ಬ್ರಹ್ಮಾವರ ಹೂಡೆ ; ಮೀನು ಹಿಡಿಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಯುವಕರು ನೀರುಪಾಲು 

24-04-23 11:25 am       Udupi Correspondent   ಕರಾವಳಿ

ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ವರು ಯುವಕರು ಬೋಟ್ ಮಗುಚಿ ನೀರುಪಾಲಾದ ಘಟನೆ ಬ್ರಹ್ಮಾವರ ತಾಲೂಕಿನ ಹೂಡೆಯ ಕುಕ್ಕುಡ ಎಂಬಲ್ಲಿ ನಡೆದಿದೆ.

ಉಡುಪಿ, ಎ.24: ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ವರು ಯುವಕರು ಬೋಟ್ ಮಗುಚಿ ನೀರುಪಾಲಾದ ಘಟನೆ ಬ್ರಹ್ಮಾವರ ತಾಲೂಕಿನ ಹೂಡೆಯ ಕುಕ್ಕುಡ ಎಂಬಲ್ಲಿ ನಡೆದಿದೆ. ರಂಜಾನ್ ರಜೆ ಹಿನ್ನೆಲೆಯಲ್ಲಿ ಸಂಬಂಧಿಕರ ಮನೆಗೆ ಬಂದಿದ್ದ ಶೃಂಗೇರಿ ಮೂಲದ ಇಬ್ಬರು ಯುವಕರು ಮತ್ತು ಬ್ರಹ್ಮಾವರ ಹೂಡೆಯ ಇಬ್ಬರು ಯುವಕರು ಮೃತಪಟ್ಟವರು.  

ಬ್ರಹ್ಮಾವರ ಹೂಡೆಯ ಫೈಜಾನ್, ಇಬಾದ್, ಇವರ ಸಂಬಂಧಿಕರಾದ ಶೃಂಗೇರಿ ಮೂಲದ ಸುಫಾನ್ ಮತ್ತು ಫರಾನ್ ಮೃತರು. ಇವರ ಜೊತೆಗಿದ್ದ ಇತರ ಮೂವರು ಯುವಕರು ಈಜಿ ದಡ ಸೇರಿದ್ದಾರೆ. ರಂಜಾನ್ ರಜೆ ಹಿನ್ನೆಲೆಯಲ್ಲಿ ಒಟ್ಟು ಏಳು ಯುವಕರು ಸೇರಿಕೊಂಡು ಸೋಮವಾರ ಸಂಜೆ ಹೂಡೆಯ ಗುಡ್ಡೇರಿ ಕಂಬಳದಿಂದ ಕುಕ್ಕುಡ ಕುದ್ರುವಿಗೆ ಬೋಟ್ ನಲ್ಲಿ ತೆರಳಿದ್ದರು. ಬೋಟ್ ನಲ್ಲಿ ಏಳು ಮಂದಿ ಇದ್ದ ಕಾರಣ ನಿಯಂತ್ರಣ ತಪ್ಪಿ ಬೋಟ್ ಮಗುಚಿದೆ ಎನ್ನಲಾಗುತ್ತಿದ್ದು ಏಳು ಮಂದಿಯೂ ನೀರಿಗೆ ಬಿದ್ದಿದ್ದಾರೆ. ಈ ವೇಳೆ, ನಾಲ್ವರು ನೀರಿನಲ್ಲಿ ಈಜಲಾಗದೆ ಮುಳುಗಿದ್ದಾರೆ. 

ಹುಡುಕಾಟದ ಬಳಿಕ ರಾತ್ರಿ ವೇಳೆ ಮೂವರ ಮೃತದೇಹ ಪತ್ತೆಯಾಗಿದೆ. ಇನ್ನೊಬ್ಬ ಯುವಕ ಕಣ್ಮರೆಯಾಗಿದ್ದ. ಮೂವರು ಯುವಕರು ಒಂದೇ ಕುಟುಂಬದ ಸೋದರ, ಸೋದರಿಯರ ಮಕ್ಕಳಾಗಿದ್ದು ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

Three youths drowned and one went missing after being swept away by river current here on Sunday, April 23. The incident occurred in the Honnala river in Brahmavar. Ibaz, Fazan, Sufan, and Farhan had come to their relative's house in Hoode to celebrate Ramzan. On Sunday evening, they went fishing in a boat when they were washed away.