ಬ್ರೇಕಿಂಗ್ ನ್ಯೂಸ್
19-10-22 10:51 pm Udupi Correspondent ಕರಾವಳಿ
ಉಡುಪಿ, ಅ.19: ಜಗತ್ತಿನ ಅತ್ಯಂತ ದೊಡ್ಡ ಪ್ಯಾಸೆಂಜರ್ ವಿಮಾನ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ದುಬೈ ಮೂಲದ ಎಮಿರೇಟ್ಸ್ ಕಂಪನಿಯ ಏರ್ ಬಸ್ 380 ವಿಮಾನವನ್ನು ಉಡುಪಿ ಮೂಲದ ಪೈಲಟ್ ಸಂದೀಪ್ ಪ್ರಭು ಚಲಾಯಿಸಿಕೊಂಡು ಬಂದು ಸುರಕ್ಷಿತವಾಗಿ ಬೆಂಗಳೂರಿನ ನಿಲ್ದಾಣದಲ್ಲಿ ಇಳಿಸಿದ್ದಾರೆ.
15 ವರ್ಷಗಳಿಂದ ಪೈಲಟ್ ವೃತ್ತಿಯಲ್ಲಿರುವ ಸಂದೀಪ್ ಪ್ರಭು, ಅಲೆವೂರಿನ ಆರತಿ ಪ್ರಭು ಮತ್ತು ಶಿವರಾಯ ಪ್ರಭು ದಂಪತಿ ಎರಡನೇ ಪುತ್ರ. ಮೊದಲಿಗೆ ಫಿಲಿಪೈನ್ಸ್ ನಲ್ಲಿ ಪೈಲಟ್ ತರಬೇತಿ ಪಡೆದುಕೊಂಡಿದ್ದ ಬಳಿಕ ಫ್ರಾನ್ಸ್ ನಲ್ಲಿ ಉನ್ನತ ಮಟ್ಟದ ತರಬೇತಿ ಪಡೆದಿದ್ದರು. ಆನಂತರ, ದುಬೈ ಮೂಲದ ಎಮಿರೇಟ್ಸ್ ಕಂಪನಿಯಲ್ಲಿ ಪೈಲಟ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು.
ಇದಕ್ಕೂ ಹಿಂದೆ ಇದೇ ವಿಮಾನವನ್ನು ಮುಂಬೈನಲ್ಲಿಯೂ ಸಂದೀಪ್ ಪ್ರಭು ಮೊದಲ ಬಾರಿಗೆ ಇಳಿಸಿದ್ದರು. ಬೆಂಗಳೂರಿನಲ್ಲಿ ವಿಮಾನವನ್ನು ಲ್ಯಾಂಡ್ ಮಾಡಿಸಿದ ಬಳಿಕ ಕನ್ನಡ ಭಾಷೆಯಲ್ಲಿ ಅನೌನ್ಸ್ ಮಾಡುತ್ತಿದ್ದಂತೆ ವಿಮಾನದಲ್ಲಿದ್ದ ಪ್ರಯಾಣಿಕರು ಅಚ್ಚರಿಗೆ ಒಳಗಾಗಿದ್ದಾರೆ. ಬೆಂಗಳೂರಿನಲ್ಲಿ ಎರಡನೇ ಟರ್ಮಿನಲ್ ರೆಡಿಯಾಗಿದ್ದು, ಇದೀಗ ಜಗತ್ತಿನ 30 ರಾಷ್ಟ್ರಗಳಿಂದ ವಿಮಾನ ಸಂಚಾರಕ್ಕೆ ತೆರೆದುಕೊಂಡಿದೆ.
ಅ.30ರಿಂದ ಎಮಿರೇಟ್ಸ್ ಕಂಪನಿಯ ಎ380 ಏರ್ ಬಸ್ ವಿಮಾನವು ಬೆಂಗಳೂರು – ದುಬೈ ಮಧ್ಯೆ ದಿನವೂ ಸಂಚಾರ ನಡೆಸಲಿದೆ. ಪೈಲಟ್ ಸಂದೀಪ್ ಪ್ರಭು ದುಬೈನಲ್ಲಿಯೇ ವಾಸ್ತವ್ಯವಿದ್ದು, ಅವರಿಗೆ ಬೆಂಗಳೂರು ಎರಡನೇ ಮನೆಯಿದ್ದಂತೆ. ನೇರ ವಿಮಾನ ಸಂಚಾರ ಇರುವುದರಿಂದ ಬೆಂಗಳೂರಿಗೆ ಬೇರೆ ಬೇರೆ ವಿಮಾನಗಳನ್ನು ಚಲಾಯಿಸಿಕೊಂಡು ಬರುತ್ತಾರೆ.
World's largest passenger flight Airbus A380 owned by Emirates made its historic landing at the new terminal of Bengaluru's Kempegowda International Airport on Friday, October 14. The successful test flight was flown by pilot Sandeep Prabhu of Udupi.
13-09-25 10:19 am
HK News Desk
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm