ಬ್ರೇಕಿಂಗ್ ನ್ಯೂಸ್
14-11-22 05:28 pm Mangalore Correspondent ಕರಾವಳಿ
ಮಂಗಳೂರು, ನ.14: ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಪರಾಕಾಷ್ಠೆಗೆ ತಲುಪಿರುವ ನಡುವಲ್ಲೇ ಸಂಸದ ನಳಿನ್ ಕುಮಾರ್, ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರ ರದ್ದುಗೊಂಡಿದ್ದು ಇದಕ್ಕೆ ಕಾರಣವಾದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ಪ್ರಧಾನಿ ಮೋದಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿ ಸುದ್ದಿಯಾಗಿದ್ದಾರೆ.
ಟೋಲ್ ಗೇಟ್ ವಿರೋಧಿ ಹೋರಾಟ ರಾತ್ರಿ –ಹಗಲೆನ್ನದೆ ಕಳೆದ 17 ದಿನಗಳಿಂದ ನಡೆಯುತ್ತಿದ್ದು, ಪ್ರತಿಭಟನೆ, ಹೋರಾಟ ಸಂಸದ ನಳಿನ್ ಕುಮಾರ್ ವಿರುದ್ಧವೇ ತಿರುಗಿದೆ. ಸಂಸದ ನಳಿನ್ ಕುಮಾರ್ ಒಂದು ತಿಂಗಳ ಹಿಂದೆಯೇ 20 ದಿನಗಳಲ್ಲಿ ಟೋಲ್ ಗೇಟ್ ರದ್ದಾಗುತ್ತೆ ಎಂದು ಹೇಳಿಕೆ ನೀಡಿದ್ದರು. ಆ ಗಡುವು ನವೆಂಬರ್ 7ಕ್ಕೆ ಮುಗಿದಿದ್ದು, ಭರವಸೆ ಹುಸಿಯಾಗಿದ್ದಕ್ಕೆ ನಗೆಪಾಟಲಿಗೂ ಈಡಾಗಿದ್ದರು. ಸಂಸದರ ಮತ್ತು ಹೆದ್ದಾರಿ ಅಧಿಕಾರಿಗಳ ಭರವಸೆಗಳೆಲ್ಲ ಗಾಳಿಗೆ ತೂರಿ ಹೋಗಿದ್ದವು. ಟೋಲ್ ಗೇಟ್ ತೆರವಾಗದೆ ಹೋರಾಟ ನಿಲ್ಲಲ್ಲ ಎಂದು ಹೋರಾಟಗಾರರು ಹೇಳಿದ್ದು ಧರಣಿ ಮುಂದುವರಿದಿತ್ತು.
ಇಂಥ ಸಂದರ್ಭದಲ್ಲೇ ಸಂಸದ ನಳಿನ್ ಕುಮಾರ್ ಟ್ವೀಟ್ ಬಂದಿದ್ದು, ಮತ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಅಭಿನಂದಿಸುವ ಹಳೆ ರಾಗವನ್ನು ಹಾಡಿದ್ದಾರೆ. ಟೋಲ್ ಗೇಟ್ ರದ್ದುಗೊಳಿಸುವ ಯಾವುದೇ ಆದೇಶ ಪತ್ರವನ್ನು ಹಾಕಿಲ್ಲ. ಟೋಲ್ ರದ್ದುಗೊಳಿಸಲು ಈ ಮೊದಲೇ ಕೇಂದ್ರ ಸಚಿವರು ಭರವಸೆ ನೀಡಿದ್ದರು. ಈಗ ತಾಂತ್ರಿಕ ಅಂಶ ಪೂರೈಸಿದ್ದಾರೆ ಎಂದು ಟ್ವೀಟ್ ನಲ್ಲಿ ನಳಿನ್ ತಿಳಿಸಿದ್ದಾರೆ. ಸುರತ್ಕಲ್ ಟೋಲ್ ಗೇಟ್ ರದ್ದಾಗುತ್ತೆ ಎಂದು ಸಂಸದ ನಳಿನ್ ಕುಮಾರ್ ಹೇಳುತ್ತಿರುವುದು ಇದು ಮೊದಲೇನಲ್ಲ. ಕಳೆದ ಮೂರು ವರ್ಷಗಳಲ್ಲಿ ಹತ್ತಾರು ಬಾರಿ ಇದೇ ರೀತಿಯ ಮಾತು ಹೇಳಿಕೊಂಡು ಬಂದಿದ್ದಾರೆ. ಇದೇ ಕಾರಣಕ್ಕೆ ಸಂಸದ ನಳಿನ್ ಟೋಲ್ ಹೆಸರಲ್ಲಿ ನಗೆಪಾಟಲಿಗೂ ಈಡಾಗಿದ್ದಾರೆ. ಈ ಬಾರಿ ಚುನಾವಣೆ ಕಾಲದಲ್ಲಿ ಪ್ರತಿಭಟನಕಾರರು ತುಳುನಾಡು ವಿರುದ್ಧ ಬಿಜೆಪಿ ಎನ್ನುವ ರೀತಿ ಬಿಂಬಿಸಿದ್ದರೂ, ಸಂಸದರು ಎಚ್ಚತ್ತಿರಲಿಲ್ಲ.
ಸಂಸದ ನಳಿನ್ ಕುಮಾರ್ ಟ್ವೀಟ್ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡರಲ್ಲಿ ಕೇಳಿದರೆ, ನಮಗೇನು ಮಾಹಿತಿ ಇಲ್ಲ ಎಂದಿದ್ದಾರೆ. ಕೇಂದ್ರ ಮಟ್ಟದಲ್ಲಿ ಆದೇಶ ಆಗಿದ್ದಿರಬಹುದು. ಅದರ ಪ್ರತಿಯನ್ನು ಟ್ವಿಟರ್ ನಲ್ಲಿ ಹಾಕಿರುತ್ತಿದ್ದರೆ ನಳಿನ್ ಟ್ವೀಟ್ ಗೆ ಹೆಚ್ಚು ಬಲ ಬರುತ್ತಿತ್ತು. ಇಲ್ಲದಿದ್ದರೆ ಸಂಸದರ ಮಾತಿಗೆ ಕಿಮ್ಮತ್ತು ಬರೋದಿಲ್ಲ.
ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದ್ದು, ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರ ಸಚಿವರಾದ ಶ್ರೀ @nitin_gadkari ಹಾಗೂ ಪ್ರಧಾನಿ ಶ್ರೀ @narendramodi ಅವರಿಗೆ ನಾಗರಿಕರ ಪರವಾಗಿ ಧನ್ಯವಾದಗಳು.
— Nalinkumar Kateel (@nalinkateel) November 14, 2022
ಟೋಲ್ ರದ್ದು ಮಾಡುವ ಭರವಸೆಯನ್ನು ಈ ಮೊದಲೇ ಕೇಂದ್ರ ಸಚಿವರು ನೀಡಿದ್ದು, ಈಗ ತಾಂತ್ರಿಕ ಅಂಶ ಪೂರೈಸಲಾಗಿದೆ.
The long-running campaign from the public and like-minded organisations has finally yielded a result. Surathkal toll gate has stopped collecting toll. BJP state president MP Nilin Kumar Kateel has confirmed it through a tweet.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm