ಬ್ರೇಕಿಂಗ್ ನ್ಯೂಸ್
26-10-22 07:39 pm Mangalore Correspondent ಕರಾವಳಿ
ಮಂಗಳೂರು, ಅ.26: ಹೆಚ್ಚಿನ ಆನ್ಲೈನ್ ಡೆಲಿವರಿ ಕಂಪನಿಗಳು ದೀಪಾವಳಿ ಸಂದರ್ಭದಲ್ಲಿ ಭರ್ಜರಿ ಡಿಸ್ಕೌಂಟ್, ಗಿಫ್ಟ್ ಆಫರ್ ನೀಡುತ್ತದೆ. ಇಲ್ಲೊಬ್ಬರು ದೀಪಾವಳಿ ಆಫರ್ ನಂಬಿ ಲ್ಯಾಪ್ ಟಾಪ್ ಆರ್ಡರ್ ಮಾಡಿದ್ದರು. ಆದರೆ ಫ್ಲಿಪ್ ಕಾರ್ಟ್ ಕಂಪನಿಯಿಂದ ಬಂದಿದ್ದು ಅವರಿಗೆ ಕಲ್ಲಿನ ತುಂಡು ಮತ್ತು ಇಲೆಕ್ಟ್ರಾನಿಕ್ ವೇಸ್ಟ್ ಮಾತ್ರ.
ಮಂಗಳೂರು ಮೂಲದ ಚಿನ್ಮಯ ರಮಣ ಎಂಬವರು ಈ ಬಗ್ಗೆ ಟ್ವಿಟರ್ ನಲ್ಲಿ ಪೋಸ್ಟ್ ಹಾಕಿದ್ದರು. ಲ್ಯಾಪ್ ಟಾಪ್ ಆರ್ಡರ್ ಮಾಡಿದ್ದಕ್ಕೆ ಫ್ಲಿಪ್ ಕಾರ್ಟ್ ಕಂಪನಿ ಕಡೆಯಿಂದ ನನಗೆ ಕಲ್ಲು ಮತ್ತು ಇಲೆಕ್ಟ್ರಾನಿಕ್ ವೇಸ್ಟ್ ಬಂದಿದೆ ಎಂದು ಹೇಳಿದ್ದರು. ಈ ಪೋಸ್ಟ್ ವೈರಲ್ ಆಗಿದ್ದು, ಹಲವರು ತಮಗಾದ ಅನುಭವ ಹೇಳಿಕೊಂಡಿದ್ದಾರೆ. ರಮಣ್ ಅವರು, ನಾನು ಪ್ರತಿ ಬಾರಿ ಫ್ಲಿಪ್ ಕಾರ್ಟ್ ಬಳಸುತ್ತಿದ್ದುದಕ್ಕೆ ವಿಷಾದ ಅನಿಸುತ್ತಿದೆ. ಇದನ್ನು ಓದಿದವರು ತಮಗೂ ಇದೇ ಫೀಲ್ ಆಗಿದ್ದರೆ, ಫ್ಲಿಪ್ ಕಾರ್ಟ್ ಬಳಕೆ ಮಾಡಬೇಡಿ. ಏನಾದರೂ ತಪ್ಪು ಆದಲ್ಲಿ ಕಂಪನಿ ನಮ್ಮ ನೆರವಿಗೆ ಬರುವುದಿಲ್ಲ. ಜವಾಬ್ದಾರಿ ಹೊತ್ತುಕೊಳ್ಳುವುದಿಲ್ಲ. ಆವಾಗ ನಾವು ಅಸಹಾಯಕರಾಗುತ್ತೇವೆ ಎಂದು ಬರೆದಿದ್ದರು.
ಫ್ಲಿಪ್ ಕಾರ್ಟ್ ನಲ್ಲಿ ಆರ್ಡರ್ ಬಾಕ್ಸ್ ಓಪನ್ ಮಾಡಬೇಕಿದ್ದರೆ, ಹಣ ಪಾವತಿ ಮಾಡಿರಬೇಕು. ಉತ್ಪನ್ನ ನೋಡಿ ಹಣ ಕೊಡುವ ವ್ಯವಸ್ಥೆ ಇಲ್ಲ. ಹೀಗಾಗಿ ಮೋಸ ಹೋಗುತ್ತಿದ್ದೇವೆ ಎಂದು ಹೇಳಿದ್ದಲ್ಲದೆ, ತನಗೆ ಬಂದಿದ್ದ ಕಲ್ಲು ಮತ್ತು ಇಲೆಕ್ಟ್ರಾನಿಕ್ ವೇಸ್ಟ್ ಬೋರ್ಡಿನ ಫೋಟೋ ಮತ್ತು ವಿಡಿಯೋ ಹಂಚಿಕೊಂಡಿದ್ದರು. ಕಂಪನಿ ಬಳಿ ದೂರು ಕೊಟ್ಟು ಅಸಹಾಯಕನಾಗಿ ರಮಣ್ ಅವರು ಈ ರೀತಿ ಪೋಸ್ಟ್ ಮಾಡಿದ್ದರು ಎನ್ನಲಾಗುತ್ತಿದೆ.
ಟ್ವಿಟರ್ ಪೋಸ್ಟ್ ವೈರಲ್ ಆಗಿ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತ ಫ್ಲಿಪ್ ಕಾರ್ಟ್ ಕಂಪನಿ ರಮಣ್ ಅವರಿಗೆ ಅವರು ನೀಡಿದ್ದ ಹಣವನ್ನು ವಾಪಸ್ ಮಾಡಿದೆ. ಫ್ಲಿಪ್ ಕಾರ್ಟ್ ಕಂಪನಿ ತನ್ನ ಸಹಾಯಕ್ಕೆ ಬಂದಿದ್ದು, ನೀಡಿದ್ದ ಹಣವನ್ನು ವಾಪಸ್ ಕೊಟ್ಟಿದೆ ಎಂದು ರಮಣ್ ಮರು ಪೋಸ್ಟ್ ಮಾಡಿದ್ದಾರೆ. ಇದೇ ರೀತಿ ಕೆಲವರು ಆನ್ಲೈನ್ ಮಾರುಕಟ್ಟೆಯಲ್ಲಿ ಆಗಿರುವ ಎಟವಟ್ಟಿನ ಬಗ್ಗೆ ಬರೆದುಕೊಂಡಿದ್ದಾರೆ. ಬಿಹಾರದಲ್ಲಿ ಡ್ರೋಣ್ ಕ್ಯಾಮರಾಕ್ಕೆ ಆರ್ಡರ್ ಮಾಡಿದ್ದ ವ್ಯಕ್ತಿಗೆ ಚೀಲದಲ್ಲಿ ಬಟಾಟೆ ಪಾರ್ಸೆಲ್ ಬಂದಿದ್ದ ಸಂಗತಿ ಕಳೆದ ಸೆಪ್ಟಂಬರ್ ತಿಂಗಳಲ್ಲಿ ಸುದ್ದಿಗೆ ಗ್ರಾಸವಾಗಿತ್ತು.
Flipkart’s big Diwali sale has just concluded, but the e-commerce giant faced backlash online after a Mangaluru customer complained of a curious case. Chinmaya Ramana ordered a laptop on Flipkart and to his shock, received a big stone and some e-waste instead. Ramana said in a series of tweets that he was regretting making the purchase on Flipkart and urged others not to shop on the platform as they would be left feeling “helpless" like him. However, a day later, Ramana said that Flipkart had refunded the full amount and that he would be continuing to shop with the platform.
13-09-25 10:19 am
HK News Desk
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm