ದಲಿತ ಕಾಲನಿಗೆ ಹಣದ ಆಮಿಷ ಆರೋಪ, ಆಕ್ಷೇಪ ; ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿಯ ವಿಡಿಯೋ ವೈರಲ್

09-05-23 10:40 pm       Mangalore Correspondent   ಕರಾವಳಿ

ಬೆಳ್ತಂಗಡಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ದಲಿತ ಕಾಲನಿಗೆ ತೆರಳಿ, ಹಣ ನೀಡಲು ಪ್ರಯತ್ನಿಸಿದ್ದಾರೆಂದು ಆರೋಪ ಕೇಳಿಬಂದಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿದೆ.

ಬೆಳ್ತಂಗಡಿ, ಮೇ 9: ಬೆಳ್ತಂಗಡಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ದಲಿತ ಕಾಲನಿಗೆ ತೆರಳಿ, ಹಣ ನೀಡಲು ಪ್ರಯತ್ನಿಸಿದ್ದಾರೆಂದು ಆರೋಪ ಕೇಳಿಬಂದಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿದೆ.

ಮೇ 8ರ ಸೋಮವಾರ ಸಂಜೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ರಾತ್ರಿ ವೇಳೆ ದಲಿತ ಕಾಲನಿ ಅಶೋಕ ನಗರ ಎಂಬಲ್ಲಿಗೆ ಶಾಸಕ ಹರೀಶ್ ಪೂಂಜ ಮತ್ತು ಬೆಂಬಲಿಗರು ತೆರಳಿದ್ದಾರೆ. ನಿಮಗೆ ಐದು ಲಕ್ಷ ಕೊಡುತ್ತೇನೆ, ನಿಮ್ಮೆಲ್ಲರ ಮತಗಳನ್ನು ಬಿಜೆಪಿಗೆ ಹಾಕಿಸಬೇಕು. ಅಲ್ಲದೆ, ಕಾಲನಿಯ ಎಲ್ಲರಿಗೂ ಮನೆ ನಿರ್ಮಿಸಿಕೊಟ್ಟು ಜಾಗದ ಹಕ್ಕುಪತ್ರ ಮಾಡಿಕೊಡುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಹೇಳಿದ್ದಾರೆ ಎನ್ನಲಾಗಿದೆ.

ಈ ವೇಳೆ, ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದು ಶಾಸಕರು ಮತ್ತು ಬೆಂಬಲಿಗರನ್ನು ತರಾಟೆಗೆತ್ತಿಕೊಂಡಿದ್ದಾರೆ. ಎರಡೂ ತಂಡಗಳ ಮಧ್ಯೆ ವಾಗ್ವಾದ ನಡೆದಿದ್ದು ಆನಂತರ ಶಾಸಕರು ಮತ್ತು ಬೆಂಬಲಿಗರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇದರ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

Beltangady BJP candidate Harish Poonja accused of enticing Dalit colony voters with cash, locals turn angry, video goes viral. Locals, who got angry at Harish Poonja, gheraoed him and exchanged heated words with his team members. It is said that Harish and his followers escaped from the spot as soon as the locals began gheraoing them.