ಹಳಿ ದಾಟುತ್ತಿದ್ದಾಗ ರೈಲು ಇಂಜಿನ್ ಡಿಕ್ಕಿ ; ಕೈ, ಕಾಲು ಕಳೆದುಕೊಂಡ ವ್ಯಕ್ತಿ 

11-10-22 02:00 pm       Mangalore Correspondent   ಕರಾವಳಿ

ರೈಲು ಇಂಜಿನ್ ಡಿಕ್ಕಿಯಾದ ಪರಿಣಾಮ ವ್ಯಕ್ತಿಯೋರ್ವ ಕೈ ಕಾಲು ಮುರಿದುಕೊಂಡು ಗಂಭೀರ ಗಾಯಗೊಂಡ ಘಟನೆ ಸುಬ್ರಹ್ಮಣ್ಯದ ನೆಟ್ಟಣ ರೈಲು ನಿಲ್ದಾಣದ ಬಳಿ ನಡೆದಿದೆ.

ಪುತ್ತೂರು, ಅ.11: ರೈಲು ಇಂಜಿನ್ ಡಿಕ್ಕಿಯಾದ ಪರಿಣಾಮ ವ್ಯಕ್ತಿಯೋರ್ವ ಕೈ ಕಾಲು ಮುರಿದುಕೊಂಡು ಗಂಭೀರ ಗಾಯಗೊಂಡ ಘಟನೆ ಸುಬ್ರಹ್ಮಣ್ಯದ ನೆಟ್ಟಣ ರೈಲು ನಿಲ್ದಾಣದ ಬಳಿ ನಡೆದಿದೆ.

ಗಾಯಗೊಂಡ ವ್ಯಕ್ತಿಯನ್ನು ಐತ್ತೂರು ಗ್ರಾಮದ ಓಟೆಕಜೆ ನಾಗಣ್ಣ ಎಂದು ಗುರುತಿಸಲಾಗಿದೆ. ರೈಲು ಇಂಜಿನ್ ಡಿಕ್ಕಿಯಾದ ರಭಸಕ್ಕೆ ಒಂದು ಕಾಲು ಮತ್ತು ಒಂದು ಕೈ ತುಂಡಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳೂರಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ನಾಗಣ್ಣನ ಪುತ್ರಿ ಭಾಗವಹಿಸಿದ್ದರು. ಪುತ್ರಿಯ ಕ್ರೀಡಾಕೂಟ ನೋಡಿ ರೈಲಿನಲ್ಲಿ ವಾಪಸ್ ಬಂದಿದ್ದು ನೆಟ್ಟಣ ರೈಲು ನಿಲ್ದಾಣದಲ್ಲಿ ತಮ್ಮ ಸತೀಶ ಓಟೆಕಜೆ ಜೊತೆ ಬಂದಿದ್ದರು. ಅಲ್ಲಿಂದ ಅಡ್ಡ ದಾರಿ ಮೂಲಕ ಮನೆಯತ್ತ ತೆರಳಲು ನಿಲ್ದಾಣದ ಸಮೀಪದಲ್ಲೇ ರೈಲು ಹಳಿ ದಾಟುತ್ತಿದ್ದರು. ಆಗ ಏಕಾಏಕಿ ರೈಲು ಇಂಜಿನ್ ಬಂದಿದ್ದು ನಾಗಣ್ಣನಿಗೆ ಡಿಕ್ಕಿಯಾಗಿದೆ. 

ಡಿಕ್ಕಿಯ ರಭಸಕ್ಕೆ ನಾಗಣ್ಣನ ಬಲ ಕೈ ಮುಂಗೈನಿಂದ ಮತ್ತು ಕಾಲು ಕೂಡ ಮುರಿದು ಹೋಗಿದೆ.  ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ದವಡೆಯಿಂದ ಪಾರಾಗಿದ್ದಾರೆ.

Youth dashed by train at Puttur, looses hands and legs.