ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜನರಲ್ ಮ್ಯಾನೇಜರ್ ಹುದ್ದೆಗೆ ಮೊಳಹಳ್ಳಿ ಜಗನ್ನಾಥ ಶೆಟ್ಟಿ ಪದೋನ್ನತಿ

03-09-22 10:02 pm       Udupi Correspondent   ಕರಾವಳಿ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಮ್ಯಾನೇಜರ್ ಆಗಿ ಮೊಳಹಳ್ಳಿ ಜಗನ್ನಾಥ ಶೆಟ್ಟಿ ಪದೋನ್ನತಿ ಪಡೆದಿದ್ದಾರೆ.

ಉಡುಪಿ, ಸೆ.3 : ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಮ್ಯಾನೇಜರ್ ಆಗಿ ಮೊಳಹಳ್ಳಿ ಜಗನ್ನಾಥ ಶೆಟ್ಟಿ ಪದೋನ್ನತಿ ಪಡೆದಿದ್ದಾರೆ.

ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಕೆಲಬಕ್ಕಾಡಿಮನೆ ದಿ. ಮಂಜಯ್ಯ ಶೆಟ್ಟಿ-ಸಾದಮ್ಮ ಶೆಡ್ತಿ ದಂಪತಿಯ ಪುತ್ರರಾಗಿರುವ ಜಗನ್ನಾಥ ಶೆಟ್ಟಿ ಕೃಷಿ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. 1989ರಲ್ಲಿ ಕಾರ್ಪೊರೇಶನ್ ಬ್ಯಾಂಕಿನಲ್ಲಿ ಕೃಷಿ ಅಧಿಕಾರಿಯಾಗಿ ಸೇರಿದ್ದ ಜಗನ್ನಾಥ ಶೆಟ್ಟಿ, ಗಿರಿಸಾಗರ, ಚಿಕ್ಕಮಗಳೂರು, ಸಕಲೇಶಪುರ, ಸಾಂಗ್ಲಿ, ಅಂಬಲಪಾಡಿ, ಉಡುಪಿ, ಮಂಗಳೂರು, ಮುಂಬೈನ ಕಚೇರಿಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. 2019ರಿಂದ 2022ರ ಮೇ ತಿಂಗಳ ವರೆಗೆ ಬೆಂಗಳೂರು ಪೂರ್ವ ಕ್ಷೇತ್ರೀಯ ಕಚೇರಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.

ಇದೀಗ ಜನರಲ್ ಮ್ಯಾನೇಜರ್ ಆಗಿ ಪದೋನ್ನತಿಗೊಂಡು ಬ್ಯಾಂಕಿನ ಕೇಂದ್ರೀಯ ಕಚೇರಿ ಹೈದರಾಬಾದಿನ ಆನೆಕ್ಸ್ ಇಲ್ಲಿ ಆರ್ಥಿಕ ಸೇರ್ಪಡೆ ವಿಭಾಗದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

Udupi Jagannath shetty appointed as union bank of india general manager.