ಕೊರೊನಾ ಭಯ, ಶವ ಮೇಲೆತ್ತಲು ನಿರಾಕರಣೆ ; ಮೂಡಬಿದರೆ ಇನ್ಸ್ ಪೆಕ್ಟರ್ ಮಾಡಿದ್ದಾದರೂ ಏನು?

11-10-20 10:22 pm       Mangaluru Correspondent   ಕರಾವಳಿ

ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಶವ ಹೊರತೆಗೆಯಲು ಸ್ಥಳೀಯರು ಯಾರೂ ಮುಂದಾಗದೇ ಇದ್ದಾಗ ಮೂಡುಬಿದ್ರೆ ಇನ್ಸ್ ಪೆಕ್ಟರ್ ಸ್ವತಃ ಬಾವಿಗಿಳಿದು ಶವ ಮೇಲಕ್ಕೆತ್ತಿ ಮಾದರಿಯಾದ ಘಟನೆ ನಡೆದಿದೆ. 

ಮೂಡುಬಿದಿರೆ, ಅಕ್ಟೋಬರ್ ರ್ 11: ಕೊರೊನಾ ಭಯವೋ ಏನೋ.. ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಶವ ಹೊರತೆಗೆಯಲು ಸ್ಥಳೀಯರು ಯಾರೂ ಮುಂದಾಗದೇ ಇದ್ದಾಗ ಮೂಡುಬಿದ್ರೆ ಇನ್ಸ್ ಪೆಕ್ಟರ್ ಸ್ವತಃ ಬಾವಿಗಿಳಿದು ಶವ ಮೇಲಕ್ಕೆತ್ತಿ ಮಾದರಿಯಾದ ಘಟನೆ ನಡೆದಿದೆ. 

ಮೂಡುಬಿದ್ರೆಯ ಕಡಂದಲೆ ಗ್ರಾಮದ ಉಮನಪಾಲು ಎಂಬಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.  ಶವ ತೆಗೆಯಲು ಬಾವಿಗೆ ಯಾರೂ ಇಳಿಯದಿದ್ದಾಗ, ಮೂಡುಬಿದಿರೆ ಪೊಲೀಸ್ ಇನ್ಸ್ ಪೆಕ್ಟರ್ ದಿನೇಶ್ ಕುಮಾರ್ ಬಾವಿಗಿಳಿದಿದ್ದು ಬಾವಿಯಿಂದ ಶವ ಹೊರ ತೆಗೆದಿದ್ದಾರೆ. 

ವಿಜಯ ಕರ್ಕೇರ (47) ಮೃತ ವ್ಯಕ್ತಿ. ಕಳೆದ 3-4 ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವಿಜಯ ಕರ್ಕೇರ ಮನೆಯಲ್ಲಿ ಕಾಣದಿದ್ದಾಗ, ಮನೆಯವರು ಹುಡುಕಾಡಿದ್ದಾರೆ. ಬಾವಿಯ ಬಳಿ ವಿಜಯ ಅವರಿಗೆ ಸೇರಿದ ಬಟ್ಟೆ ಕಂಡುಬಂದಿದ್ದು, ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. 

ವಿಜಯ್ ಸಹೋದರ ಉದಯ ಪೂಜಾರಿ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ‌. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್ ನಿರೀಕ್ಷ ಬಿ.ಎಸ್.ದಿನೇಶ್ ಕುಮಾರ್ ಬಾವಿಗಿಳಿದು ಶವವನ್ನು ಮೇಲಕ್ಕೆ ಎತ್ತಲು ಸಹಾಯ ಮಾಡಿದ್ದಾರೆ. ಸಿಬ್ಬಂದಿಗಳು ಹಾಗೂ ಸ್ಥಳೀಯರು ಸಹಕರಿಸಿದ್ದಾರೆ.

Moodbidri Police inspector Dinesh Kumar gets down into well to lift the dead body of a suicide victim. His social work has gone viral on social media and has become the talk of the town.