ಬ್ರೇಕಿಂಗ್ ನ್ಯೂಸ್
15-10-20 02:43 pm Mangaluru Correspondent ಕರಾವಳಿ
ಪುತ್ತೂರು, ಅಕ್ಟೋಬರ್ 15: ಅಧಿಕೃತ ಏಜೆನ್ಸಿ ಹೆಸರಲ್ಲಿ ನಕಲಿ ವಾಹನ ವಿಮೆ ಮಾಡಿ ವಂಚಿಸುತ್ತಿರುವ ಪ್ರಕರಣ ಪುತ್ತೂರಿನಲ್ಲಿ ಕಂಡುಬಂದಿದೆ.
ಪುತ್ತೂರು ಆರ್ಟಿಒ ನಲ್ಲಿ ರಿಜಿಸ್ಟರ್ ಆಗಿದ್ದ ವಾಹನ ವಿಮೆಯನ್ನು ತನ್ನ ಹೆಸರಿಗೆ ವರ್ಗಾಯಿಸಲು ವ್ಯಕ್ತಿಯೊಬ್ಬ ಪುತ್ತೂರಿನ ವಿಮಾ ಕಚೇರಿಗೆ ಬಂದಿದ್ದಾಗ ನಕಲಿ ವಿಮೆಯ ಪ್ರಕರಣ ಬೆಳಕಿಗೆ ಬಂದಿದೆ.
ಹಳೆ ಕಾರು ಖರೀದಿಸಿದ್ದ ವ್ಯಕ್ತಿಯೊಬ್ಬ ತನ್ನ ಹೆಸರಿಗೆ ವಾಹನ ವಿಮೆ ಮಾಡಿಸಿಕೊಳ್ಳಲು ಕಚೇರಿಗೆ ಬಂದಿದ್ದ. ಪುತ್ತೂರಿನ ವಾಹನ ವಿಮೆಯ ಅಧಿಕೃತ ಏಜೆಂಟ್ ಜಯಾನಂದ ಅವರ ಏಜೆನ್ಸಿ ಸಂಖ್ಯೆ ಹೊಂದಿತ್ತು. ಅವಧಿ ಮುಗಿಯದ ವಿಮೆಯ ಬಗ್ಗೆ ಮಾಹಿತಿ ಕೆದಕಿದಾಗ, ಅದು ನಕಲಿಯಾಗಿರುವುದು ಕಂಡು ಬಂತು. ಬಳಿಕ ಅದರಲ್ಲಿ ನಮೂದಾಗಿದ್ದ ಏಜೆಂಟ್ ಕೋಡ್, ಜಯಾನಂದ ಅವರನ್ನು ಸಂಪರ್ಕಿಸಿದರು. ವಿಮೆ ನೋಂದಣಿಯಾದ ದಿನಾಂಕ ಏಜೆನ್ಸಿ ವತಿಯಿಂದ ಸದ್ರಿ ವಾಹನಕ್ಕೆ ವಿಮೆ ಮಾಡಿಲ್ಲ ಎಂದು ಕಂಪೆನಿಗೆ ತಿಳಿಸಿದ್ದರು. ಈ ವೇಳೆ ಇದು ನಕಲಿ ವಿಮೆ ಎಂಬ ಅನುಮಾನ ಖಾತರಿ ಆಗಿದೆ. ಇದೇ ವೇಳೆ, ಅದೇ ನಂಬರಿನ ಏಜೆನ್ಸಿ ಕೋಡ್ನಲ್ಲಿ ಇನ್ನೊಬ್ಬ ವ್ಯಕ್ತಿಗೂ ನಕಲಿ ವಿಮೆ ನೀಡಿರುವ ಮಾಹಿತಿ ಬಯಲಾಗಿದೆ.
ಪೊಲೀಸರು ತಪಾಸಣೆ ವೇಳೆ ವಿಮೆಯ ಅವಧಿ ದಿನಾಂಕ, ಹೆಸರು ಮಾತ್ರ ಗಮನಿಸುವ ಕಾರಣ ವಿಮೆಯ ಅಸಲಿ, ನಕಲಿ ಅಂಶ ಬಯಲಿಗೆ ಬರುವುದಿಲ್ಲ. ಜತೆಗೆ ಗ್ರಾಹಕರಿಗೂ ಈ ಬಗ್ಗೆ ಯಾವ ಸುಳಿವು ದೊರೆಯುವುದಿಲ್ಲ. ನಿಯಮಾನುಸಾರ ಆಯಾ ವಾಹನಗಳಿಗೆ ನಿರ್ದಿಷ್ಟ ಶುಲ್ಕ ಪಾವತಿಸಬೇಕಿದ್ದರೂ ನಕಲಿ ವಿಮೆಯಲ್ಲಿ ಕಡಿಮೆ ಹಣ ಪಡೆದು ಪಾಲಿಸಿ ನೀಡಿರುವುದು ಕಂಡುಬಂದಿದೆ. ಇದರಿಂದ ನಿಯಮ ಅನುಸಾರ ವಿಮೆ ನೀಡುವ ಏಜೆನ್ಸಿಗಳ ಕೋಡ್ ದುರ್ಬಳಕೆ ಮಾಡಿಕೊಳ್ಳುವ ಕಾರಣ ಅವರಿಗೂ ತೊಂದರೆ ಉಂಟಾಗಿದೆ.
ಈಗಾಗಲೇ ನೂರಾರು ವಾಹನಗಳಿಗೆ ಇಂತಹ ನಕಲಿ ವಿಮೆ ನೀಡಿ ವಂಚಿಸಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬಂದಿದೆ. ಸಂಚಾರ ಪೊಲೀಸರು ತಪಾಸಣೆ ವೇಳೆ ವಿಮೆ ಪಾಲಿಸಿಗಳನ್ನು ಸೂಕ್ಷವಾಗಿ ಪರಿಶೀಲಿಸಬೇಕಾಗಿದೆ. ನಕಲಿ ಕಂಡುಬಂದರೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ವಾಹನ ಮಾಲಕರು ಹಾಗೂ ಅಧಿಕೃತ ಏಜೆನ್ಸಿದಾರರು ಆಗ್ರಹಿಸಿದ್ದಾರೆ.
Puttur fake insurance copies being issued in the name of insurance companies have come to light after one of the persons vehicle insurance was claimed fake when he visited the Insurance office in Puttur.
28-03-24 11:00 pm
HK News Desk
DK Suresh, Assets : ಡಿಕೆಶಿ ಸೋದರ ಡಿ.ಕೆ.ಸುರೇಶ್...
28-03-24 09:45 pm
Yathindra Siddaramaiah, Amit Shah Gunda, rowd...
28-03-24 09:36 pm
Bangalore NIA arrest, Cafe blast, terror: ರಾಮ...
28-03-24 08:44 pm
Davangere Congress, Shamanur family, Vinay ku...
28-03-24 04:14 pm
28-03-24 10:51 pm
HK News Desk
Arawind Kejriwal, Delhi HC: ಬಂಧಿತ ಕೇಜ್ರಿವಾಲ್...
28-03-24 04:36 pm
80 ವರ್ಷದ ಅಜ್ಜಿಗೆ ಮೊಮ್ಮಗ, ಪತ್ನಿಯಿಂದ ಮನಬಂದಂತೆ ಹ...
28-03-24 01:15 pm
Tamil Nadu MP Ganeshamurthi dies: ಟಿಕೆಟ್ ಕೈತಪ...
28-03-24 11:48 am
AAPs Lone Lok Sabha, MP Sushil Rinku: ಆಮ್ ಆದ್...
27-03-24 10:24 pm
28-03-24 10:56 pm
Mangalore Correspondent
ಸರಕಾರಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಕ...
28-03-24 07:12 pm
Manjunath Bhandary, KPCC working president: ಕ...
28-03-24 05:20 pm
Fire at seafood factory in Baikampady, Mangal...
28-03-24 04:52 pm
Naxalites in Koojimale, Woman Naxalite, Puttu...
28-03-24 03:25 pm
28-03-24 10:30 pm
Mangalore Correspondent
Udupi murder Nejar, Praveen Chowgule news: ಉಡ...
28-03-24 02:18 pm
Mangalore Police, CCB, Drugs; ಆಂಧ್ರಪ್ರದೇಶದಿಂದ...
27-03-24 11:12 pm
Bank vehicle robbery, ATM in Kasaragod: ಕಾಸರಗ...
27-03-24 06:20 pm
CA arrested by Bengalore police, Rs 168 crore...
27-03-24 12:48 pm