಳುತ್ತಿದ್ದ ಪಾದಚಾರಿ ಮೃತಪಟ್ಟ ಘಟನೆ ರಾ.ಹೆ.66 ರ ಕಲ್ಲಾಪು ಎಂಬಲ್ಲಿ ನಡೆದಿದೆ. 

ಉಳ್ಳಾಲ, ಆ.3 : ಸರಕು ಹೊತ್ತ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮಾರ್ಕೆಟ್ ಗೆ ಕೆಲಸಕ್ಕೆ ತೆರಳುತ್ತಿದ್ದ ಪಾದಚಾರಿ ಮೃತಪಟ್ಟ ಘಟನೆ ರಾ.ಹೆ.66 ರ ಕಲ್ಲಾಪು ಎಂಬಲ್ಲಿ ನಡೆದಿದೆ. 

ಮೃತರನ್ನು ಮಂಗಳೂರು ಬೆಂಗರೆ ನಿವಾಸಿ ನಿಯಾಝ್ ಬಾವ ( 48) ಎಂದು ಗುರುತಿಸಲಾಗಿದೆ.ಕಲ್ಲಾಪುವಿನ ಗ್ಲೋಬಲ್ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಇಂದು ಬೆಳಗ್ಗಿನ ಜಾವ 4.10ರ ಸುಮಾರಿಗೆ ಪ್ರಸ್ತುತ ಅವರು ನೆಲೆಸಿರುವ ಕಲ್ಲಾಪುವಿನಲ್ಲಿರುವ ಮನೆಯಿಂದ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸರಕು ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. 

ಲಾರಿಯ ಆಕ್ಸಿಲ್ ಮುರಿದು ಅಥವಾ ಟೈರ್ ಸ್ಫೋಟಗೊಂಡು ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಮೂಲತಃ ಮಂಗಳೂರು ಬೆಂಗರೆ ನಿವಾಸಿಯಾಗಿದ್ದ ನಿಯಾಝ್ ಬಾವ ಅವರು  ಕಲ್ಲಾಪುವಿನ ಸರ್ವಿಸ್ ಸ್ಟೇಷನ್ ಹಿಂದಿನ ಬಾಡಿಗೆ  ಮನೆಯಲ್ಲಿ ಕುಟುಂಬ ಸಮೇತ ನೆಲೆಸಿದ್ದರು. ಘಟನೆ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ನಡೆದಾಕ್ಷಣ ಲಾರಿ ಚಾಲಕ ಪರಾರಿಯಾಗಿದ್ದು, ಕ್ಲೀನರನ್ನ ಪೊಲೀಸರು ವಶಕ್ಕೆ ತೆಗೆದಿದ್ದಾರೆ.

Accident Pedestrian dies after speeding truck rams at him in Kallapu in Mangalore. The deceased has been identified as Nizamudin (48).