ಬ್ರೇಕಿಂಗ್ ನ್ಯೂಸ್
26-09-22 10:37 pm Mangalore Correspondent ಕರಾವಳಿ
ಮಂಗಳೂರು, ಸೆ.26: ವಕ್ಫ್ ಆಸ್ತಿ ದುರುಪಯೋಗದ ಬಗ್ಗೆ ಅನ್ವರ್ ಮಾಣಿಪ್ಪಾಡಿ ನೀಡಿದ್ದ ವರದಿಯನ್ನು ಒಪ್ಪಿದ್ದೇವೆ. ಅದರ ಬಗ್ಗೆ ಮೂರು ತಿಂಗಳ ಹಿಂದೆಯೇ ವಿಧಾನ ಪರಿಷತ್ತಿನ ಭರವಸೆಗಳ ಕಮಿಟಿಯ ಅಧ್ಯಕ್ಷ ಬಿಎಂ ಫಾರೂಕ್ ನೇತೃತ್ವದಲ್ಲಿ ಚರ್ಚೆ ನಡೆಸಿದ್ದೆವು. ಸರಕಾರಕ್ಕೆ ವರದಿಯನ್ನು ಒಪ್ಪಿಸಿ ತನಿಖೆಗೆ ಹೇಳಿದ್ದೇವೆ. ರಾಜ್ಯ ಸರಕಾರ ಲೋಕಾಯುಕ್ತಕ್ಕೆ ಕೊಡಲಿ, ಸಿಬಿಐ ತನಿಖೆಗೇ ಕೊಡಲಿ. ಯಾವುದೇ ತನಿಖೆಗೂ ನಾವು ಸಿದ್ಧರಿದ್ದೇವೆ ಎಂದು ವಕ್ಫ್ ಕಮಿಟಿ ಅಧ್ಯಕ್ಷ ಶಾಫಿ ಸಅದಿ ಹೇಳಿದ್ದಾರೆ.
ನಗರದ ಪಾಂಡೇಶ್ವರದಲ್ಲಿ ವಕ್ಫ್ ಇಲಾಖೆಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ವಕ್ಫ್ ಇಲಾಖೆಯಲ್ಲಿ ನಾನು 2011ರಲ್ಲಿಯೇ ಮೆಂಬರ್ ಆಗಿದ್ದೇನೆ. ಮಾಣಿಪ್ಪಾಡಿಯವರು 2012ರಲ್ಲಿ ವರದಿ ಕೊಟ್ಟಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ವಕ್ಫ್ ಆಯೋಗದ ಅಧ್ಯಕ್ಷರಿಗೆ ಮಾತ್ರ ಅಧಿಕಾರ ಇದೆ. ಸರಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ತನಿಖೆ ನಡೆಸಿ ಕಬಳಿಕೆ ಆಗಿರುವ ಆಸ್ತಿಯನ್ನು ಮರಳಿ ಪಡೆಯಬೇಕಾಗಿದೆ ಎಂದು ಹೇಳಿದರು.
ಬೀದರ್, ಗುಲ್ಬರ್ಗ ಮತ್ತು ಬೆಂಗಳೂರಿನಲ್ಲಿ ವಕ್ಫ್ ಇಲಾಖೆಗೆ ಅತಿ ಹೆಚ್ಚು ಆಸ್ತಿ ಇದೆ. ಟಿಪ್ಪು ಸುಲ್ತಾನ್, ಮೈಸೂರು ಒಡೆಯರು, ಬಹಮನಿ ಸುಲ್ತಾನರು ವಕ್ಫ್ ಆಸ್ತಿಯೆಂದು ನೀಡಿದ್ದ ಭೂಮಿಯಿದ್ದು, ಅದನ್ನು ಕಂಪೌಂಡ್ ಹಾಕಿ ರಕ್ಷಿಸಲು ಕ್ರಮ ಕೈಗೊಂಡಿದ್ದೇವೆ. ಅದಕ್ಕಾಗಿ 70 ಕೋಟಿ ಸರಕಾರದಿಂದ ಬಿಡುಗಡೆ ಮಾಡಲಾಗಿದೆ. ವಕ್ಫ್ ಆಸ್ತಿಯನ್ನು ಮರಳಿ ಪಡೆಯುವಲ್ಲಿ ಕಾನೂನು ಇಲಾಖೆಯಲ್ಲಿ ವೈಫಲ್ಯ ಆಗಿರುವುದನ್ನು ಮನಗಂಡು ಸೂಕ್ತವಾಗಿ ಸ್ಪಂದಿಸಲು ತಜ್ಞ ವಕೀಲರನ್ನು ನೇಮಕ ಮಾಡಿದ್ದೇವೆ. ಅಶೋಕ್ ಹಾರ್ನಳ್ಳಿ, ಜಯದೇವ ಪಾಟೀಲರಂಥ ವಕೀಲರನ್ನು ನೇಮಕ ಮಾಡಿದ್ದು ವಕ್ಫ್ ಆಸ್ತಿ ಮರಳಿ ಸಿಕ್ಕಿದರೆ ನಮಗೆ ಸರಕಾರದಿಂದ ಅನುದಾನ ಕೇಳುವ ಸ್ಥಿತಿ ಬರುವುದಿಲ್ಲ.
ವಕ್ಫ್ ಇಲಾಖೆಯಲ್ಲಿ ಬೆಂಗಳೂರಿನಲ್ಲಿ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಿವೆ. ಬೀದರ್ ಖಬರಸ್ತಾನದಲ್ಲಿ ಏಶ್ಯಾದಲ್ಲೇ ಅತಿ ಹೆಚ್ಚು 5 ಸಾವಿರ ಎಕ್ರೆ ಆಸ್ತಿಯಿದೆ. ಆದರೆ ಇದನ್ನು ಸೂಕ್ತವಾಗಿ ಬಳಸಿಕೊಳ್ಳದೆ ನಾವು ಸೋತಿದ್ದೇವೆ. 2020ರಲ್ಲಿ ವಕ್ಫ್ ಬೋರ್ಡಿಗೆ ಅಧ್ಯಕ್ಷರ ನೇಮಕ ಮಾಡಲಾಗಿದೆ. 26 ಜಿಲ್ಲೆಗಳಿಗೆ ಕಮಿಟಿ ನೇಮಕ ಆಗಿದೆ. ಇದರಲ್ಲಿ ರಾಜಕೀಯ ಇಲ್ಲ. ವಕ್ಫ್ ಪ್ರತ್ಯೇಕ ಕಾನೂನಾಗಿದ್ದು, ಸ್ವತಂತ್ರವಾಗಿದೆ. ಇದರಲ್ಲಿ ನೇಮಕ ಮಾಡುವ ಸಂದರ್ಭದಲ್ಲಿ ರಾಜಕೀಯ ತಂದರೆ, ಸಮಸ್ಯೆ ಆಗುತ್ತದೆ. ರಾಜಕೀಯ ದೂರವಿಟ್ಟು ನಾವು ವಕ್ಫ್ ಆಸ್ತಿಯನ್ನು ಸಂರಕ್ಷಣೆ ಮಾಡಬೇಕಾಗಿದೆ ಎಂದರು.
Mangalore Waqf board shafi saadi says Anwar Manippady is ready for any investigation.
02-11-25 11:09 pm
HK News Desk
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
02-11-25 11:12 pm
HK News Desk
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
02-11-25 10:23 pm
Mangalore Correspondent
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm