ಬ್ರೇಕಿಂಗ್ ನ್ಯೂಸ್
08-10-22 10:06 pm Mangalore Correspondent ಕರಾವಳಿ
ಉಳ್ಳಾಲ, ಅ.8 : ಕಾನೂನು ಬಾಹಿರ ಕಟ್ಟಡದ ಕ್ಷೇಮ ಕಾಪಾಡಲು ಕಳೆದ ಮೂರು ವರ್ಷಗಳಿಂದ ಸುಭಾಸ್ ನಗರ ಎಂಬಲ್ಲಿ ರಸ್ತೆ ಬದಿಯಲ್ಲಿ ವ್ಯವಹಾರ ನಡೆಸುತ್ತಿದ್ದ ಮಿಲ್ಕ್ ಪಾರ್ಲರ್ ಬೂತನ್ನ ತೆರವುಗೊಳಿಸಲು ಮುನ್ನೂರು ಗ್ರಾಮ ಪಂಚಾಯತ್ ಮುಂದಾಗಿದ್ದು, ಬೂತ್ ಮಾಲೀಕರು ಹೈಕೋರ್ಟ್ ನಿಂದ ತಡೆಯಾಜ್ಞೆ ತಂದು ಪಂಚಾಯತಿಗೆ ತಿರುಗೇಟು ನೀಡಿದ್ದಾರೆ.
ಮುನ್ನೂರು ಪಂಚಾಯತ್ ವ್ಯಾಪ್ತಿಯ ಸುಭಾಷ್ ನಗರದಲ್ಲಿ ಉಷಾ ಶೆಟ್ಟಿ ಎಂಬವರು ಮೂರು ವರ್ಷಗಳ ಹಿಂದೆ ಶ್ರೀ ಕಟಿಲೇಶ್ವರಿ ನಂದಿನಿ ಡಿಪೋ ಆರಂಭಿಸಿದ್ದರು. 2019-20ನೇ ಸಾಲಿನಲ್ಲಿ ಪಂಚಾಯತ್ ಪರವಾನಿಗೆಯನ್ನೂ ನೀಡಿತ್ತು. ಇತ್ತೀಚೆಗೆ ಮಿಲ್ಕ್ ಡಿಪೋ ಹಿಂಭಾಗದಲ್ಲಿ ಕಾನೂನು ಬಾಹಿರವಾಗಿ ನಿರ್ಮಾಣಗೊಂಡ ಖಾಸಗಿ ಕಟ್ಟಡ ಉದ್ಘಾಟನೆಗೆ ಸಜ್ಜಾಗಿದೆ. ಹಾಲಿನ ಬೂತ್ನಿಂದ ಕಟ್ಟಡಕ್ಕೆ ಸಮಸ್ಯೆ ಆಗುತ್ತದೆ ಎಂದು ಕಟ್ಟಡ ಮಾಲೀಕರು ಪಂಚಾಯತಿಗೆ ದೂರು ನೀಡಿದ್ದಾರೆ.
ಅಕ್ರಮ ಕಟ್ಟಡದ ಮಾಲೀಕನ ಕ್ಷೇಮ ಕಾಪಾಡುವ ದೃಷ್ಟಿಯಲ್ಲಿ ಪಂಚಾಯತ್ ಪಿಡಿಓ ರವೀಂದ್ರ ರಾಜೀವ್ ನಾಯ್ಕ್ , ಅಧ್ಯಕ್ಷರಾದ ವಿಲ್ಫ್ರೆಡ್ ಡಿಸೋಜ ಮತ್ತು ಸಿಬ್ಬಂದಿ ಶನಿವಾರ ಹಾಲಿನ ಬೂತ್ ತೆರವಿಗೆ ಆಗಮಿಸಿದ್ದರು. ಪಂಚಾಯತ್ ನಿರ್ಣಯದ ವಿರುದ್ಧ ಮಿಲ್ಕ್ ಪಾರ್ಲರ್ ಮಾಲೀಕರು ಹೈಕೋರ್ಟ್ನಿಂದ ತಡೆಯಾಜ್ನೆ ತಂದಿದ್ದು ಅದರ ಪ್ರತಿಯನ್ನು ಬೂತ್ಗೆ ಅಂಟಿಸಿದ್ದರು.
ಪಂಚಾಯತ್ ಪಿಡಿಓ ಕ್ರಮವನ್ನ ವಿರೋಧಿಸಿ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುಭಾಷ್ ನಗರದಲ್ಲಿ ಕಾನೂನು ಬಾಹಿರವಾಗಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಕ್ಕೆ ಸೆಟ್ಬ್ಯಾಕ್ ಸಹಿತ ಯಾವುದೇ ವ್ಯವಸ್ಥೆ ಇಲ್ಲ. ದೊಡ್ಡವರ ಮುಂದೆ ಮಂಡಿ ಊರಿ ಕುಳಿತಿರುವ ಪಂಚಾಯತ್ ಪಿಡಿಒ ಬಡವರ ಬೂತ್ ತೆರವುಗೊಳಿಸುವುದಾದರೆ ಸರ್ಕಾರಿ ಜಮೀನಿನಲ್ಲಿರುವ ಎಲ್ಲಾ ಗೂಡಂಗಡಿಗಳನ್ನ ತೆರವುಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಹೈಕೋರ್ಟ್ ತಡೆ ಇದ್ದರೂ ಮುನ್ನೂರು ಪಿಡಿಒ ಮಿಲ್ಕ್ ಪಾರ್ಲರನ್ನ ಜಬರ್ದಸ್ತಿಯಲ್ಲಿ ತೆರವುಗೊಳಿಸಲು ಮುಂದಾಗಿದ್ದು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ ಪರಿಣಾಮ ಹಿಂದಿರುಗಿದ್ದಾರೆ.ಕುರುಡು ಕಾಂಚಾಣಕ್ಕೆ ಮುನ್ನೂರು ಪಂಚಾಯತ್ ಪಿಡಿಓ ಮತ್ತು ಅಧ್ಯಕ್ಷರು ಏನು ಮಾಡಲೂ ರೆಡಿ ಎಂದು ಈ ಮೊದಲೇ ಜಾಲತಾಣಗಳಲ್ಲದೆ, ಮನೆ, ಮನೆಗಳಿಗೆ ಗ್ರಾಮಸ್ಥರು ಕರಪತ್ರಗಳನ್ನು ಹಂಚಿ ಆಕ್ರೋಶ ವ್ಯಕ್ತಪಡಿಸಿದ್ದರು.
Thokottu Munnur Village Panchayath alleged of supporting illegal construction of the building. Also a stay order has been brought over Milk Parlour to not vacate from the building.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm