ಐವರ್ನಾಡಿನಲ್ಲಿ ಬೆಂಕಿ ಆಕಸ್ಮಿಕ ; ಮನೆಯಲ್ಲಿ ಮಲಗಿದ್ದ ವ್ಯಕ್ತಿ ಸಜೀವ ದಹನ

07-09-22 05:56 pm       Mangalore Correspondent   ಕರಾವಳಿ

ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಮನೆಯೊಳಗಿದ್ದ ವ್ಯಕ್ತಿಯೊಬ್ಬರು ಸಜೀವ ದಹನಗೊಂಡ ಘಟನೆ ಐವರ್ನಾಡಿನಲ್ಲಿ ನಡೆದಿದೆ. ಐವರ್ನಾಡು ಗ್ರಾಮದ ಪರ್ಲಿಕಜೆ ನಿವಾಸಿ ಸುಧಾಕರ (47) ಮೃತ ವ್ಯಕ್ತಿ.

ಸುಳ್ಯ, ಸೆ.7: ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಮನೆಯೊಳಗಿದ್ದ ವ್ಯಕ್ತಿಯೊಬ್ಬರು ಸಜೀವ ದಹನಗೊಂಡ ಘಟನೆ ಐವರ್ನಾಡಿನಲ್ಲಿ ನಡೆದಿದೆ. ಐವರ್ನಾಡು ಗ್ರಾಮದ ಪರ್ಲಿಕಜೆ ನಿವಾಸಿ ಸುಧಾಕರ (47) ಮೃತ ವ್ಯಕ್ತಿ.

ಬುಧವಾರ ಬೆಳಗ್ಗೆ ಸುಧಾಕರ ಅವರ ಪತ್ನಿ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋಗಿದ್ದರು. ಮಗಳು ಶಾಲೆಗೆ ತೆರಳಿದ್ದರೆ, ಸುಧಾಕರ್ ಅಸೌಖ್ಯದ ಕಾರಣ ಮನೆಯಲ್ಲಿ ಮಲಗಿದ್ದರು. ಈ ವೇಳೆ, ಮನೆಯ ಒಂದು ಭಾಗದಲ್ಲಿ ಬೆಂಕಿ ಹತ್ತಿಕೊಂಡಿದ್ದು ಹೊರಗೆ ಓಡಲು ಸಾಧ್ಯವಾಗದ ಸುಧಾಕರ್ ಸ್ಥಳದಲ್ಲಿಯೇ ಜೀವಂತ ದಹಿಸಲ್ಪಟ್ಟು ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಉರಿಸಿದ್ದ ದೀಪದಿಂದ ಬೆಂಕಿ ಹತ್ತಿಕೊಂಡಿದೆ ಎನ್ನಲಾಗುತ್ತಿದೆ. ಸುಳ್ಯ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಕೈಗೊಂಡಿದ್ದಾರೆ.

In a tragic incident, a man sleeping in his house was charred to death in a fire mishap on Wednesday September 7.The deceased is identified as Parlikanje Sudhakar (47), a resident of Aivarnadu, Bellare. Sudhakar was sleeping in the house while his wife had gone away on some work. Their daughter had been to school.