ವಾಮಂಜೂರಿನಲ್ಲಿ ಶಾರದೋತ್ಸವ ಬ್ಯಾನರ್ ಹರಿದ ಕಿಡಿಗೇಡಿಗಳು ; ಮತ್ತೆ ಶಾಂತಿ ಕದಡಲು ಯತ್ನ 

11-10-22 03:16 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಶಾಂತಿ ಕದಡುವ ಯತ್ನ ನಡೆದಿದ್ದು ಕಿಡಿಗೇಡಿಗಳು ನಗರ ಹೊರವಲಯದ ವಾಮಂಜೂರಿನಲ್ಲಿ ಹಾಕಿದ್ದ ಶಾರದೋತ್ಸವದ ಬ್ಯಾನರ್ ಗಳನ್ನು ಹರಿದು ಹಾಳುಗೆಡವಿದ್ದಾರೆ. 

ಮಂಗಳೂರು, ಅ.10 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಶಾಂತಿ ಕದಡುವ ಯತ್ನ ನಡೆದಿದ್ದು ಕಿಡಿಗೇಡಿಗಳು ನಗರ ಹೊರವಲಯದ ವಾಮಂಜೂರಿನಲ್ಲಿ ಹಾಕಿದ್ದ ಶಾರದೋತ್ಸವದ ಬ್ಯಾನರ್ ಗಳನ್ನು ಹರಿದು ಹಾಳುಗೆಡವಿದ್ದಾರೆ. 

ವಾಮಂಜೂರು ಪೇಟೆಯಲ್ಲಿ ಹಾಕಲಾಗಿದ್ದ ಹತ್ತಕ್ಕೂ ಹೆಚ್ಚು ಶಾರದೋತ್ಸವದ ಬ್ಯಾನರ್ ಗಳನ್ನು ಹರಿದು ಹಾನಿ ಮಾಡಿದ್ದಾರೆ. ಸೋಮವಾರ ತಡರಾತ್ರಿ ಘಟನೆ ನಡೆದಿದ್ದು ರಾತ್ರಿ 1.30ರಿಂದ ಎರಡು ಗಂಟೆ ವೇಳೆಗೆ ಕೃತ್ಯ ನಡೆಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಈ ಬಗ್ಗೆ ಹಿಂದು ಸಂಘಟನೆಗಳು ಕಂಕನಾಡಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸಿಸಿಟಿವಿಯಲ್ಲಿ ವ್ಯಕ್ತಿಯೊಬ್ಬ ರಸ್ತೆ ಬದಿಯ ಬ್ಯಾನರನ್ನು ಹರಿದು ಹಾಕುತ್ತಿರುವುದು ಕಂಡುಬಂದಿದೆ. 

ಇತ್ತೀಚೆಗೆ ಶಿವಮೊಗ್ಗದಲ್ಲಿ ಇದೇ ರೀತಿ ಬ್ಯಾನರ್ ಹರಿದು ಶಾಂತಿ ಕದಡುವ ಯತ್ನ ನಡೆದಿತ್ತು. ಸಾವರ್ಕರ್ ಬ್ಯಾನರ್ ಹರಿದ ವಿಚಾರ ಬಳಿಕ ಉದ್ವಿಗ್ನ ಸ್ಥಿತಿಗೆ ಕಾರಣವಾಗಿದ್ದಲ್ಲದೆ, ಒಬ್ಬನ ಮೇಲೆ ಚೂರಿ ಇರಿತವೂ ನಡೆದಿತ್ತು. ಸುಳ್ಯದಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಬಳಿಕ ಕೋಮು ದಳ್ಳುರಿ ಉಂಟಾಗಿದ್ದಲ್ಲದೆ, ಅದೇ ದ್ವೇಷದಲ್ಲಿ ಮತ್ತೊಬ್ಬನ ಹತ್ಯೆಗೂ ಕಾರಣವಾಗಿತ್ತು.

Miscreants destroy the dasara sharada banner at Vamanjoor in Mangalore in order to disturb the communal harmony..