ವಿಟ್ಲ; ಹಸಮಣೆ ಏರುವ ಮುನ್ನವೇ ವರನ ವಿರುದ್ಧ ದಾಖಲಾಯ್ತು ಅತ್ಯಾಚಾರ ಕೇಸ್!

13-10-20 11:13 pm       Mangaluru Correspondant   ಕರಾವಳಿ

ಮಣೆ ಏರಲು ತಯಾರಾಗಿದ್ದ ಯುವಕನ ಮೇಲೆ ಅತ್ಯಾಚಾರ ದೂರು ದಾಖಲಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ನಡೆದಿದೆ. 

ವಿಟ್ಲ, ಅಕ್ಟೋಬರ್ 13: ಹಸಮಣೆ ಏರಲು ತಯಾರಾಗಿದ್ದ ಯುವಕನ ಮೇಲೆ ಅತ್ಯಾಚಾರ ದೂರು ದಾಖಲಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ನಡೆದಿದೆ. 

ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಆಲಡ್ಕ ನಿವಾಸಿ ನಾಸೀರ್‌ (30) ಎಂಬಾತನ ವಿವಾಹ ಇಂದು ನಿಗದಿಯಾಗಿತ್ತು. ಇತ್ತ ನಾಸೀರ್ ಹಸಮಣೆ ಏರುತ್ತಿದ್ದಂತೆ ಯುವತಿಯೊಬ್ಬಳು ಅತ್ಯಾಚಾರ ದೂರು ದಾಖಲಿಸಿದ್ದಾಳೆ. 

ಮಾಣಿ ಸಮೀಪದ ಯುವತಿಯನ್ನು ಕಳೆದ 11 ವರ್ಷಗಳಿಂದ ಪ್ರೀತಿಸುತ್ತಿದ್ದು, ಯುವತಿಯನ್ನು ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಅನಂತರ ಯುವತಿಗೆ ಬೆದರಿಕೆಯನ್ನೂ ಒಡ್ಡಿದ್ದ ಎಂದು ದೂರಿನಲ್ಲಿ ದಾಖಲಾಗಿದೆ. 

ನಾಸೀರ್ ಪಾಣೆಮಂಗಳೂರಿನಲ್ಲಿ ಬೇರೆ ಯುವತಿ ಜೊತೆ ಮದುವೆಯಾಗುತ್ತಿರುವ ಬಗ್ಗೆ ತಿಳಿದು ತನ್ನ ಪೋಷಕರ ಜೊತೆ ಸೇರಿ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿ ವಿರುದ್ದ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.

Boy accused of rape charges on the day of his wedding by his girlfriend in vitla, Mangalore here on October 13, Tuesday, 2020.