ಬ್ರೇಕಿಂಗ್ ನ್ಯೂಸ್
08-10-22 10:06 pm Mangalore Correspondent ಕರಾವಳಿ
ಉಳ್ಳಾಲ, ಅ.8 : ಕಾನೂನು ಬಾಹಿರ ಕಟ್ಟಡದ ಕ್ಷೇಮ ಕಾಪಾಡಲು ಕಳೆದ ಮೂರು ವರ್ಷಗಳಿಂದ ಸುಭಾಸ್ ನಗರ ಎಂಬಲ್ಲಿ ರಸ್ತೆ ಬದಿಯಲ್ಲಿ ವ್ಯವಹಾರ ನಡೆಸುತ್ತಿದ್ದ ಮಿಲ್ಕ್ ಪಾರ್ಲರ್ ಬೂತನ್ನ ತೆರವುಗೊಳಿಸಲು ಮುನ್ನೂರು ಗ್ರಾಮ ಪಂಚಾಯತ್ ಮುಂದಾಗಿದ್ದು, ಬೂತ್ ಮಾಲೀಕರು ಹೈಕೋರ್ಟ್ ನಿಂದ ತಡೆಯಾಜ್ಞೆ ತಂದು ಪಂಚಾಯತಿಗೆ ತಿರುಗೇಟು ನೀಡಿದ್ದಾರೆ.
ಮುನ್ನೂರು ಪಂಚಾಯತ್ ವ್ಯಾಪ್ತಿಯ ಸುಭಾಷ್ ನಗರದಲ್ಲಿ ಉಷಾ ಶೆಟ್ಟಿ ಎಂಬವರು ಮೂರು ವರ್ಷಗಳ ಹಿಂದೆ ಶ್ರೀ ಕಟಿಲೇಶ್ವರಿ ನಂದಿನಿ ಡಿಪೋ ಆರಂಭಿಸಿದ್ದರು. 2019-20ನೇ ಸಾಲಿನಲ್ಲಿ ಪಂಚಾಯತ್ ಪರವಾನಿಗೆಯನ್ನೂ ನೀಡಿತ್ತು. ಇತ್ತೀಚೆಗೆ ಮಿಲ್ಕ್ ಡಿಪೋ ಹಿಂಭಾಗದಲ್ಲಿ ಕಾನೂನು ಬಾಹಿರವಾಗಿ ನಿರ್ಮಾಣಗೊಂಡ ಖಾಸಗಿ ಕಟ್ಟಡ ಉದ್ಘಾಟನೆಗೆ ಸಜ್ಜಾಗಿದೆ. ಹಾಲಿನ ಬೂತ್ನಿಂದ ಕಟ್ಟಡಕ್ಕೆ ಸಮಸ್ಯೆ ಆಗುತ್ತದೆ ಎಂದು ಕಟ್ಟಡ ಮಾಲೀಕರು ಪಂಚಾಯತಿಗೆ ದೂರು ನೀಡಿದ್ದಾರೆ.

ಅಕ್ರಮ ಕಟ್ಟಡದ ಮಾಲೀಕನ ಕ್ಷೇಮ ಕಾಪಾಡುವ ದೃಷ್ಟಿಯಲ್ಲಿ ಪಂಚಾಯತ್ ಪಿಡಿಓ ರವೀಂದ್ರ ರಾಜೀವ್ ನಾಯ್ಕ್ , ಅಧ್ಯಕ್ಷರಾದ ವಿಲ್ಫ್ರೆಡ್ ಡಿಸೋಜ ಮತ್ತು ಸಿಬ್ಬಂದಿ ಶನಿವಾರ ಹಾಲಿನ ಬೂತ್ ತೆರವಿಗೆ ಆಗಮಿಸಿದ್ದರು. ಪಂಚಾಯತ್ ನಿರ್ಣಯದ ವಿರುದ್ಧ ಮಿಲ್ಕ್ ಪಾರ್ಲರ್ ಮಾಲೀಕರು ಹೈಕೋರ್ಟ್ನಿಂದ ತಡೆಯಾಜ್ನೆ ತಂದಿದ್ದು ಅದರ ಪ್ರತಿಯನ್ನು ಬೂತ್ಗೆ ಅಂಟಿಸಿದ್ದರು.

ಪಂಚಾಯತ್ ಪಿಡಿಓ ಕ್ರಮವನ್ನ ವಿರೋಧಿಸಿ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುಭಾಷ್ ನಗರದಲ್ಲಿ ಕಾನೂನು ಬಾಹಿರವಾಗಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಕ್ಕೆ ಸೆಟ್ಬ್ಯಾಕ್ ಸಹಿತ ಯಾವುದೇ ವ್ಯವಸ್ಥೆ ಇಲ್ಲ. ದೊಡ್ಡವರ ಮುಂದೆ ಮಂಡಿ ಊರಿ ಕುಳಿತಿರುವ ಪಂಚಾಯತ್ ಪಿಡಿಒ ಬಡವರ ಬೂತ್ ತೆರವುಗೊಳಿಸುವುದಾದರೆ ಸರ್ಕಾರಿ ಜಮೀನಿನಲ್ಲಿರುವ ಎಲ್ಲಾ ಗೂಡಂಗಡಿಗಳನ್ನ ತೆರವುಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಹೈಕೋರ್ಟ್ ತಡೆ ಇದ್ದರೂ ಮುನ್ನೂರು ಪಿಡಿಒ ಮಿಲ್ಕ್ ಪಾರ್ಲರನ್ನ ಜಬರ್ದಸ್ತಿಯಲ್ಲಿ ತೆರವುಗೊಳಿಸಲು ಮುಂದಾಗಿದ್ದು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ ಪರಿಣಾಮ ಹಿಂದಿರುಗಿದ್ದಾರೆ.ಕುರುಡು ಕಾಂಚಾಣಕ್ಕೆ ಮುನ್ನೂರು ಪಂಚಾಯತ್ ಪಿಡಿಓ ಮತ್ತು ಅಧ್ಯಕ್ಷರು ಏನು ಮಾಡಲೂ ರೆಡಿ ಎಂದು ಈ ಮೊದಲೇ ಜಾಲತಾಣಗಳಲ್ಲದೆ, ಮನೆ, ಮನೆಗಳಿಗೆ ಗ್ರಾಮಸ್ಥರು ಕರಪತ್ರಗಳನ್ನು ಹಂಚಿ ಆಕ್ರೋಶ ವ್ಯಕ್ತಪಡಿಸಿದ್ದರು.
Thokottu Munnur Village Panchayath alleged of supporting illegal construction of the building. Also a stay order has been brought over Milk Parlour to not vacate from the building.
05-09-26 04:53 pm
HK News Staffer
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
06-09-26 01:14 pm
HK News Desk
ಸುಬ್ರಹ್ಮಣ್ಯ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್...
06-09-26 12:47 pm
ದಕ್ಷಿಣ ಕನ್ನಡ- ಚಿಕ್ಕಮಗಳೂರು ಸಂಪರ್ಕ ಕೊಂಡಿ ಚಾರ್ಮಾ...
05-09-26 04:58 pm
ಬೆಂಗಳೂರು-ಮಂಗಳೂರು ವಂದೇ ಭಾರತ್ಗೆ ಮತ್ತೊಂದು ಟೆಸ್ಟ...
05-09-26 11:59 am
ಕೆಆರ್ ಐಡಿಎಲ್ ಕಮಿಷನ್ ಆರೋಪದಿಂದ ಮಾನಸಿಕ ಕಿರುಕುಳ,...
04-09-26 04:44 pm
05-09-26 08:58 pm
HK News Staffer
ಶಿವಮೊಗ್ಗ ; ಕಾರಿನಲ್ಲಿ ಜಿಂಕೆ ಮಾಂಸ ಮಾರಾಟ ಯತ್ನ ;...
05-09-26 04:55 pm
ಬಡ್ಡಿ ಕಟ್ಟದಿದ್ದಕ್ಕೆ ಮಹಿಳೆಯನ್ನು ಅಪಹರಿಸಿ ಹಲ್ಲೆ...
05-09-26 03:08 pm
ಅಷ್ಟಮಿ ಭಜನಾ ಕಾರ್ಯಕ್ರಮದಲ್ಲಿ ಹೃದಯಾಘಾತ ; ತೊಕ್ಕೂರ...
05-09-26 02:04 pm
ತ್ರಿಶೂರ್ ನಲ್ಲಿ ಗುರುವಾಯೂರು ದರ್ಶನ ಮುಗಿಸಿ ಹೊರಟಿದ...
05-09-26 01:13 pm