ಬ್ರೇಕಿಂಗ್ ನ್ಯೂಸ್
26-09-22 10:37 pm Mangalore Correspondent ಕರಾವಳಿ
ಮಂಗಳೂರು, ಸೆ.26: ವಕ್ಫ್ ಆಸ್ತಿ ದುರುಪಯೋಗದ ಬಗ್ಗೆ ಅನ್ವರ್ ಮಾಣಿಪ್ಪಾಡಿ ನೀಡಿದ್ದ ವರದಿಯನ್ನು ಒಪ್ಪಿದ್ದೇವೆ. ಅದರ ಬಗ್ಗೆ ಮೂರು ತಿಂಗಳ ಹಿಂದೆಯೇ ವಿಧಾನ ಪರಿಷತ್ತಿನ ಭರವಸೆಗಳ ಕಮಿಟಿಯ ಅಧ್ಯಕ್ಷ ಬಿಎಂ ಫಾರೂಕ್ ನೇತೃತ್ವದಲ್ಲಿ ಚರ್ಚೆ ನಡೆಸಿದ್ದೆವು. ಸರಕಾರಕ್ಕೆ ವರದಿಯನ್ನು ಒಪ್ಪಿಸಿ ತನಿಖೆಗೆ ಹೇಳಿದ್ದೇವೆ. ರಾಜ್ಯ ಸರಕಾರ ಲೋಕಾಯುಕ್ತಕ್ಕೆ ಕೊಡಲಿ, ಸಿಬಿಐ ತನಿಖೆಗೇ ಕೊಡಲಿ. ಯಾವುದೇ ತನಿಖೆಗೂ ನಾವು ಸಿದ್ಧರಿದ್ದೇವೆ ಎಂದು ವಕ್ಫ್ ಕಮಿಟಿ ಅಧ್ಯಕ್ಷ ಶಾಫಿ ಸಅದಿ ಹೇಳಿದ್ದಾರೆ.
ನಗರದ ಪಾಂಡೇಶ್ವರದಲ್ಲಿ ವಕ್ಫ್ ಇಲಾಖೆಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ವಕ್ಫ್ ಇಲಾಖೆಯಲ್ಲಿ ನಾನು 2011ರಲ್ಲಿಯೇ ಮೆಂಬರ್ ಆಗಿದ್ದೇನೆ. ಮಾಣಿಪ್ಪಾಡಿಯವರು 2012ರಲ್ಲಿ ವರದಿ ಕೊಟ್ಟಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ವಕ್ಫ್ ಆಯೋಗದ ಅಧ್ಯಕ್ಷರಿಗೆ ಮಾತ್ರ ಅಧಿಕಾರ ಇದೆ. ಸರಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ತನಿಖೆ ನಡೆಸಿ ಕಬಳಿಕೆ ಆಗಿರುವ ಆಸ್ತಿಯನ್ನು ಮರಳಿ ಪಡೆಯಬೇಕಾಗಿದೆ ಎಂದು ಹೇಳಿದರು.
ಬೀದರ್, ಗುಲ್ಬರ್ಗ ಮತ್ತು ಬೆಂಗಳೂರಿನಲ್ಲಿ ವಕ್ಫ್ ಇಲಾಖೆಗೆ ಅತಿ ಹೆಚ್ಚು ಆಸ್ತಿ ಇದೆ. ಟಿಪ್ಪು ಸುಲ್ತಾನ್, ಮೈಸೂರು ಒಡೆಯರು, ಬಹಮನಿ ಸುಲ್ತಾನರು ವಕ್ಫ್ ಆಸ್ತಿಯೆಂದು ನೀಡಿದ್ದ ಭೂಮಿಯಿದ್ದು, ಅದನ್ನು ಕಂಪೌಂಡ್ ಹಾಕಿ ರಕ್ಷಿಸಲು ಕ್ರಮ ಕೈಗೊಂಡಿದ್ದೇವೆ. ಅದಕ್ಕಾಗಿ 70 ಕೋಟಿ ಸರಕಾರದಿಂದ ಬಿಡುಗಡೆ ಮಾಡಲಾಗಿದೆ. ವಕ್ಫ್ ಆಸ್ತಿಯನ್ನು ಮರಳಿ ಪಡೆಯುವಲ್ಲಿ ಕಾನೂನು ಇಲಾಖೆಯಲ್ಲಿ ವೈಫಲ್ಯ ಆಗಿರುವುದನ್ನು ಮನಗಂಡು ಸೂಕ್ತವಾಗಿ ಸ್ಪಂದಿಸಲು ತಜ್ಞ ವಕೀಲರನ್ನು ನೇಮಕ ಮಾಡಿದ್ದೇವೆ. ಅಶೋಕ್ ಹಾರ್ನಳ್ಳಿ, ಜಯದೇವ ಪಾಟೀಲರಂಥ ವಕೀಲರನ್ನು ನೇಮಕ ಮಾಡಿದ್ದು ವಕ್ಫ್ ಆಸ್ತಿ ಮರಳಿ ಸಿಕ್ಕಿದರೆ ನಮಗೆ ಸರಕಾರದಿಂದ ಅನುದಾನ ಕೇಳುವ ಸ್ಥಿತಿ ಬರುವುದಿಲ್ಲ.
ವಕ್ಫ್ ಇಲಾಖೆಯಲ್ಲಿ ಬೆಂಗಳೂರಿನಲ್ಲಿ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಿವೆ. ಬೀದರ್ ಖಬರಸ್ತಾನದಲ್ಲಿ ಏಶ್ಯಾದಲ್ಲೇ ಅತಿ ಹೆಚ್ಚು 5 ಸಾವಿರ ಎಕ್ರೆ ಆಸ್ತಿಯಿದೆ. ಆದರೆ ಇದನ್ನು ಸೂಕ್ತವಾಗಿ ಬಳಸಿಕೊಳ್ಳದೆ ನಾವು ಸೋತಿದ್ದೇವೆ. 2020ರಲ್ಲಿ ವಕ್ಫ್ ಬೋರ್ಡಿಗೆ ಅಧ್ಯಕ್ಷರ ನೇಮಕ ಮಾಡಲಾಗಿದೆ. 26 ಜಿಲ್ಲೆಗಳಿಗೆ ಕಮಿಟಿ ನೇಮಕ ಆಗಿದೆ. ಇದರಲ್ಲಿ ರಾಜಕೀಯ ಇಲ್ಲ. ವಕ್ಫ್ ಪ್ರತ್ಯೇಕ ಕಾನೂನಾಗಿದ್ದು, ಸ್ವತಂತ್ರವಾಗಿದೆ. ಇದರಲ್ಲಿ ನೇಮಕ ಮಾಡುವ ಸಂದರ್ಭದಲ್ಲಿ ರಾಜಕೀಯ ತಂದರೆ, ಸಮಸ್ಯೆ ಆಗುತ್ತದೆ. ರಾಜಕೀಯ ದೂರವಿಟ್ಟು ನಾವು ವಕ್ಫ್ ಆಸ್ತಿಯನ್ನು ಸಂರಕ್ಷಣೆ ಮಾಡಬೇಕಾಗಿದೆ ಎಂದರು.
Mangalore Waqf board shafi saadi says Anwar Manippady is ready for any investigation.
26-04-24 11:17 pm
Bangalore Correspondent
ಬಿಜೆಪಿ ತನ್ನ ಭದ್ರಕೋಟೆಯಲ್ಲೂ ಗೆದ್ದೇ ಗೆಲ್ಲುತ್ತೇವೆ...
26-04-24 09:10 pm
Madikeri, election, heart attack; ಮಡಿಕೇರಿ ; ಮ...
26-04-24 06:14 pm
Chamarajanagar, villagers, Booth: ಮತದಾನ ಬಹಿಷ್...
26-04-24 04:53 pm
ಚಿತ್ರದುರ್ಗ ; ಲೋ ಬಿಪಿಯಿಂದ ಅಸ್ವಸ್ಥ , ಮತಗಟ್ಟೆಯಲ್...
26-04-24 03:04 pm
26-04-24 02:58 pm
HK News Desk
Road Accident In Telangana: ಹಾಳಾಗಿ ನಿಂತಿದ್ದ ಲ...
25-04-24 03:49 pm
Groom electrocuted in Rajasthan: ರೆಸಾರ್ಟ್ ನಲ್...
24-04-24 05:01 pm
Pm Modi, Muslims: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ...
22-04-24 10:37 pm
ಮದುವೆ ಮುಗಿಸಿ ವಾಪಾಸ್ ಆಗುವ ವೇಳೆ ಭೀಕರ ಅಪಘಾತ ; ಓ...
21-04-24 03:23 pm
26-04-24 10:45 pm
Mangalore Correspondent
Mangalore Voting, Election 2024; ದಕ್ಷಿಣ ಕನ್ನಡ...
26-04-24 10:32 pm
Karkala, Horse ride to cast his vote: ಕಾರ್ಕಳ...
26-04-24 09:28 pm
ಸುಳ್ಯ ; 18 ನಕ್ಸಲ್ ಪೀಡಿತ ಮತಗಟ್ಟೆಗಳಲ್ಲಿ ಶಸ್ತ್ರಸ...
26-04-24 08:42 pm
Mangalore live voting percentage: ದಕ್ಷಿಣ ಕನ್ನ...
26-04-24 05:56 pm
26-04-24 03:59 pm
Mangalore Correspondent
Mangalore Fraud, crime, Krishnaprasad Shetty:...
25-04-24 10:18 pm
Bangalore crime, Dacoity gang, 40 lakhs, robb...
25-04-24 03:33 pm
Gang raped in Bengaluru: ಬೆಂಗಳೂರಿನಲ್ಲಿ ಯುವತಿ...
25-04-24 12:19 pm
Glide touist bus, Mangalore, crime: ಬೆಂಗಳೂರು...
24-04-24 10:48 pm