ಬ್ರೇಕಿಂಗ್ ನ್ಯೂಸ್
01-09-23 10:07 pm Mangalore Correspondent ಕರಾವಳಿ
ಮಂಗಳೂರು, ಸೆ.1: ಮದುವೆಗೆ ಭರ್ಜರಿ ಊಟದ ಗಮ್ಮತ್ತು ಕಾಮನ್. ಆದರೆ ಮದುವೆ ಊಟಕ್ಕೆ ಸೀಮಿತ ಮಂದಿಯಷ್ಟೇ ಪಾಲ್ಗೊಳ್ಳುವುದು. ದೊಡ್ಡ ಕುಳಗಳ ಮದುವೆ ಪಾರ್ಟಿಗೆ ದೊಡ್ಡವರು ಮಾತ್ರ ಆಹ್ವಾನಿತರಿರುತ್ತಾರೆ. ಆದರೆ ಇಂಥದ್ದೇ ಮದುವೆ ಕೂಟಗಳ ಮಾದರಿಯಲ್ಲಿ ಗಡದ್ದು ಊಟದ ಪ್ರೋಗ್ರಾಮ್ ಮಾಡಿದರೆ ಹೇಗಿರುತ್ತೆ. ಹೌದು.. ನಗರದ ಕುಂಟಿಕಾನದಲ್ಲಿರುವ ಬಿಎಂಎಸ್ ವೆಜ್ ರೆಸ್ಟೋರೆಂಟ್ ನಲ್ಲಿ ಮಂಗಳೂರಿನಲ್ಲಿ ಮೊದಲ ಬಾರಿಗೆ ಮದುವೆ ಸಡಗರದ ಮಾದರಿಯಲ್ಲೇ ವೆಡ್ಡಿಂಗ್ ಸೆರೆಮನಿಯ ವ್ಯವಸ್ಥೆ ಮಾಡಲಾಗಿದೆ.
ಹೊಟೇಲಿನಲ್ಲಿ ಸೆ.2 ಮತ್ತು 4ರಂದು ವಿಶೇಷ ರೀತಿಯ ಈವೆಂಟ್ ಹಮ್ಮಿಕೊಳ್ಳಲಾಗಿದೆ. ಪ್ರವೇಶಕ್ಕೆ ಪ್ರತಿ ಒಬ್ಬರಿಗೆ 599 ರೂಪಾಯಿ ಮೊತ್ತದ ಟಿಕೆಟ್ ಇರಲಿದೆ. ಇಬ್ಬರು, ನಾಲ್ವರು, ಮಕ್ಕಳು ಹೀಗೆ ಕುಟುಂಬ ಸಮೇತ ಹಬ್ಬದಲ್ಲಿ ಪಾಲು ಪಡೆಯಬಹುದು. ಸಮಾರಂಭದಲ್ಲಿ ಎಷ್ಟು ಕೂಡ ತಿಂದು ತೇಗುವುದಕ್ಕೆ ಅವಕಾಶ ಇದೆ. ನೂರಕ್ಕೂ ಹೆಚ್ಚು ಐಟಂಗಳನ್ನು ಹೊಂದಿರುವ ಮೆನುವನ್ನು ನಿಮಗಾಗಿ ಮಾಡಲಾಗಿದೆ ಎಂದು ಪ್ರೋಗ್ರಾಂ ಕೋಆರ್ಡಿನೇಟರ್ ಲಕ್ಷ್ಮೀ ಶೆಣೈ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.


ಸೆ.1ರಂದು ಸಂಜೆ ಉದ್ಘಾಟನೆ ದಿನದ ಸಲುವಾಗಿ ಆಹ್ವಾನಿತರಿಗೆ ಮಾತ್ರ ವಿಶೇಷ ರೀತಿಯ ಔತಣ ಕೂಡ ಏರ್ಪಡಿಸಲಾಗಿತ್ತು. ಮ್ಯೂಸಿಕ್, ಡಿಜೆ ಸೌಂಡ್, ಕುಣಿತ ಎಲ್ಲವೂ ಇತ್ತು. ಇದೇ ರೀತಿ ಶನಿವಾರ ಮತ್ತು ಭಾನುವಾರ ಸಾರ್ವಜನಿಕರಿಗೆ ಹಬ್ಬದ ಸಡಗರ ಮುಕ್ತವಾಗಿರಲಿದೆ. ಟಿಕೆಟ್ ಪಡೆದು ಒಳಪ್ರವೇಶ ಮಾಡಿದರೆ, ಅದ್ದೂರಿ ಸಭಾಂಗಣದಲ್ಲಿ ಮದುವೆ ರೀತಿಯ ಸಡಗರದ ಅನುಭವ ಪಡೆಯಬಹುದು. ಇದರ ಜೊತೆಗೆ ವಿಶೇಷ ರೀತಿಯ ಆಸನಗಳನ್ನೂ ವ್ಯವಸ್ಥೆ ಮಾಡಲಾಗಿದೆ. ಕುಟುಂಬ ಸಮೇತ ಬಂದಿದ್ದರೆ, ತಾವೇ ಫೋಟೋ ತೆಗೆದು ಸಂಭ್ರಮ ಪಡಬಹುದು. ವೆಡ್ಡಿಂಗ್ ಸೆರೆಮನಿ ಮಾಡುವುದಕ್ಕೂ ಇದನ್ನು ಬಳಸಿಕೊಳ್ಳಬಹುದು.
ಬಳ್ಳಾಲ್ ಗ್ರೂಪ್ ಸಂಸ್ಥೆಗಳಿಗೆ ಒಳಪಟ್ಟ ಬಿಎಂಎಸ್ ಹೊಟೇಲ್ ಮಂಗಳೂರಿನಲ್ಲಿ ವೆಜಿಟೇರಿಯನ್ ಆಹಾರಕ್ಕೆ ಹೆಸರುವಾಸಿ. ವೆಜ್ ಬಾರ್ ಅಂಡ್ ರೆಸ್ಟೋರೆಂಟ್ ಕೂಡ ಇದರಲ್ಲಿದೆ. ಮಂಗಳೂರು ನಗರದಲ್ಲಿ ಇದೇ ಮೊದಲ ಬಾರಿಗೆ ವೆಜ್ ಫುಡ್ಡಿನ ಮದುವೆ ಸಡಗರದ ಸಂಭ್ರಮ ಏರ್ಪಾಡಿಸಿದ್ದು, ಸಾರ್ವಜನಿಕರ ಸಹಕಾರ ಬಯಸುತ್ತೇವೆ ಎಂದು ಲಕ್ಷ್ಮೀ ಶೆಣೈ ತಿಳಿಸಿದ್ದಾರೆ.
Mangalore Big Fat Wedding Extravaganza by BMS on 2nd and 3rd September. Hotel BMS is set to redefine opulence and grandeur with the inaugural “BIG FAT MANGALOREAN WEDDING” event, scheduled to take place from 1st to 3rd September 2023. This three-day celebration promises an unforgettable experience, blending tradition, entertainment, and luxury like never before.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm