ಬ್ರೇಕಿಂಗ್ ನ್ಯೂಸ್
14-10-20 11:34 am Mangaluru Correspondent ಕರಾವಳಿ
ಮಂಗಳೂರು, ಅಕ್ಟೋಬರ್ 14: ಮಾಂಸದ ಮಾರುಕಟ್ಟೆಯಲ್ಲಿ ದನದ ಮಾಂಸವನ್ನು ಬೆರೆಸಲಾಗುತ್ತದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಮೇಯರ್ ದಿವಾಕರ ಪಾಂಡೇಶ್ವರ್ ಮಂಗಳೂರಿನ ಮಾಂಸದ ಮಾರುಕಟ್ಟೆಗಳಿಗೆ ದಿಢೀರ್ ದಾಳಿ ನಡೆಸಿದ್ದಾರೆ.
ಉರ್ವಾ, ಉರ್ವಾ ಸ್ಟೋರ್ ಮತ್ತು ಕುದ್ರೋಳಿ ಕಸಾಯಿಖಾನೆಗೆ ಭೇಟಿ ನೀಡಿದ ಮೇಯರ್, ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿದರು. ಮಾಂಸದ ಮಾರುಕಟ್ಟೆಗಳಲ್ಲಿ ದಿನವಹಿ ವ್ಯಾಪಾರವಾಗುವ ಮಾಂಸದ ಪ್ರಮಾಣ, ಕಡಿಯುವ ಕುರಿ, ಆಗಳ ಕುರಿತು ರಶೀದಿ ಇಟ್ಟುಕೊಳ್ಳದಿರುವ ವಿಚಾರದ ಬಗ್ಗೆ ಮೇಯರ್ ವ್ಯಾಪಾರಿಗಳನ್ನು ತರಾಟೆಗೆತ್ತಿಕೊಂಡರು. ಎಲ್ಲಿಂದ ಕುರಿ, ಆಡುಗಳನ್ನು ತರುತ್ತೀರಿ, ಎಷ್ಟು ಕಡಿಯುತ್ತೀರಿ ಮತ್ತು ಮಾಂಸದ ಪ್ರಮಾಣ ಎಷ್ಟು ಎನ್ನುವ ಬಗ್ಗೆ ಕಂಪ್ಯೂಟರೈಸ್ಡ್ ಬಿಲ್ ಇಟ್ಟುಕೊಳ್ಳಬೇಕು. ಈ ಬಗ್ಗೆ ಪಾಲಿಕೆಯ ಆರೋಗ್ಯ ಇಲಾಖೆ ಅಧಿಕಾರಿಗಳು ದಿನವೂ ಚೆಕ್ ಮಾಡಬೇಕು ಎಂದು ಸೂಚನೆ ನೀಡಿದರು.
ದಾಳಿ ವೇಳೆ, ದಿನದ ಮಾಂಸ ಪತ್ತೆಯಾಗಿಲ್ಲ ಎಂದು ಮೇಯರ್ ದಿವಾಕರ್ ಹೇಳಿದ್ದಾರೆ. ಇದೇ ವೇಳೆ, ಕುದ್ರೋಳಿ ಕಸಾಯಿಖಾನೆಗೂ ಮೇಯರ್ ಭೇಟಿ ನೀಡಿದ್ದಾರೆ. ಅಲ್ಲಿ ಎಷ್ಟು ಪ್ರಮಾಣದಲ್ಲಿ ಡೈಲಿ ಆಡು, ಕುರಿ, ದನಗಳನ್ನು ಕಡಿಯಲಾಗುತ್ತದೆ ಎನ್ನುವ ಮಾಹಿತಿಯೇ ಇರಲಿಲ್ಲ. ಅದರ ಬಗ್ಗೆ ರಶೀದಿ ಕೇಳಿದ್ದಕ್ಕೆ ಅಲ್ಲಿನ ಸಿಬಂದಿಗಳು ಕೈಯಲ್ಲಿ ಬರೆದ ಚೀಟಿಗಳನ್ನು ಮುಂದಿಟ್ಟರು. ರಶೀದಿ, ಬಿಲ್ ಪುಸ್ತಕ ಇಟ್ಟುಕೊಳ್ಳದ ವ್ಯಾಪಾರಿಗಳ ವಿರುದ್ಧ ಗರಂ ಆದ ಮೇಯರ್, ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು.
ದಿನವೂ ದನ, ಆಡುಗಳನ್ನು ಕಡಿಯುವ ವೇಳೆ, ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿರಬೇಕು. ಅಧಿಕಾರಿಗಳ ಅನುಮತಿಯ ಬಳಿಕವೇ ವಧೆ ಮಾಡಬೇಕೆಂದು ನಿಯಮ ಇದೆ. ಆರೋಗ್ಯ ಅಧಿಕಾರಿಗಳು ಇದನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸೂಚನೆ ನೀಡಿದರು.
Mangaluru City Corporation (MCC) officials, including mayor Diwakara raided the slaughterhouse under the limits of MCC as there were allegations that beef meat is being mixed with mutton here on Wednesday 14th, October 2020.
26-04-24 11:17 pm
Bangalore Correspondent
ಬಿಜೆಪಿ ತನ್ನ ಭದ್ರಕೋಟೆಯಲ್ಲೂ ಗೆದ್ದೇ ಗೆಲ್ಲುತ್ತೇವೆ...
26-04-24 09:10 pm
Madikeri, election, heart attack; ಮಡಿಕೇರಿ ; ಮ...
26-04-24 06:14 pm
Chamarajanagar, villagers, Booth: ಮತದಾನ ಬಹಿಷ್...
26-04-24 04:53 pm
ಚಿತ್ರದುರ್ಗ ; ಲೋ ಬಿಪಿಯಿಂದ ಅಸ್ವಸ್ಥ , ಮತಗಟ್ಟೆಯಲ್...
26-04-24 03:04 pm
26-04-24 02:58 pm
HK News Desk
Road Accident In Telangana: ಹಾಳಾಗಿ ನಿಂತಿದ್ದ ಲ...
25-04-24 03:49 pm
Groom electrocuted in Rajasthan: ರೆಸಾರ್ಟ್ ನಲ್...
24-04-24 05:01 pm
Pm Modi, Muslims: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ...
22-04-24 10:37 pm
ಮದುವೆ ಮುಗಿಸಿ ವಾಪಾಸ್ ಆಗುವ ವೇಳೆ ಭೀಕರ ಅಪಘಾತ ; ಓ...
21-04-24 03:23 pm
26-04-24 10:45 pm
Mangalore Correspondent
Mangalore Voting, Election 2024; ದಕ್ಷಿಣ ಕನ್ನಡ...
26-04-24 10:32 pm
Karkala, Horse ride to cast his vote: ಕಾರ್ಕಳ...
26-04-24 09:28 pm
ಸುಳ್ಯ ; 18 ನಕ್ಸಲ್ ಪೀಡಿತ ಮತಗಟ್ಟೆಗಳಲ್ಲಿ ಶಸ್ತ್ರಸ...
26-04-24 08:42 pm
Mangalore live voting percentage: ದಕ್ಷಿಣ ಕನ್ನ...
26-04-24 05:56 pm
26-04-24 03:59 pm
Mangalore Correspondent
Mangalore Fraud, crime, Krishnaprasad Shetty:...
25-04-24 10:18 pm
Bangalore crime, Dacoity gang, 40 lakhs, robb...
25-04-24 03:33 pm
Gang raped in Bengaluru: ಬೆಂಗಳೂರಿನಲ್ಲಿ ಯುವತಿ...
25-04-24 12:19 pm
Glide touist bus, Mangalore, crime: ಬೆಂಗಳೂರು...
24-04-24 10:48 pm