ಆಹಾರ ಕಿಟ್ ಹೆಸರಲ್ಲಿ ಭ್ರಷ್ಟಾಚಾರ ; ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು 

15-10-20 08:10 pm       Udupi Reporter   ಕರಾವಳಿ

ಭ್ರಷ್ಟಾಚಾರ ನಡೆಸಿರುವ ಬಗ್ಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಸೇರಿದಂತೆ ಕಾರ್ಮಿಕ ಇಲಾಖೆಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. 

ಉಡುಪಿ, ಅಕ್ಟೋಬರ್ 15: ಕೋವಿಡ್ ಸಂಕಷ್ಟದ ಸಮಯದಲ್ಲಿ ಕಟ್ಟಡ ಕಾರ್ಮಿಕರಿಗೆ ನೆರವಾಗಲೆಂದು ರಾಜ್ಯ ಕಾರ್ಮಿಕ ಇಲಾಖೆ ಬಿಡುಗಡೆಗೊಳಿಸಿದ್ದ 45 ಲಕ್ಷ ರೂಪಾಯಿ ಮೌಲ್ಯದ ಐದು ಸಾವಿರ ಆಹಾರ ಕಿಟ್ ಗಳನ್ನು ಫಲಾನುಭವಿಗಳಿಗೆ ವಿತರಿಸದೆ ಭ್ರಷ್ಟಾಚಾರ ನಡೆಸಿರುವ ಬಗ್ಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಸೇರಿದಂತೆ ಕಾರ್ಮಿಕ ಇಲಾಖೆಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. 

ಕಾರ್ಕಳ ಪುರಸಭೆ ಸದಸ್ಯೆ ಶುಭದಾ ರಾವ್, ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದು ಬೆಂಗಳೂರಿಗೆ ತೆರಳಿ ತನಿಖೆ ನಡೆಸುವಂತೆ ಕೋರಿದ್ದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಕಾರ್ಕಳ ತಾಲೂಕಿನ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ ನೀಡಲು ಇಲಾಖೆಯಿಂದ ಹಣ ಮಂಜೂರು ಆಗಿತ್ತು. ಆದರೆ, ಆಹಾರ ಕಿಟ್ ಫಲಾನುಭವಿಗಳಿಗೆ ತಲುಪಿಲ್ಲ ಎನ್ನಲಾಗುತ್ತಿದೆ. ಇಲಾಖೆಯಿಂದ ಯಾರೊಬ್ಬರೂ ಆಹಾರ ಕಿಟ್ ಪಡೆದಿರುವ ಬಗ್ಗೆ ದಾಖಲೆಗಳಿಲ್ಲ. ಹೀಗಿದ್ದರೂ ಕಾರ್ಕಳ ಶಾಸಕರು ಬೋಗಸ್ ಪಟ್ಟಿ ತಯಾರಿಸಿ, ಸರಕಾರಕ್ಕೆ ನೀಡಿದ್ದಾರೆ‌‌. ಇದಕ್ಕಾಗಿ ಆಹಾರ ಕಿಟ್ ನೀಡಲು ಏಜನ್ಸಿ ಪಡೆದಿದ್ದ ಕಂಪೆನಿಯಿಂದ ಬೃಹತ್ ಮೊತ್ತದ ಹಣ ಕಾರ್ಕಳ ಶಾಸಕರ ಆಪ್ತರಿಗೆ ಸಂದಾಯವಾಗಿದೆ. ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಶುಭದಾ ರಾವ್ ದೂರಿನಲ್ಲಿ ತಿಳಿಸಿದ್ದಾರೆ.

In connection to Fraud in Distribution of government food kits, a case has been filed against Karkala MLA Sunil Kumar to Lokayukta.