ಯೋಗಿ ನಿಂದಿಸಿದ ಮಿಥುನ್ ರೈ ವಿರುದ್ಧ ಉಳ್ಳಾಲ ಠಾಣೆಗೆ ಹಿಂಜಾವೇ ದೂರು 

11-10-20 09:12 pm       Mangaluru Correspondent   ಕರಾವಳಿ

ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹೇಳಿಕೆ ನೀಡಿದ್ದನ್ನು ಖಂಡಿಸಿ ಹಿಂದು ಜಾಗರಣಾ ವೇದಿಕೆ ಉಳ್ಳಾಲ ಪ್ರಖಂಡವು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. 

ಉಳ್ಳಾಲ, ಅಕ್ಟೋಬರ್ 11: ಹಥ್ರಾಸ್ ಅತ್ಯಾಚಾರ ಪ್ರಕರಣ ವಿರೋಧಿಸಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇತ್ತೀಚೆಗೆ ತೊಕ್ಕೊಟ್ಟಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಖಂಡಿಸಿ ಹಿಂದು ಜಾಗರಣಾ ವೇದಿಕೆ ಉಳ್ಳಾಲ ಪ್ರಖಂಡವು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. 

ಸನಾತನ ಹಿಂದು ಸಮಾಜದ ಧಾರ್ಮಿಕ ಗುರುಗಳು, ಶ್ರದ್ಧೆಯ ಪೂಜ್ಯ ಸಂತರು ಆದ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆಥಿತ್ಯನಾಥ್ ವಿರುದ್ಧ ಅವಹೇಳನಕಾರಿ ಭಾಷಣ ಮತ್ತು ಬೆದರಿಕೆ ಒಡ್ಡಿ ಮಾತನಾಡಿದರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಯೋಗಿ ಆದಿತ್ಯನಾಥರು ಖಾವಿ ಧರಿಸಲು ಅಯೋಗ್ಯರು, ಅವರು ಮಂಗಳೂರಿಗೆ ಬಂದರೆ ಮಸಿ ಬಳಿಯುವುದಾಗಿ ಮಿಥುನ್ ರೈ ಹೇಳಿಕೆ ನೀಡಿದ್ದು ಖಂಡನೀಯ. ಇಂತಹ ಹೇಳಿಕೆಗಳು ಜಾತಿ, ಧರ್ಮಗಳ ನಡುವೆ ಘರ್ಷಣೆಗೆ ಕಾರಣವಾಗುತ್ತದೆಂದು ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ಪ್ರಕಾಶ್ ಕುಂಪಲ ದೂರಿದ್ದಾರೆ. 

ಹಿಂ.ಜಾ.ವೇ. ಮುಖಂಡರಾದ ಚರಣ್ ಕುತ್ತಾರ್, ಮಹೇಶ್ ಪಜೀರ್, ವಕೀಲರಾದ ಹರ್ಷಿತ್ ಜೊತೆಯಲ್ಲಿದ್ದರು.

Ullal Hindu Jagran Vedike activist file complaint on Youth Congress leader Mithun Rai for defamatory speech against UP chief minister Yogi Adityanath.