ಬ್ರೇಕಿಂಗ್ ನ್ಯೂಸ್
26-10-20 06:16 pm Mangalore Correspondent ಕರಾವಳಿ
ಮಂಗಳೂರು, ಅಕ್ಟೋಬರ್ 26: ಮಂಗಳೂರು ನಗರದ ಅಲ್ಲಲ್ಲಿ ಪೊಲೀಸ್ ಇಲಾಖೆಯಿಂದ ಹಾಕಿರುವ ಸಿಸಿಟಿವಿಗಳಿವೆ. ಸಿಗ್ನಲ್, ಜಂಕ್ಷನ್, ಪ್ರಮುಖ ವೃತ್ತಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಸಿಗ್ನಲ್ ಜಂಪ್, ಅಪಘಾತ, ಅಪರಾಧ ಚಟುವಟಿಕೆ ಸಂದರ್ಭಗಳಲ್ಲಿ ಈ ಸಿಸಿಟಿವಿಗಳನ್ನು ಆಧರಿಸಿಯೇ ಪೊಲೀಸರು ತನಿಖೆ ನಡೆಸುತ್ತಾರೆ. ಆದರೆ ಕಳೆದ 2-3 ತಿಂಗಳಿನಿಂದ ಈ ಸಿಸಿಟಿವಿಗಳು ವರ್ಕ್ ಆಗ್ತಾ ಇಲ್ಲ ಎನ್ನೋ ಮಾಹಿತಿ ಹೊರಬಿದ್ದಿದೆ.
ಇಂದು ಬೆಳಗ್ಗೆ ಲಾಲ್ ಬಾಗ್ ಜಂಕ್ಷನ್ನಲ್ಲಿ ಒಂದು ಅಪಘಾತ ಆಗಿತ್ತು. ಅಪಘಾತದ ಬಗ್ಗೆ ಯುವಕನೊಬ್ಬ ದೂರು ಕೊಡಲು ಪೊಲೀಸ್ ಠಾಣೆಗೆ ಹೋದಾಗ ಸಿಸಿಟಿವಿ ಸಂಪರ್ಕ ಕಡಿತ ಆಗಿರುವ ವಿಚಾರವನ್ನು ಪೊಲೀಸರೇ ಹೇಳಿಕೊಂಡು ಅಸಹಾಯಕತೆ ವ್ಯಕ್ತಪಡಿಸಿದ್ದಾರಂತೆ! ಪಿವಿಎಸ್ ಕಡೆಯಿಂದ ಬರುತ್ತಿದ್ದ ಸ್ಕೂಟರ್ ಸವಾರನೊಬ್ಬ ಲಾಲ್ ಬಾಗ್ ಜಂಕ್ಷನ್ನಲ್ಲಿ ಸಿಗ್ನಲ್ ಜಂಪ್ ಮಾಡಿ, ಕೆಎಸ್ಸಾರ್ಟಿಸಿ ಕಡೆಗೆ ತಿರುಗಿದ್ದು, ಲೇಡಿಹಿಲ್ ಕಡೆಯಿಂದ ಬರುತ್ತಿದ್ದ ಸ್ಕೂಟರ್ ಸವಾರನಿಗೆ ಡಿಕ್ಕಿಯಾಗಿದ್ದ. ಇದರಿಂದ ಎದುರಿನ ಸ್ಕೂಟರ್ ರಸ್ತೆಗೆ ಬಿದ್ದು ಮುಂಭಾಗ ಜಖಂ ಆಗಿತ್ತು. ಘಟನೆ ನಡೆದ 11 ಗಂಟೆ ವೇಳೆಗೆ ಅಲ್ಲಿ ಪೊಲೀಸರು ಇರಲಿಲ್ಲ. ಡಿಕ್ಕಿಯಾದ ಸ್ಕೂಟರ್ ಹೊಸತಾಗಿದ್ದು (ಟಿವಿಎಸ್ ಎಂಟಾರ್ಕ್- 125) ಇನ್ನೂ ನಂಬರ್ ಪ್ಲೇಟ್ ಆಗಿರಲಿಲ್ಲ. ಸ್ಕೂಟರಿನಲ್ಲಿ ಒಬ್ಬ ಹುಡುಗ ಮತ್ತು ಹುಡುಗಿ ಇದ್ದಳು. ಡಿಕ್ಕಿಯಾಗಿಸಿ ಪರಾರಿಯಾಗಿದ್ದ ಸ್ಕೂಟರನ್ನು ಅಪಘಾತಕ್ಕೀಡಾದ ಸ್ಕೂಟರ್ ಸವಾರ ಯುವಕ ಮಂಜುನಾಥ ಹಿಂಬಾಲಿಸಿದ್ದಾನೆ. ಆದರೆ, ಅವರು ಕೆಎಸ್ಸಾರ್ಟಿಸಿ, ಬಿಜೈ ಬಳಿಕ ತಪ್ಪಿಸಿಕೊಂಡಿದ್ದಾರೆ.

ಆಬಳಿಕ ಬರ್ಕೆ ಠಾಣೆಗೆ ತೆರಳಿದ ಮಂಜುನಾಥ್, ಪೊಲೀಸರಲ್ಲಿ ದೂರು ಹೇಳಿದ್ದಾನೆ. ಅದು ಟ್ರಾಫಿಕ್ ಬರೋದ್ರಿಂದ ನೀನು ಪಾಂಡೇಶ್ವರ ಠಾಣೆಗೆ ಹೋಗು, ಅಲ್ಲಿ ದೂರು ದಾಖಲಿಸುತ್ತಾರೆಂದು ಬರ್ಕೆ ಪೊಲೀಸರು ಸಾಗಹಾಕಿದ್ದಾರೆ. ಮಂಜುನಾಥ್, ಪಾಂಡೇಶ್ವರಕ್ಕೆ ತೆರಳಿ ದೂರು ಹೇಳಿಕೊಂಡಿದ್ದಾನೆ. ಡಿಕ್ಕಿಯಾದ ಸ್ಕೂಟರ್ ನಂಬರ್ ಇಲ್ಲದಿರುವುದರಿಂದ ದೂರು ಕೊಟ್ಟು ಏನು ಪ್ರಯೋಜನ. ಕದ್ರಿ ಠಾಣೆಯಲ್ಲಿ ಸಿಸಿಟಿವಿ ಕಂಟ್ರೋಲ್ ಇದ್ದು, ಟ್ರಾಫಿಕ್ ಠಾಣೆಯೂ ಇದೆ. ಅಲ್ಲೇ ಹೋಗಿ ದೂರು ಕೊಟ್ಟು ವಿಚಾರಿಸಿದಲ್ಲಿ ಪತ್ತೆ ಮಾಡಬಹುದು ಎಂದಿದ್ದಾರೆ. ಅದರಂತೆ, ಕದ್ರಿ ಠಾಣೆಗೆ ಬಂದ ಯುವಕನಿಗೆ ಪೊಲೀಸರ ಮಾತು ಕೇಳಿ ಶಾಕ್ ಆಗಿತ್ತು.
ಸಿಸಿಟಿವಿ ಈಗ ವರ್ಕ್ ಆಗ್ತಾ ಇಲ್ಲ. ಎರಡು ತಿಂಗಳು ಮೇಲಾಯ್ತು. ರೋಡ್ ರಿಪೇರಿ ಕೆಲಸದ ವೇಳೆ ಸಿಸಿಟಿವಿ ಸಂಪರ್ಕ ಕಡಿತ ಆಗಿದ್ದು ಇನ್ನೂ ಸರಿಯಾಗಿಲ್ಲ. ಬೆಂದೂರು ವೆಲ್ ಬಿಟ್ಟರೆ ಬೇರೆ ಯಾವುದೂ ವರ್ಕ್ ಆಗಲ್ಲ. ಇದರಿಂದಾಗಿ ಹಲವು ಅಪಘಾತ ಪ್ರಕರಣಗಳು ಟ್ರೇಸ್ ಆಗದೆ ಉಳಿದಿವೆ. ನಾವು ಏನು ಮಾಡಕ್ಕಾಗತ್ತೆ ಎಂದು ಅಲ್ಲಿನ ಪೊಲೀಸರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನೀವು ಇನ್ಶೂರೆನ್ಸ್ ಕ್ಲೈಮ್ ಮಾಡ್ಕೊಳ್ಳಿ. ಅದಕ್ಕೆ ಬೇಕಾದ್ರೆ ಪಾಂಡೇಶ್ವರ ಠಾಣೆಗೆ ಹೋಗಿ ಎನ್ ಸಿ ಮಾಡಿಕೊಳ್ಳಿ ಎಂದು ಪುಕ್ಕಟೆ ಸಲಹೆ ನೀಡಿದ್ದಾರೆ.

ಬಳಿಕ ಪಾಂಡೇಶ್ವರಕ್ಕೆ ಹೋಗಿ, ಇನ್ಸೂರೆನ್ಸ್ ಪಡೆಯುವ ಸಲುವಾಗಿ ದೂರು ನೀಡಿದ್ದೇನೆ. ದೂರಿನ ಕೊನೆಯಲ್ಲಿ ಈ ಬಗ್ಗೆ ಕಾನೂನು ಕ್ರಮದ ಅಗತ್ಯವಿರುವುದಿಲ್ಲ ಎಂದು ಪೊಲೀಸರು ಬರೆಸಿದ್ದಾರೆ. ಇವರ ಸಿಸಿಟಿವಿಯ ಕರ್ಮದಿಂದಾಗಿ ನಮ್ಮ ಹೊಟ್ಟೆಗೆ ಹೊಡಿಯೋದು ಯಾಕೆ..? ಸ್ಕೂಟರ್ ರಿಪೇರಿಗೆ ಹತ್ತು ಸಾವಿರ ಖರ್ಚು ಆಗುವುದಂತೆ ಎಂದು ಮಂಜುನಾಥ್ ಅಲವತ್ತುಕೊಂಡಿದ್ದಾರೆ. ಮಂಗಳೂರಿನಲ್ಲಿ ಡೆಲಿವರಿ ಸರ್ವಿಸ್ ಕೆಲಸ ಮಾಡುವ ಮಂಜುನಾಥ್, ಸ್ಕೂಟರ್ ರಿಪೇರಿಗೆ ಇನ್ಸೂರೆನ್ಸ್ ಸಿಗಬಹುದೇ ಎನ್ನುವ ನಿರೀಕ್ಷೆಯಲ್ಲಿದ್ದಾನೆ.
Mangalore most of the cc cameras are in disorder since 2 months putting public in trouble as no footages are recorded during accidents causing public angry.
01-05-26 08:33 pm
HK News Staffer
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
02-05-26 11:18 am
HK News Staffer
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
02-05-26 12:19 pm
HK News Staffer
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm
ಮಕ್ಕಳ ಆಯೋಗ ಸಮಿತಿ ಸದಸ್ಯನಿಂದಲೇ ಹಲವು ಮಹಿಳೆಯರಿಗೆ...
01-05-26 01:45 pm