ಬ್ರೇಕಿಂಗ್ ನ್ಯೂಸ್
13-10-20 10:04 am Headline Karnataka News Network ಕರಾವಳಿ
ಮಂಗಳೂರು, ಅಕ್ಟೋಬರ್ 13: ಹಾಲಿನ ಟೆಂಪೋದಲ್ಲಿ ಗೋಮಾಂಸ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ವಾಹನವನ್ನು ಬೆನ್ನಟ್ಟಿ ಹಿಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಬೆಳ್ಳಂಬೆಳಗ್ಗೆ ಬಿ.ಸಿ.ರೋಡ್ ಕಡೆಯಿಂದ ಬರುತ್ತಿದ್ದ ಹಾಲಿನ ವಾಹನವನ್ನು ಪಂಪ್ವೆಲ್ ಸರ್ಕಲ್ ಬಳಿ ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ ಟೆಂಪೋ ನಿಲ್ಲಿಸದೆ ಕಂಕನಾಡಿ ಕಡೆಗೆ ನುಗ್ಗಿದ್ದು ಕಾರ್ಯಕರ್ತರು ತಮ್ಮ ವಾಹನಗಳಲ್ಲಿ ಬೆನ್ನಟ್ಟಿದ್ದಾರೆ. ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಹಂಪನಕಟ್ಟೆಯ ವೃತ್ತದ ಬಳಿ ಪೊಲೀಸರು ಮತ್ತು ಬಜರಂಗದಳ ಕಾರ್ಯಕರ್ತರು ವಾಹನವನ್ನು ಅಡ್ಡಹಾಕಿದ್ದು ಟೆಂಪೋದಲ್ಲಿದ್ದ ಇಬ್ಬರು ಹೊರಗೆ ಓಡಿ ಪರಾರಿಯಾಗಿದ್ದಾರೆ. ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಾಲು ಸಾಗಿಸುವ ಟೆಂಪೋದಲ್ಲಿ ಪರಿಶೀಲನೆ ನಡೆಸಿದಾಗ, ಒಳಭಾಗದಲ್ಲಿ ಗೋಣಿ ಚೀಲದಲ್ಲಿ ಅಡಗಿಸಿಟ್ಟ ಗೋವುಗಳ ಮಾಂಸ ಪತ್ತೆಯಾಗಿದೆ.
ಮೂರ್ನಾಲ್ಕು ಗೋಣಿಗಳಲ್ಲಿ ಮಾಂಸವನ್ನು ತುಂಬಿಸಿಟ್ಟು ಎದುರಿಗೆ ಕಾಣುವಂತೆ ಹಾಲಿನ ಟ್ರೇಗಳನ್ನು ಇಡಲಾಗಿತ್ತು. ಬಜರಂಗದಳ ಕಾರ್ಯಕರ್ತರ ಮಾಹಿತಿ ಪ್ರಕಾರ, ಐನೂರು ಕೆಜಿ ಮಾಂಸ ಇರಬಹುದು ಎನ್ನಲಾಗುತ್ತಿದೆ. ಪೊಲೀಸರು ಮಾಂಸದ ಮೌಲ್ಯ, ಪ್ರಮಾಣದ ಬಗ್ಗೆ ತಪಾಸಣೆ ಆಗ್ತಾ ಇದೆ ಎಂದು ತಿಳಿಸಿದ್ದಾರೆ.
'ಆರೋಕ್ಯಾ' ಹೆಸರಿನ ಚಿಕ್ಕಮಗಳೂರು ಮೂಲದ ಹಾಲು ಆಗಿದ್ದು ಆರೋಕ್ಯಾ ನೇಮ್ ಪ್ಲೇಟ್ ಇರುವ ಟೆಂಪೋದಲ್ಲಿ ಗೋಮಾಂಸ ಪತ್ತೆಯಾಗಿದ್ದು ಇದೇ ಮೊದಲು. ಪೊಲೀಸರು ಮತ್ತು ಬಜರಂಗದಳ ಎಲರ್ಟ್ ಆದಬಳಿಕ ಹಾಲಿನ ವಾಹನದಲ್ಲಿ ಗೋಮಾಂಸ ಸಾಗಣೆ ಆಗುತ್ತಿರುವ ಗುಮಾನಿ ಕೇಳಿಬಂದಿತ್ತು. ಹಾಲಿನ ವಾಹನವಾದ್ರೆ ಪೊಲೀಸರು ಕೂಡ ಚೆಕ್ ಮಾಡಲ್ಲ. ಸಂಶಯವೂ ಬರಲ್ಲ ಎಂಬ ನೆಲೆಯಲ್ಲಿ ಅಕ್ರಮ ಸಾಗಾಟಕ್ಕೆ ಹೊಸ ತಂತ್ರ ಹೂಡಿದ್ದರು.
In the early morning hours on Tuesday, October 13, Bajrang Dal activists conducted an action After coming to know that beef was being illegally transported in a milk van.
06-06-25 10:58 pm
Bangalore Correspondent
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
Police Constable Protest, Commissioner Dayana...
06-06-25 09:03 pm
RCB Manager Arrest, Court; ಸಿಎಂ ಸೂಚನೆಯಂತೆ ತನಿ...
06-06-25 05:32 pm
Rcb, Death, Dayanand IPS, Congress: ಕಾಲ್ತುಳಿತ...
06-06-25 02:14 pm
06-06-25 11:08 pm
HK News Desk
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
MP Brijesh Chowta, Delegation: ಐದು ದೇಶಗಳಲ್ಲಿ...
03-06-25 10:10 pm
ಎರಡನೇ ಮಹಡಿಯಿಂದ ಕೆಳಕ್ಕೆ ಬಿದ್ದ ಕಟ್ಟಡ ಕಾರ್ಮಿಕನನ್...
01-06-25 12:35 pm
07-06-25 12:08 pm
Mangalore Correspondent
Magalore Bus Accident, Bangalore: ಮಂಗಳೂರು- ಬೆ...
07-06-25 11:46 am
ಮಂಗಳೂರಿನ ಹುಡುಗ ಜಾಗತಿಕ ವೇದಿಕೆಯತ್ತ ಹೆಜ್ಜೆ ; ಜೂನ...
06-06-25 09:29 pm
Mangalore Minister Mankal Vaidya: ನಾಪತ್ತೆಯಾದ...
06-06-25 07:20 pm
Puttur Arun Puthila, DK Sp Arun Kumar, Notice...
06-06-25 05:33 pm
03-06-25 10:25 pm
Mangalore Correspondent
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm
Mangalore Police, CCB, Cattle trafficking, Ta...
02-06-25 04:01 pm
Ullal, Mangalore, Crime: ಕೋಮು ದ್ವೇಷದ ನೆಲದಲ್ಲ...
01-06-25 11:02 pm