Kadaba Wife Death: ಕಡಬ ; ಪತಿಗೆ ವಿಷ ಜಂತು ಕಚ್ಚಿದ ಆಘಾತ, ಸುದ್ದಿ ಕೇಳುತ್ತಲೇ  ಹೃದಯಘಾತದಿಂದ ಪತ್ನಿ ಸಾವು 

08-08-23 10:33 pm       Mangalore Correspondent   ಕರಾವಳಿ

ಪತಿಗೆ ವಿಷ ಜಂತುವೊಂದು ಕಚ್ಚಿದೆ ಎಂಬ ಸುದ್ದಿ ಕೇಳಿ ಅಘಾತಗೊಂಡ ಪತ್ನಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದಲ್ಲಿ ನಡೆದಿದೆ.

ಉಪ್ಪಿನಂಗಡಿ, ಆಗಸ್ಟ್ 8: ಪತಿಗೆ ವಿಷ ಜಂತುವೊಂದು ಕಚ್ಚಿದೆ ಎಂಬ ಸುದ್ದಿ ಕೇಳಿ ಅಘಾತಗೊಂಡ ಪತ್ನಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ತೋಟ ಮನೆ ನಿವಾಸಿ, ಅಂಚೆ ಇಲಾಖೆಯ ನಿವೃತ್ತ ಸಿಬಂದಿ ಪದ್ಮಯ್ಯ ಗೌಡರ ಪತ್ನಿ ದೇವಕಿ ಯಾನೆ ಸೇಸಮ್ಮ (60) ಮೃತಪಟ್ಟವರು.

ಪದ್ಮಯ್ಯ ಗೌಡ ತಮ್ಮ ತೋಟದಲ್ಲಿ ಕೃಷಿ ಕೆಲಸದಲ್ಲಿ ನಿರತರಾಗಿದ್ದ ವೇಳೆ ವಿಷಜಂತುವೊಂದು ಕಡಿದಿತ್ತು. ಅಸ್ವಸ್ಥರಾಗಿದ್ದ ಅವರು ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಈ ಘಟನೆಯಿಂದ ಅಘಾತಗೊಂಡ ಅವರ ಪತ್ನಿ ದೇವಕಿ ಅವರು ಅದೇ ದಿನ ರಾತ್ರಿ ಹೃದಯಾಘಾತಕ್ಕೊಳಗಾಗಿ ಮೃತ

ಮೃತರು ಪತಿ, ಮೂವರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.

Wife dies of heart attack after hearing news of husband stung by poisonous be at Kadaba in Mangalore.