ಬ್ರೇಕಿಂಗ್ ನ್ಯೂಸ್
08-02-23 02:55 pm Mangalore Correspondent ಕರಾವಳಿ
ಮಂಗಳೂರು, ಫೆ.8: ವಿಷಾಹಾರ ಸೇವನೆಯಿಂದ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾದ ಪ್ರಕರಣದ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ, ವಿದ್ಯಾರ್ಥಿಗಳ ಪೋಷಕರು ಸಿಟಿ ನರ್ಸಿಂಗ್ ಕಾಲೇಜಿನ ಶಕ್ತಿನಗರದ ಕ್ಯಾಂಪಸ್ ಆವರಣದಲ್ಲಿ ಕಾಲೇಜು ಸಿಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನರ್ಸಿಂಗ್, ಪ್ಯಾರಾ ಮೆಡಿಕಲ್ ಸೇರಿದಂತೆ ಎಲ್ಲ ವಿಭಾಗದ ಕಾಲೇಜಿನ ಮಕ್ಕಳಿಗೂ ರಜೆ ನೀಡಲಾಗಿದೆ.
ಇದೇ ವೇಳೆ, ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಗಳು ಚೇತರಿಕೆ ಕಂಡಿದ್ದು, ಬಹುತೇಕ ಮಂದಿ ಬಿಡುಗಡೆಯಾಗಿದ್ದಾರೆ. ಅವರನ್ನು ಪೋಷಕರ ಜೊತೆಗೆ ಮನೆಗೆ ಕಳುಹಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಲೇಜಿನ ಆಡಳಿತ ಮಂಡಳಿಯ ಪ್ರಮುಖರು, ನಮಗೆ ನೀರಿನ ಬಗ್ಗೆಯಾಗಲೀ, ಯಾವುದೇ ತೊಂದರೆ ಆಗುತ್ತಿರುವ ಬಗ್ಗೆ ದೂರು ಬಂದಿರಲಿಲ್ಲ. ಏನು ಸಮಸ್ಯೆ ಇದೆಯೋ ಅದನ್ನು ಸರಿಪಡಿಸುತ್ತೇವೆ. ಸದ್ಯಕ್ಕೆ ಒಂದು ವಾರದ ಮಟ್ಟಿಗೆ ಕಾಲೇಜಿಗೆ ರಜೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕಾಲೇಜಿನಲ್ಲಿ ಅತಿ ಹೆಚ್ಚು ಕೇರಳ ಮೂಲದ ವಿದ್ಯಾರ್ಥಿನಿಯರಿದ್ದು, ಅವರನ್ನು ಮರಳಿ ಊರಿಗೆ ಕಳುಹಿಸಲಾಗಿದೆ. ಎರ್ನಾಕುಲಂ, ಕೊಟ್ಟಾಯಂ, ತ್ರಿಶ್ಶೂರು ಹೀಗೆ ಹಲವು ಜಿಲ್ಲೆಗಳ ವಿದ್ಯಾರ್ಥಿನಿಯರ ಪೋಷಕರು ಕಾಲೇಜಿಗೆ ಆಗಮಿಸಿದ್ದರು. ಅವರಲ್ಲಿ ಕೇಳಿದರೆ, ಮಕ್ಕಳು ಈ ಹಿಂದೆಯೂ ಫುಡ್ ಸರಿ ಇಲ್ಲ, ನೀರು ಒಳ್ಳೆದಿಲ್ಲ ಅಂತ ಹೇಳುತ್ತಿದ್ದರು. ಅದರ ಬಗ್ಗೆ ಕಾಲೇಜು ಸಿಬಂದಿಯ ಗಮನಕ್ಕೂ ತಂದಿದ್ದೇವೆ. ನಾಲ್ಕು ಬೋರ್ ವೆಲ್ ಗಳಿಂದ ನೀರು ಕೊಡುತ್ತಿದ್ದಾರೆ. ಅದರಿಂದಾಗಿ ತೊಂದರೆ ಆಗಿರಬಹುದು ಎಂದು ಹೇಳಿದ್ದಾರೆ.
ಆದರೆ ಈ ಬಗ್ಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ್ ಅವರಲ್ಲಿ ಕೇಳಿದಾಗ, ನೀರಿನ ಸಮಸ್ಯೆಯಿಂದ ಇದು ಸಂಭವಿಸಿದ್ದು ಆಗಿರಲಿಕ್ಕಿಲ್ಲ ಎಂದಿದ್ದಾರೆ. ನಾವು ಫುಡ್ ಸ್ಯಾಂಪಲನ್ನು ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸಿದ್ದೇವೆ. ಅಲ್ಲಿಂದ ವರದಿ ಬರಲು 2-3 ದಿನ ಬೇಕು. ಫುಡ್ಡಲ್ಲಿ ಏನೋ ಸಮಸ್ಯೆ ಆಗಿರಬೇಕು. ಅದರ ವರದಿ ಬಂದ ಬಳಿಕ ನಿಜಾಂಶ ತಿಳಿಯಲಿದೆ ಎಂದಿದ್ದಾರೆ. ಆಹಾರಕ್ಕೆ ಹಲ್ಲಿ ಬಿದ್ದಿರುವ ಸಾಧ್ಯತೆ ಇದೆಯೇ ಎಂದು ಕೇಳಿದ್ದಕ್ಕೆ, ಅದು ಆಗಿರಲಿಕ್ಕಿಲ್ಲ ಎಂದರು. ಪೊಲೀಸರಿಗೆ ದೂರು ಕೊಟ್ಟಿದ್ದೇವೆ. ಅವರ ಕಡೆಯಿಂದ ತನಿಖೆಯನ್ನು ಪೊಲೀಸರೇ ಮಾಡಬೇಕು. ಸದ್ಯಕ್ಕೆ ಬಹುತೇಕ ವಿದ್ಯಾರ್ಥಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಹೆಚ್ಚಿನವರು ಆತಂಕಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು ಎಂದಿದ್ದಾರೆ.
ಇತ್ತೀಚೆಗೆ ಕಾಸರಗೋಡಿನಲ್ಲಿ ಚಿಕನ್ ಬಿರಿಯಾನಿ ತಿಂದು ವಿದ್ಯಾರ್ಥಿನಿ ಸಾವನ್ನಪ್ಪಿದ ಪ್ರಕರಣದಲ್ಲಿ ಹೊಟೇಲ್ ಮಾಲೀಕ ಸೇರಿದಂತೆ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಆದರೆ ಮಂಗಳೂರಿನಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದರೂ, ಆಹಾರ ತಯಾರಿಸಿದವರನ್ನಾಗಲೀ, ಹಾಸ್ಟೆಲ್ ಸಿಬಂದಿಯನ್ನಾಗಲೀ ವಶಕ್ಕೆ ಪಡೆದು ವಿಚಾರಣೆ ನಡೆಸಿಲ್ಲ. ಕಾಟಾಚಾರಕ್ಕೆ ಎಫ್ಐಆರ್ ಮಾತ್ರ ದಾಖಲು ಮಾಡಿದ್ದಾರೆ.
Food poisoning at city hospital in Mangalore, holiday declared for students, officials wait for report.
18-03-24 09:50 pm
Bangalore Correspondent
PM Modi, Shivamogga: ಬಿಎಸ್ ವೈ ತವರಲ್ಲಿ ನಮೋ ರಣಕ...
18-03-24 07:07 pm
Mysuru Prathap Simha, Yaduveer, BJP: ರಂಗೇರಿದ...
18-03-24 06:11 pm
BJP leader DV Sadananda Gowda congress ; ಟಿಕೆ...
18-03-24 03:43 pm
Mangalore Charmadi Ghat accident, News, Truck...
18-03-24 12:39 pm
17-03-24 09:41 pm
HK News Desk
Lok sabha election, Karnataka Date result 202...
16-03-24 04:24 pm
Jammu and Kashmir, Accident: ಚಾಲಕನ ನಿಯಂತ್ರಣ ತ...
15-03-24 12:51 pm
Supreme Court, SBI Electoral bonds: ರಾಜಕೀಯ ಪಕ...
15-03-24 10:35 am
Petrol, Diesel Price; ಲೋಕಸಭಾ ಚುನಾವಣೆ ಹಿನ್ನೆಲೆ...
14-03-24 11:20 pm
18-03-24 11:01 pm
Mangalore Correspondent
ದೈವ, ದೇವರ ಹೆಸರಿನಲ್ಲಿ ಕಲಾವಿದರ ಮೇಲೆ ದಬ್ಬಾಳಿಕೆ ಸ...
18-03-24 10:56 pm
Mangalore Maiden bava: ಲೋಕಸಭೆ ಚುನಾವಣೆಗೆ ಪಕ್ಷೇ...
18-03-24 10:40 pm
Mangalore Mp candidate Brijesh Chowta, progra...
18-03-24 10:28 pm
Mangalore University, Harish Acharya, Electio...
18-03-24 05:39 pm
17-03-24 12:00 pm
Bangalore Correspondent
Shivamogga, Youth murdered: ಶಿವಮೊಗ್ಗ ; ಇನ್ನೋವ...
16-03-24 04:50 pm
Foreign Woman murder; ಸಿಲಿಕಾನ್ ಸಿಟಿಯಲ್ಲಿ ವಿದೇ...
14-03-24 09:40 pm
Shootout Bangalore Laxmi jewellery, video: ಬೆ...
14-03-24 04:04 pm
Tamil Nadu, gang-raped: ರಥೋತ್ಸವ ನೋಡಲು ಬಂದ 17...
13-03-24 12:03 pm