ಬ್ರೇಕಿಂಗ್ ನ್ಯೂಸ್
18-03-23 04:26 pm Mangalore Correspondent ಕರಾವಳಿ
ಮಂಗಳೂರು, ಮಾ.18 : ನಗರದ ನಂತೂರು ವೃತ್ತದಲ್ಲಿ ಲಾರಿ ಚಾಲಕನ ಧಾವಂತಕ್ಕೆ ಸ್ಕೂಟರ್ ನಲ್ಲಿದ್ದ ಇಬ್ಬರು ಬಲಿಯಾಗಿದ್ದು ಸ್ಥಳದಲ್ಲಿ ಸೇರಿದ ಸಾರ್ವಜನಿಕರು ರೊಚ್ಚಿಗೆದ್ದು ಲಾರಿ ಚಾಲಕನನ್ನು ಹಿಡಿದು ಥಳಿಸಿದ್ದಾರೆ.
ಪಂಪ್ವೆಲ್ ಕಡೆಯಿಂದ ನಂತೂರು ಮೂಲಕ ತೆರಳುತ್ತಿದ್ದ ಟಿಪ್ಪರ್ ಲಾರಿಯನ್ನು ಚಾಲಕ ಸತೀಶ್ ಗೌಡ ಪಾಟೀಲ್ ಅಜಾಗರೂಕತೆಯಿಂದ ಚಲಾಯಿಸಿದ್ದು ಅದೇ ಮಾರ್ಗದಲ್ಲಿ ಮುಂದಿನಿಂದ ಹೋಗುತ್ತಿದ್ದ ಸ್ಕೂಟರ್ ಮೇಲೆ ಹರಿದಿದೆ. ಸ್ಕೂಟರಿನಲ್ಲಿದ್ದ ಸುಲ್ತಾನ್ ಬತ್ತೇರಿ ನಿವಾಸಿ ಸ್ಯಾಮುಯೆಲ್ ಜೇಸುದಾಸ್ (66) ಮತ್ತು ಅವರ ಸಂಬಂಧಿಕರಾದ ಭೂಮಿಕಾ (17) ಮೇಲೆ ಲಾರಿ ಹರಿದಿದ್ದು ಸ್ಥಳದಲ್ಲೇ ಸಾವು ಕಂಡಿದ್ದಾರೆ. ಕಾರ್ಯ ನಿಮಿತ್ತ ನಂತೂರಿಗೆ ಬಂದು ಅವರು ಹಿಂದೆ ತೆರಳುತ್ತಿದ್ದರು.
ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಘಟನೆ ನೋಡಿ ಉದ್ರಿಕ್ತರಾಗಿದ್ದು ಲಾರಿ ಚಾಲಕನನ್ನು ಟಿಪ್ಪರ್ ನಿಂದ ಕೆಳಕ್ಕೆ ಎಳೆದು ಹಾಕಿದ್ದಾರೆ. ಬಳಿಕ ಬೈಕ್ ಸವಾರರು, ಆಟೋ ಚಾಲಕರು ಸೇರಿ ಲಾರಿ ಚಾಲಕನಿಗೆ ಯದ್ವಾತದ್ವಾ ಥಳಿಸಿದ್ದಾರೆ. ಟಿಪ್ಪರ್ ಸ್ಥಳೀಯವೇ ಆಗಿದ್ದು ಚಾಲಕ ಉತ್ತರ ಕರ್ನಾಟಕ ಮೂಲದ ನಿವಾಸಿಯಾಗಿದ್ದಾನೆ. ಈ ವೇಳೆ, ಟ್ರಾಫಿಕ್ ಬ್ಲಾಕ್ ಆಗಿದ್ದು ಆರೋಪಿ ಚಾಲಕನನ್ನು ಕದ್ರಿ ಸಂಚಾರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಂತೂರು ವೃತ್ತದಲ್ಲಿ ಭೀಕರ ಅಪಘಾತ ; ಸ್ಕೂಟರ್ ಮೇಲೆ ಹರಿದ ಟಿಪ್ಪರ್, ಸ್ಥಳದಲ್ಲೇ ತಂದೆ, ಮಗಳು ಸಾವು
#Mangalore #accident, truck hits scooter at #Nanthoor junction, grandfather and granddaughter killed on spot, driver thrashed pic.twitter.com/PZri7L62PK
— Headline Karnataka (@hknewsonline) March 18, 2023
Mangalore accident, truck hits scooter at Nanthoor junction, grandfather and granddaughter killed on spot, driver thrashed. The deceased have been identified as Samuel Jesudas (66) and 17 year old granddaughter Bhoomika (17). Angry public thrashed the Truck driver. Kadri police have arrested the driver.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 06:46 pm
HK News Desk
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
13-05-25 07:33 pm
Mangalore Correspondent
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm