ಬ್ರೇಕಿಂಗ್ ನ್ಯೂಸ್
11-10-22 08:19 pm Mangalore Correspondent ಕರಾವಳಿ
ಮಂಗಳೂರು, ಅ.11: ಲ್ಯಾಪ್ ಟಾಪ್ ಕೊಡಿಸುತ್ತೇನೆಂದು ಹೇಳಿ ನಗರದ ಉದ್ಯಮಿಯೊಬ್ಬರ ಬಳಿಯಿಂದ ಹಣ ಪಡೆದು ವಂಚಿಸಿರುವ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನಲ್ಲಿ ಶಾಪ್ ಹೊಂದಿರುವ ಉದ್ಯಮಿ, ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಗಳು, ಬಿಡಿ ಭಾಗಗಳನ್ನು ಮಾರಾಟ ಮಾಡುವ ಉದ್ಯಮ ಹೊಂದಿದ್ದಾರೆ. ಇವರಿಗೆ ಜೈಪುರದ ವೈಶಾಲಿ ನಗರದ ಮನೋಜ್ ಚೌರಾಸಿಯಾ ಎಂಬಾತ ಫೋನ್ ಕರೆ ಮಾಡಿ, ನಾವು ಕಡಿಮೆ ದರಕ್ಕೆ ಲ್ಯಾಪ್ ಟಾಪ್ ಪೂರೈಸುತ್ತೇವೆ ಎಂದು ನಂಬಿಸಿದ್ದಾನೆ. ಅದರಂತೆ, ಕಳೆದ ಆಗಸ್ಟ್ ತಿಂಗಳಲ್ಲಿ ಎರಡು ಲ್ಯಾಪ್ ಟಾಪ್ ಖರೀದಿಸಿದ್ದರು.
ಆನಂತರ ಕೆಲವು ದಿನಗಳ ಬಳಿಕ ಮನೋಜ್ ಚೌರಾಸಿಯಾ ಮತ್ತು ಆತನ ಅಸಿಸ್ಟೆಂಟ್ ಸುರಕ್ಷಾ ಖಂಡೇಲ್ ವಾಲಾ ಫೋನ್ ಕರೆ ಮಾಡಿ, ಮತ್ತಷ್ಟು ಲ್ಯಾಪ್ ಟಾಪ್ ಖರೀದಿಸುವಂತೆ ಆಫರ್ ಮಾಡಿದ್ದಾರೆ. ಅದರಂತೆ, ಉದ್ಯಮಿ 15 ಎಚ್ ಪಿ ಬ್ರಾಂಡಿನ ಲ್ಯಾಪ್ ಟಾಪ್ ಮತ್ತು ಕ್ಯಾರಿ ಬ್ಯಾಗನ್ನು ನೀಡುವಂತೆ ಡೀಲ್ ಕುದುರಿಸಲು ಒಪ್ಪಿದ್ದರು. ಅಲ್ಲದೆ, ಸಾಮಗ್ರಿ ಪೂರೈಸುವುದಕ್ಕಾಗಿ 5.70 ಲಕ್ಷ ರೂ.ಗಳನ್ನು ಮನೋಜ್ ಚೌರಾಸಿಯಾಗೆ ನೀಡಿದ್ದರು. ಆದರೆ ಚೌರಾಸಿಯಾ ಹಣ ಪಡೆದು ಲ್ಯಾಪ್ ಟಾಪ್ ನೀಡದೆ ವಂಚಿಸಿದ್ದಾರೆಂದು ದೂರು ನೀಡಲಾಗಿದೆ.
ಪೊಲೀಸರು ಪರಿಶೀಲನೆ ನಡೆಸಿದಾಗ ಮನೋಜ್ ಚೌರಾಸಿಯಾ ಮಂಗಳೂರಿನಲ್ಲೇ ಹಲವರಿಗೆ ಇದೇ ರೀತಿ ಹಣ ಪಡೆದು ಲ್ಯಾಪ್ ಟಾಪ್ ನೀಡದೆ ವಂಚಿಸಿದ್ದಾನೆಂದು ಗೊತ್ತಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ.
A case is filed in which it is accused that a person was fleeced Rs 5.70 lac on the pretext of supplying laptops. An entrepreneur from the city is selling spare parts of laptop and computers. He was approached by Manoj Chaurasia of Vaishali city in Jaipur saying that he will supply laptops at low price. Accordingly, in the month of August, the city entrepreneur bought two laptops from him.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 07:19 pm
Mangalore Correspondent
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
15-07-25 06:52 pm
Bangalore Correspondent
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm
Mangalore Police, Arrest, NITTE College Stude...
15-07-25 01:13 pm
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am