ಬ್ರೇಕಿಂಗ್ ನ್ಯೂಸ್
05-07-23 10:01 pm Mangalore Correspondent ಕರಾವಳಿ
ಮಂಗಳೂರು, ಜುಲೈ 5: ಜೂನ್ ತಿಂಗಳ ಅಂತ್ಯಕ್ಕೆ ಆರಂಭಗೊಂಡ ಮುಂಗಾರು ಕಡೆಗೂ ತೀವ್ರತೆ ಪಡೆದಿದೆ. ಕಳೆದ ಎರಡು ದಿನಗಳಿಂದ ಕರಾವಳಿ ಭಾಗದಲ್ಲಿ ಮುಂಗಾರಿನ ಅಬ್ಬರ ಹಳೆಕಾಲದ ರೀತಿಯಲ್ಲೇ ಮರುಕಳಿಸಿದೆ. ಇಡೀ ದಿನವೂ ಎಡೆಬಿಡದೆ ಮಳೆ ಸುರಿಯುವುದು, ನಡು ನಡುವೆ ಬಿರುಸು ಪಡೆಯುವುದು ಮಳೆಗಾಲದ ಉಚ್ಛ್ರಾಯ ಸ್ಥಿತಿ. ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ನೋಡಿದರೆ, ಅದೇ ರೀತಿಯ ಅನುಭವ ಆಗುತ್ತದೆ.
ಹವಾಮಾನ ಇಲಾಖೆಯ ಪ್ರಕಾರ, ಜುಲೈ 4 ಮತ್ತು 5ರಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿತ್ತು. ಅಂದರೆ, 24 ಗಂಟೆಯಲ್ಲಿ 20 ಸೆಂಟಿ ಮೀಟರಿಗಿಂತ(200 ಮಿಮೀ) ಹೆಚ್ಚು ಮಳೆಯಾಗುತ್ತದೆ ಅನ್ನುವ ಅಂದಾಜು ಹೇಳಲಾಗಿತ್ತು. ಬಹುತೇಕ ಅದೇ ಪ್ರಮಾಣದಲ್ಲಿ ಮಳೆಯಾಗಿದ್ದು, ಜುಲೈ 5ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 101.3 ಮಿಮೀ ಅಂದರೆ, ಹತ್ತು ಸೆಂಟಿ ಮೀಟರ್ ಗಿಂತ ಹೆಚ್ಚು ಮಳೆಯಾಗಿದೆ. ಮೂಡುಬಿದ್ರೆಯಲ್ಲಿ 143 ಮಿಮೀ(14 ಸೆಮೀ) ಅತಿ ಹೆಚ್ಚು ಮಳೆಯಾಗಿದ್ದರೆ, ಆನಂತರ ಬೆಳ್ತಂಗಡಿಯಲ್ಲಿ 114 ಮಿಮೀ, ಬಂಟ್ವಾಳದಲ್ಲಿ 123 ಮಿಮೀ, ಮಂಗಳೂರಿನಲ್ಲಿ 97, ಪುತ್ತೂರಿನಲ್ಲಿ 90, ಸುಳ್ಯದಲ್ಲಿ 70, ಕಡಬದಲ್ಲಿ 77 ಮಿಮೀ ಮಳೆಯಾಗಿದೆ. ವಾಡಿಕೆಯ ಪ್ರಕಾರ, ಈ ಸಮಯದಲ್ಲಿ 38 ಮಿಮೀ ಮಳೆಯಾಗಬೇಕಿದ್ದರೆ, ಇದೀಗ 101 ಮಿಮೀ ಮಳೆ ದಾಖಲಾಗಿದೆ.


ಜುಲೈ 6 ಮತ್ತು 7ರಂದು ಆರೆಂಜ್ ಅಲರ್ಟ್ ನೀಡಲಾಗಿದ್ದು, ಇದರ ಪ್ರಕಾರ, 115 ಮಿಮೀಗಿಂತ 200 ಮಿಮೀ ಮಳೆಯಾಗಬಹುದು ಎಂಬ ಲೆಕ್ಕಾಚಾರ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಶಾಲೆ, ಕಾಲೇಜಿಗೆ ರಜೆ ಘೋಷಣೆ ಮಾಡಿದೆ. ಆದರೆ ಎರಡು ದಿನಗಳಿಂದ ಧಾರಾಕಾರ ಮಳೆಯಾದರೂ, ನದಿಗಳಲ್ಲಿ ನೀರಿನ ಹರಿವು ದೊಡ್ಡ ಮಟ್ಟಿನಲ್ಲಿ ಹೆಚ್ಚಿಗೆಯಾಗಿಲ್ಲ. ಜೂನ್ ತಿಂಗಳಲ್ಲಿ ವಾಡಿಕೆಯ ಮಳೆಯೂ ಬಾರದೇ ಇರುವುದರಿಂದ ಜೂನ್ ಕೊನೆಯ ವರೆಗೂ ಹೆಚ್ಚಿನ ಕಡೆಗಳಲ್ಲಿ ನದಿಗಳಲ್ಲಿ ಹರಿವು ಆರಂಭ ಆಗಿರಲಿಲ್ಲ.

ಮೊನ್ನೆ ಜುಲೈ ಬಳಿಕ ಮಳೆ ತೀವ್ರತೆ ಪಡೆದಿದ್ದು ಈಗಷ್ಟೇ ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ. ಹೀಗಾಗಿ ಎರಡು ದಿನಗಳಲ್ಲಿ ಎಡೆಬಿಡದೆ ಮಳೆ ಬಂದರೂ, ಬಂಟ್ವಾಳದಲ್ಲಿ ನೆರೆ ಆವರಿಸುವ ಸ್ಥಿತಿ ಬಂದಿಲ್ಲ. ತುಂಬೆಯ ಅಣೆಕಟ್ಟಿನಲ್ಲಿ ಇನ್ನೂ ನೀರು ತುಂಬಿಲ್ಲ. ಅಣೆಕಟ್ಟಿನ ಒಟ್ಟು 30 ಗೇಟ್ ಗಳಲ್ಲಿ 15 ಗೇಟನ್ನಷ್ಟೇ ಓಪನ್ ಮಾಡಲಾಗಿದೆ. ಇದಲ್ಲದೆ, ನೇತ್ರಾವತಿ ತುಂಬಿ ಹರಿಯುವ ಮಟ್ಟ 9 ಮೀಟರ್ ಆಗಿದ್ದರೆ, ಈಗ 3.6 ಮೀಟರ್ ಎತ್ತರದಲ್ಲಷ್ಟೇ ನೀರು ಹರಿಯುತ್ತಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
Hevay rain in Mangalore and moodbidri, yet dams not filled with enough water.
01-04-26 12:28 pm
HK News Staffer
ಕೇರಳದಲ್ಲಿ ಮಹಿಳೆಗೆ ಸಿಎಂ ಸ್ಥಾನ, ಉಚಿತ ಸಾರಿಗೆ ಪ್ರ...
31-03-26 10:13 am
ತಮಿಳುನಾಡಿನಲ್ಲಿ ಬಿಜೆಪಿ ಸೀಟು ಹಂಚಿಕೆಯಲ್ಲಿ ಲೋಪ ;...
29-03-26 10:19 am
RCB ಗೆಲುವಿಗೆ ರಕ್ತದಾನ ಅಭಿಯಾನ ; ಚಿನ್ನಸ್ವಾಮಿ ಉದ್...
28-03-26 08:39 pm
ಆಸ್ತಿ ಕಲಹ ; ಮೂವರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾ...
28-03-26 02:54 pm
01-04-26 12:46 pm
HK News Staffer
ಯುದ್ಧ ವಿರಾಮ ಉಲ್ಲಂಘಿಸಿ ಇರಾನ್ ಅಣು ಸ್ಥಾವರಕ್ಕೆ ಬಾ...
31-03-26 11:00 pm
ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸೋದರ ತಾಹಿ...
31-03-26 03:30 pm
ಸಂಧಾನ ಮಾತುಕತೆ ಒಪ್ಪದಿದ್ದರೆ ಇರಾನ್ ಸರ್ವನಾಶ ; ಭೂದ...
31-03-26 10:43 am
ಗಲ್ಫ್ ಯುದ್ಧ ಎಫೆಕ್ಟ್ ; ಡಾಲರ್ ಮುಂದೆ ರುಪಾಯಿ ಮಹಾಪ...
30-03-26 10:31 pm
31-03-26 10:06 pm
HK News Desk
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
ಅವಳೇ ಮಗನನ್ನು ವಿಷ ಕೊಟ್ಟು ಕೊಂದಿದ್ದಾಳೆ, ವಿಷಯ ಮುಚ...
31-03-26 06:27 pm
ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನಿಂದ ಹೊರಬಿದ್...
31-03-26 03:01 pm
ಮಂಗಳೂರು ಬಂದರಿಗೆ ಬರಲಿದೆ ಮತ್ತೆರಡು ಎಲ್ಪಿಜಿ ಹೊತ್ತ...
30-03-26 11:13 pm
31-03-26 11:11 am
HK News Staffer
ಮದುವೆ ಆಗಿದ್ರೂ ಲವರ್ ನಂಟು ; ಹಣಕ್ಕಾಗಿ ಪೀಡಿಸಿ ಬ್ಲ...
30-03-26 07:35 pm
ತಿಂಗಳ ಹಿಂದಷ್ಟೇ ರಿಜಿಸ್ಟರ್ ಮದುವೆಯಾಗಿದ್ದ ಬೆಳ್ತಂಗ...
29-03-26 10:36 pm
ಟ್ಯಾಬ್ಲೆಟ್ ಆರಿಫ್ ಹತ್ಯೆ ; ಟೋಪಿ ನೌಫಾಲ್ ಸಾವನ್ನ ಸ...
29-03-26 10:22 pm
ಅರ್ಕುಳ ಬಳಿ ಹೆದ್ದಾರಿಯಲ್ಲಿ ಹಾಲಿನ ಟ್ಯಾಂಕರ್ ಗೆ ಹಿ...
29-03-26 07:49 pm