ಕುವೈಟಿನಲ್ಲಿ ಅಪಘಾತ ; ಮಂಗಳೂರಿನ ಯುವಕ ಸಾವು

25-09-22 06:41 pm       Mangalore Correspondent   ಕರಾವಳಿ

ಮಂಗಳೂರು ಮೂಲದ ಯುವಕನೊಬ್ಬ ಕುವೈಟ್ ನಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮಂಗಳೂರಿನ ಬಜಾಲ್ ಪಕ್ಕಲಡ್ಕ ನಿವಾಸಿ ಆಸಿಫ್ ಪಕ್ಕಲಡ್ಕ(33) ಮೃತ ಯುವಕ.

ಮಂಗಳೂರು, ಸೆ.25: ಮಂಗಳೂರು ಮೂಲದ ಯುವಕನೊಬ್ಬ ಕುವೈಟ್ ನಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮಂಗಳೂರಿನ ಬಜಾಲ್ ಪಕ್ಕಲಡ್ಕ ನಿವಾಸಿ ಆಸಿಫ್ ಪಕ್ಕಲಡ್ಕ(33) ಮೃತ ಯುವಕ.

ಆಸಿಫ್ ಕುವೈಟಿನ ಕಂಪನಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಸಂಜೆ ಕೆಲಸ ಮುಗಿಸಿ ತಾನಿರುತ್ತಿದ್ದ ಕೊಠಡಿಗೆ ಬೈಕಿನಲ್ಲಿ ಮರಳುತ್ತಿದ್ದಾಗ ಕಾರು ಡಿಕ್ಕಿಯಾಗಿದ್ದು, ಆಸಿಫ್ ಸ್ಥಳದಲ್ಲೇ ಸಾವು ಕಂಡಿದ್ದಾರೆ.

ಆಸಿಫ್ ತಾಯಿ ಮತ್ತು ಪತ್ನಿಯನ್ನು ಅಗಲಿದ್ದಾರೆ. ಮೃತದೇಹವನ್ನು ಊರಿಗೆ ತರುವುದಕ್ಕಾಗಿ ಪ್ರಯತ್ನ ನಡೆದಿದೆ.

Asif Pakkaladka (33), son of Safiya, a resident of Bajal Pakkaladka, is the unfortunate man who died in the accident. Asif was working as a salesman in a company. On the evening of Friday, he was going back to his accommodation on his motorbike after completing his work, when a car crashed onto his bike and killed him on the spot.