ನಾಲ್ವರ ಆತ್ಮಹತ್ಯೆ ಎಂದು ವದಂತಿ ; ಫುಡ್ ಪಾಯ್ಸನ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದ ಕುಟುಂಬ ! 

26-10-22 10:41 pm       Mangalore Correspondent   ಕರಾವಳಿ

ಕಂಕನಾಡಿ ಬಳಿಯ ಜೆಪ್ಪು ಬಪ್ಪಾಲ್ ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಯತ್ನ ಮಾಡಿದ್ದಾರೆ ಎನ್ನುವ ವದಂತಿ ಹರಡಿತ್ತು. ಬಳಿಕ ಪೊಲೀಸರು ಚೆಕ್ ಮಾಡಿದಾಗ, ಫುಡ್ ಪಾಯ್ಸನ್ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವುದು ತಿಳಿದುಬಂತು. 

ಮಂಗಳೂರು, ಅ.26 : ಕಂಕನಾಡಿ ಬಳಿಯ ಜೆಪ್ಪು ಬಪ್ಪಾಲ್ ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಯತ್ನ ಮಾಡಿದ್ದಾರೆ ಎನ್ನುವ ವದಂತಿ ಹರಡಿತ್ತು. ಬಳಿಕ ಪೊಲೀಸರು ಚೆಕ್ ಮಾಡಿದಾಗ, ಫುಡ್ ಪಾಯ್ಸನ್ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವುದು ತಿಳಿದುಬಂತು. 

ಜೆಪ್ಪು ಬಪ್ಪಾಲ್ ನಿವಾಸಿ ಅರವಿಂದ ರಾವ್ (52), ಅವರ ಪತ್ನಿ ಪ್ರಭಾವತಿ (45), ಮಕ್ಕಳಾದ ಸೌರಭ್(20) ಮತ್ತು ಪ್ರತೀಕ್ (18) ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಧವಾರ ಬೆಳಗ್ಗೆ ಅವರು ಮನೆಯಲ್ಲಿ ಎದ್ದಿರಲಿಲ್ಲ. ಬೆಳಗ್ಗೆ ಬಾಗಿಲು ತೆಗೆಯದೇ ಇರುವುದನ್ನು ಗಮನಿಸಿದ ಸಂಬಂಧಿಕರು ಒಡೆದು ನೋಡಿದಾಗ ನಾಲ್ವರು ಕೂಡ ವಾಂತಿ ಮಾಡಿದ್ದು ಕಂಡುಬಂದಿದೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 

ಇವರು ನಿನ್ನೆ ರಾತ್ರಿ ಹೆಸರು ಬೇಳೆ ಹಾಗೂ ಐಸ್ ಕ್ರೀಂ ತಿಂದು ಮಲಗಿದ್ದಾರೆ ಎನ್ನಲಾಗಿದ್ದು ಅದು ಫುಡ್ ಪಾಯ್ಸನ್ ಆಗಿರುವುದಾಗಿ ನಂಬಲಾಗಿದೆ. ವೈದ್ಯರು ಚಿಕಿತ್ಸೆ ನೀಡಿದ್ದು ನಾಲ್ವರು ಕೂಡ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ. ‌ಆದರೆ ಈ ಘಟನೆ ಮಾತ್ರ ನಾಲ್ವರು ಆತ್ಮಹತ್ಯೆ ಯತ್ನ ಎಂದೇ ಸುದ್ದಿ ಹಬ್ಬುವಂತಾಗಿತ್ತು.‌ ಮನೆಯಲ್ಲಿ ವಾಂತಿ ಮಾಡಿ ಬಿದ್ದುಕೊಂಡಿದ್ದವರನ್ನು ಸ್ಥಳೀಯರು ಸೇರಿ ಆಸ್ಪತ್ರೆಗೆ ಒಯ್ದಿದ್ದರಿಂದ ಅಂತಹ ಸಂಶಯ ಬರುವಂತಾಗಿತ್ತು.‌ ಈ ಬಗ್ಗೆ ಅವರಲ್ಲಿ ವೈದ್ಯರು ಪ್ರಶ್ನೆ ಮಾಡಿದಾಗ, ಯಾವುದೇ ವಿಷಕಾರಿ ವಸ್ತು ತಿಂದಿಲ್ಲ ಎಂದಿದ್ದಾರೆ.

In a bizarre case, what was presumed to be a mass suicide attempt by a family of four turned out to be an instance of food poisoning.