ಕುಂಭಾಸಿಯಲ್ಲಿ ಸರಣಿ ಅಪಘಾತ ; ಜೀಪು ಚಾಲಕನ ಧಾವಂತಕ್ಕೆ ಸ್ಕೂಟರ್ ಸವಾರ ಬಲಿ, ಅಂಗಡಿಗೆ ನುಗ್ಗಿ ನಿಂತ ಜೀಪು ! 

23-04-23 11:12 pm       Udupi Correspondent   ಕರಾವಳಿ

ಜೀಪು ಚಾಲಕನ ಧಾವಂತಕ್ಕೆ ಸರಣಿ ಅಪಘಾತ ನಡೆದಿದ್ದಲ್ಲದೆ, ಸ್ಕೂಟರ್ ಗೆ ಡಿಕ್ಕಿಯಾಗಿ ಅದರಲ್ಲಿದ್ದ ಸವಾರ ದಾರುಣ ಸಾವಿಗೀಡಾದ ಘಟನೆ ಆನೆಗುಡ್ಡೆಯ ಕುಂಭಾಶಿ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ನಡೆದಿದೆ‌. 

ಕುಂದಾಪುರ, ಎ.23 : ಜೀಪು ಚಾಲಕನ ಧಾವಂತಕ್ಕೆ ಸರಣಿ ಅಪಘಾತ ನಡೆದಿದ್ದಲ್ಲದೆ, ಸ್ಕೂಟರ್ ಗೆ ಡಿಕ್ಕಿಯಾಗಿ ಅದರಲ್ಲಿದ್ದ ಸವಾರ ದಾರುಣ ಸಾವಿಗೀಡಾದ ಘಟನೆ ಆನೆಗುಡ್ಡೆಯ ಕುಂಭಾಶಿ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ನಡೆದಿದೆ‌. 

ಭಾನುವಾರ ಸಂಜೆ ಘಟನೆ ನಡೆದಿದ್ದು ಉಡುಪಿಯಿಂದ ಕುಂದಾಪುರದತ್ತ ತೆರಳುತ್ತಿದ್ದ ಜೀಪು ರಸ್ತೆ ಬಿಟ್ಟು ಹೊರಗೆ ಬಂದಿದ್ದು ಸ್ಕೂಟರ್, ಬೈಕ್, ಸೈಕಲ್ ಮೇಲೆ ಏರಿ ಹೋಗಿದೆ. ಮೊದಲಿಗೆ ರಸ್ತೆ ಬದಿಯಿಂದ ತೆರಳುತ್ತಿದ್ದ ಸ್ಕೂಟರ್ ಗೆ ಡಿಕ್ಕಿಯಾಗಿದ್ದು ಆನಂತರ ನಿಲ್ಲಿಸಿದ್ದ ಬೈಕ್ ಮತ್ತು ಸೈಕಲ್ ಮೇಲೆ ಏರಿ ಹೋಗಿ ಮರಕ್ಕೆ ಹಾಗೂ ಅಂಗಡಿಗೆ ಡಿಕ್ಕಿಯಾಗಿ ನಿಂತಿದೆ. 

ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು ಸ್ಕೂಟರ್ ಸವಾರ ನಾಗರಾಜ್ ದೇವಾಡಿಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೈಕಲ್ ಮತ್ತು ಬೈಕ್ ಸವಾರರು ಗಾಯಗೊಂಡಿದ್ದಾರೆ. ಜೀಪು ಚಾಲಕನ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣವೆನ್ನಲಾಗಿದೆ.

A scooter rider lost his life in a series of accidents involving a jeep, a scooter, a bike, and a cycle on Sunday, April 23 evening in front of Chandika Durgaparameshwari temple in Kumbashi of Anegudde on National Highway 66. The deceased has been identified as Thekkate Nagaraj Devadiga.