ರೈಲು ಡಿಕ್ಕಿಯಾಗಿ ಹೆಸರಾಂತ ಸಿವಿಲ್ ಗುತ್ತಿಗೆದಾರ ಸಾವು ; ತೊಕ್ಕೊಟ್ಟಿನ ಕಾಪಿಕಾಡಲ್ಲಿ ದಾರುಣ ಘಟನೆ 

09-03-23 07:40 pm       Mangalore Correspondent   ಕರಾವಳಿ

ರೈಲು ಡಿಕ್ಕಿ ಹೊಡೆದ ಪರಿಣಾಮ ಹೆಸರಾಂತ ಹಿರಿಯ ಸಿವಿಲ್ ಗುತ್ತಿಗೆದಾರರೋರ್ವರು ಸಾವನ್ನಪ್ಪಿದ ದಾರುಣ ಘಟನೆ ತೊಕ್ಕೊಟ್ಟು ಕಾಪಿಕಾಡಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. 

ಉಳ್ಳಾಲ, ಮಾ.9 : ರೈಲು ಡಿಕ್ಕಿ ಹೊಡೆದ ಪರಿಣಾಮ ಹೆಸರಾಂತ ಹಿರಿಯ ಸಿವಿಲ್ ಗುತ್ತಿಗೆದಾರರೋರ್ವರು ಸಾವನ್ನಪ್ಪಿದ ದಾರುಣ ಘಟನೆ ತೊಕ್ಕೊಟ್ಟು ಕಾಪಿಕಾಡಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. 

ಉಳ್ಳಾಲ ಬೈಲು ಗೇರು ಕೃಷಿ ಸಂಶೋಧನಾ ಕೇಂದ್ರದ ಬಳಿಯ ನಿವಾಸಿ ಜನಾರ್ಧನ ಆಚಾರಿ(78) ಮೃತ ದುರ್ದೈವಿ. ಜನಾರ್ಧನ ಅವರು‌ ಈ ಹಿಂದೆ ಹೆಸರಾಂತ ಸಿವಿಲ್ ಗುತ್ತಿಗೆದಾರರಾಗಿದ್ದರು. ಸುಮಾರು ನೂರರಷ್ಟು ಜನರನ್ನು ದಿನಗೂಲಿ ಕೊಟ್ಟು ಸಲಹುತ್ತಿದ್ದರು. ಜನಾರ್ಧನ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಷ್ಟಾವಂತ ಸೇವಕರಾಗಿದ್ದರು.

ಕಳೆದ ಕೆಲ ವರುಷಗಳಿಂದ ನರ ರೋಗದಿಂದ ಬಳಲುತ್ತಿದ್ದರು. ಗುರುವಾರ ಬೆಳಗ್ಗೆ ಅಪರೂಪದಲ್ಲಿ ಮನೆಯಿಂದ ಹೊರಟವರು ಸಮೀಪದ ಕಾಪಿಕಾಡಿನ ರೈಲ್ವೇ ಹಳಿಯಲ್ಲಿ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ದೊರಕಿದ್ದಾರೆ. ಜನಾನುರಾಗಿಯಾಗಿದ್ದ ಜನಾರ್ಧನ್ ಅವರ ಅಕಾಲಿಕ ಸಾವಿಗೆ ಜನಪ್ರತಿನಿಧಿಗಳು ,ನಾಗರಿಕರು ಕಂಬನಿ ಮಿಡಿದಿದ್ದಾರೆ. ಮೃತದೇಹವನ್ನ ರೈಲ್ವೇ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತರು ಇಬ್ಬರು ಪುತ್ರರು, ಪತ್ನಿಯನ್ನ ಅಗಲಿದ್ದಾರೆ.

Mangalore Man hit by speeding train, civil contractor killed on spot at Ullal. The deceased has been identified as Janardhan Achari (78).