ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಮೈಸೂರಿಗೆ ವರ್ಗಾವಣೆ ; ಜಿಪಂ ಸಿಇಓಗೆ ಜಿಲ್ಲಾಧಿಕಾರಿ ಚಾರ್ಜ್ 

21-10-22 09:37 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಅವರನ್ನು ವರ್ಗಾವಣೆ ಮಾಡಲಾಗಿದೆ. ರಾಜ್ಯದಲ್ಲಿ 12 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಲಾಗಿದ್ದು ಅದರಲ್ಲಿ ರಾಜೇಂದ್ರ ಕೂಡ ಒಬ್ಬರು.

ಮಂಗಳೂರು, ಅ.21: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಅವರನ್ನು ವರ್ಗಾವಣೆ ಮಾಡಲಾಗಿದೆ. ರಾಜ್ಯದಲ್ಲಿ 12 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಲಾಗಿದ್ದು ಅದರಲ್ಲಿ ರಾಜೇಂದ್ರ ಕೂಡ ಒಬ್ಬರು.

ರಾಜೇಂದ್ರ ಅವರನ್ನು ಮೈಸೂರು ಜಿಲ್ಲಾಧಿಕಾರಿ ಆಗಿ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ. ಇದೇ ವೇಳೆ, ದ.ಕ. ಜಿಲ್ಲಾಧಿಕಾರಿ ಆಗಿ ಜಿಪಂ ಸಿಇಓ ಡಾ.ಕುಮಾರ್‌ ಅವರಿಗೆ ಪ್ರಭಾರ ಚಾರ್ಜ್ ನೀಡಲಾಗಿದೆ. 

ಕಳೆದ ಎರಡು ವರ್ಷಗಳಿಂದ ದ.ಕ. ಜಿಲ್ಲಾಧಿಕಾರಿಯಾಗಿದ್ದ ರಾಜೇಂದ್ರ ಕೆವಿ ಅವರು ಕೊರೊನಾ ಸಂದರ್ಭದಲ್ಲಿ ಉತ್ತಮವಾಗಿ ನಿಭಾಯಿಸಿದ್ದ ಹೆಗ್ಗಳಿಕೆ ಹೊಂದಿದ್ದರು. ಕಾನೂನು ಸುವ್ಯವಸ್ಥೆ ಸಮಸ್ಯೆ ಎದುರಾದ ವೇಳೆ ಸಮರ್ಥವಾಗಿ ನಿಭಾಯಿಸಿದ್ದರು. ಸ್ವತಃ ವೈದ್ಯರಾಗಿದ್ದ ಅವರು, ಕೊರೊನಾ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬಂದಿಗೆ ಸೂಕ್ತ ಮುನ್ನೆಚ್ಚರಿಕೆ ನೀಡಿ ಗಮನ ಸೆಳೆದಿದ್ದರು.

Dr Kumara is the new incharge deputy commissioner of Dakshina Kannada district replacing Dr K V Rajendra. Dr Kumar was Dakshina Kannada Zilla Panchayath CEO till date. Dr K V Rajendra has been transferred as the deputy commissioner of Mysuru.