ಬ್ರೇಕಿಂಗ್ ನ್ಯೂಸ್
17-05-23 09:59 pm Mangalore Correspondent ಕರಾವಳಿ
ಮಂಗಳೂರು, ಮೇ 17: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಬಂಧಿಸಿದ ಬಿಜೆಪಿ ಕಾರ್ಯಕರ್ತರಿಗೆ ಚಿತ್ರಹಿಂಸೆ ನೀಡಿದ ವಿಚಾರದಲ್ಲಿ ಪೊಲೀಸರು ಇಲಾಖಾ ತನಿಖೆ ಆರಂಭಿಸಿದ್ದಾರೆ.
ಪುತ್ತೂರು ಬಸ್ ನಿಲ್ದಾಣ ಆವರಣದಲ್ಲಿ ಭಾನುವಾರ ರಾತ್ರಿ ಬ್ಯಾನರ್ ಕಂಡುಬಂದಿತ್ತು. ಇಬ್ಬರು ನಾಯಕರಿಗೂ ಶ್ರದ್ಧಾಂಜಲಿ ಜೊತೆಗೆ ಚಪ್ಪಲಿ ಹಾರ ಹಾಕಿ ಅಣಕಿಸಲಾಗಿತ್ತು. ರಾಜ್ಯದಲ್ಲಿ ಮತ್ತು ಪುತ್ತೂರಿನಲ್ಲಿ ಬಿಜೆಪಿ ಹೀನಾಯ ಸೋಲಿಗೆ ಇವರೇ ಕಾರಣವೆಂದು ಕಾರ್ಯಕರ್ತರು ಆಕ್ರೋಶಗೊಂಡು ಚಪ್ಪಲಿ ಹಾರ ಹಾಕಿದ್ದರು. ಘಟನೆ ಸಂಬಂಧಿಸಿ ಪುತ್ತೂರಿನ ಬಿಜೆಪಿ ಪ್ರಮುಖರು ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಲ್ಲದೆ, ಹಿಂದು ಕಾರ್ಯಕರ್ತರಿಗೆ ಧಿಕ್ಕಾರ ಕೂಗಿದ್ದರು. ಅಲ್ಲದೆ, ಪುತ್ತೂರು ಪೊಲೀಸರಿಗೆ ಮನವಿ ಕೊಟ್ಟು ಆರೋಪಿಗಳನ್ನು ಬಂಧಿಸುವಂತೆ ಒತ್ತಡ ಹೇರಿದ್ದರು.
ಇದರ ಬೆನ್ನಲ್ಲೇ ಸೋಮವಾರ ಮಧ್ಯಾಹ್ನ ಏಳು ಮಂದಿಯನ್ನು ಬಂಧಿಸಿದ್ದು, ಅವರಿಗೆ ಅದೇ ದಿನ ಠಾಣೆಯಲ್ಲಿ ಕೂಡಿ ಹಾಕಿ ಪುತ್ತೂರು ನಗರ ಠಾಣೆ ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆ. ರಕ್ತ ಬರುವಷ್ಟು ಹೊಡೆದಿದ್ದಲ್ಲದೆ, ನೆಲದಲ್ಲಿ ಕೂರಲಾಗದಷ್ಟು ಹಿಂಸೆ ನೀಡಿದ್ದಾರೆ. ವಿಷಯ ತಿಳಿದ ಅರುಣ್ ಪುತ್ತಿಲ ಕಡೆಯವರು ಸೋಮವಾರ ನಡುರಾತ್ರಿಯಲ್ಲಿ ಠಾಣೆಗೆ ತೆರಳಿ, ಏಳು ಮಂದಿಯನ್ನೂ ಜಾಮೀನು ಕೊಡಿಸಿ ಬಿಡುಗಡೆ ಮಾಡಿಸಿದ್ದಾರೆ. ಮನೆಗೆ ಮರಳಿದ್ದ ಕಾರ್ಯಕರ್ತರ ಬೆನ್ನು, ಸೊಂಟದ ಹಿಂಭಾಗ, ತೊಡೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದು ಬೆತ್ತದ ಏಟಿಗೆ ನಡೆಯಲಾಗದಷ್ಟು ನೋವಿಗೆ ಒಳಗಾಗಿದ್ದರು. ಘಟನೆ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸಾರ್ವಜನಿಕ ವಲಯದಲ್ಲಿ ಮತ್ತೆ ಸಂಸದ ನಳಿನ್ ಕುಮಾರ್ ವಿರುದ್ಧವೇ ಆಕ್ರೋಶ ಕೇಳಿಬರುತ್ತಿದೆ.
ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರು ದೌರ್ಜನ್ಯ ನಡೆಸಿದ ಘಟನೆಯ ಸಚಿತ್ರ ವರದಿ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಒಳಗಡೆಯೇ ಇರಿಸು ಮುರಿಸು ಉಂಟಾಗಿದೆ. ಪಕ್ಷದ ಕಾರ್ಯಕರ್ತರಿಗೇ ಪೊಲೀಸರಿಂದ ನಾಯಕರು ಹೊಡೆಸಿದ್ದಾರೆ ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಘಟನೆ ಸಂಬಂಧಿಸಿ ಜಿಲ್ಲಾ ಎಸ್ಪಿ ಅಮಾಟೆ ವಿಕ್ರಂ ಅವರಲ್ಲಿ ಕೇಳಿದಾಗ, ಎಎಸ್ಪಿ ಧರ್ಮಪ್ಪ ನೇತೃತ್ವದಲ್ಲಿ ಇಲಾಖಾ ತನಿಖೆ ನಡೆಸಲಾಗುವುದು ಎಂದಿದ್ದಾರೆ. ಎಎಸ್ಪಿ ಧರ್ಮಪ್ಪ ಬಳಿ ಕೇಳಿದಾಗ, ನಾವು ಎಲ್ಲ ಕೋನಗಳಿಂದಲೂ ತನಿಖೆ ಮಾಡುತ್ತೇವೆ. ಠಾಣೆಯ ಸಿಸಿಟಿವಿಯಿಂದ ಹಿಡಿದು ಇದಕ್ಕೆ ಯಾರು ಹೊಣೆಯೆಂದು ಠಾಣೆಯ ಎಲ್ಲರನ್ನೂ ತನಿಖೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಘಟನೆಯನ್ನು ವಿಶ್ವ ಹಿಂದು ಪರಿಷತ್ ಖಂಡಿಸಿದ್ದು, ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದೆ. ಇದಲ್ಲದೆ, ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕೂಡ ಟ್ವೀಟ್ ಮಾಡಿದ್ದು, ಘಟನೆಯನ್ನು ಖಂಡಿಸುತ್ತೇನೆ, ದೂರು ಕೊಟ್ಟರೆ ಪೊಲೀಸರು ತನಿಖೆ ನಡೆಸುವುದು ಬಿಟ್ಟು ಚಿತ್ರಹಿಂಸೆ ನೀಡಿರುವುದು ಅಮಾನವೀಯ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಬಂಧಿಸಿದ ಬಿಜೆಪಿ ಕಾರ್ಯಕರ್ತರಿಗೆ ಚಿತ್ರಹಿಂಸೆ ನೀಡಿದ ವಿಚಾರದಲ್ಲಿ ಪೊಲೀಸರು ಇಲಾಖಾ ತನಿಖೆ ಆರಂಭಿಸಿದ್ದಾರೆ.
ನಳಿನ್, ಡಿವಿಎಸ್ ಭಾವಚಿತ್ರಕ್ಕೆ ಚಪ್ಪಲಿ ಹಾರ, ಶ್ರದ್ಧಾಂಜಲಿ ಕೋರಿ ಬ್ಯಾನರ್ ! ಪುತ್ತೂರಿನಲ್ಲಿ ಕಾರ್ಯಕರ್ತರ ಆಕ್ರೋಶ
Puttur BJP banner of Nalin Kateel and Sadananda Gowda with footwear, third degree torture by police to 7 arrested, Inquiry ordered by DK Sp Amate. The arrested were tortured and brutally beaten for which SP has ordered inquiry after the Pictures went viral.
30-05-25 11:13 am
Bangalore Correspondent
Mangalore, DK Shivakumar: ಮಂಗಳೂರಿನವರಿಗೆ ಹೊಟ್ಡ...
29-05-25 10:21 pm
Hassan Heart Attack, Death: ಹಾಸನದಲ್ಲಿ ಹೃದಯಾಘಾ...
29-05-25 03:34 pm
CM Siddaramaiah, B K Hariprasad, Mangalore Mu...
29-05-25 02:43 pm
COVID, African Swine Fever Bagalkote: ಕೊರೋನಾ...
29-05-25 02:19 pm
26-05-25 11:34 pm
HK News Desk
ಭಯೋತ್ಪಾದನೆ ವಿರುದ್ಧ ಭಾರತದ ರಾಜತಾಂತ್ರಿಕ ಬಲವರ್ಧನೆ...
26-05-25 10:13 pm
Gujrath, ATS: ಪಾಕ್ ಐಎಸ್ಐಗೆ ದೇಶದ ಭದ್ರತೆ ಬಗ್ಗೆ...
26-05-25 09:50 pm
ಪಾಕ್ ಐಎಸ್ಐಗೆ ದೇಶದ ಭದ್ರತೆ ಬಗ್ಗೆ ಸೂಕ್ಷ್ಮ ಮಾಹಿತಿ...
26-05-25 08:33 pm
Trump, Europe: ಟ್ರಂಪ್ ತೆರಿಗೆಯ ‘ಕದನ ವಿರಾಮ’ ; ಅ...
26-05-25 06:14 pm
31-05-25 01:40 pm
Mangalore Correspondent
Bharath Shetty, MLA, Mangalore: ಕಾಂಗ್ರೇಸ್ ಪಕ್...
31-05-25 12:10 pm
Ullal Montepadavu Landslide, Rain, Flood: ಮೊಂ...
31-05-25 12:05 pm
Sudheer Kumar Reddy, Mangalore Police Commiss...
30-05-25 10:46 pm
Mangalore Rain, Ullal, Death: ಮಳೆ ಅವಾಂತರ ; ಉಳ...
30-05-25 10:20 pm
29-05-25 11:04 pm
Mangalore Correspondent
Mangalore Crime, Konaje: ಮೊಂಟೆಪದವು ಕೆರೆಯಲ್ಲಿ...
29-05-25 07:59 pm
Mangalore Bantwal Abdul Rehman Murder, Arrest...
29-05-25 06:38 pm
Uppinangady, Blackmail, Goat Purchase, Puttur...
29-05-25 02:16 pm
Karkala, Chikkamagaluru: ನವಜಾತ ಶಿಶುವನ್ನು ಕಾರ್...
29-05-25 01:13 pm