ಬ್ರೇಕಿಂಗ್ ನ್ಯೂಸ್
23-09-23 06:30 pm Mangalore Correspondent ಕರಾವಳಿ
ಮಂಗಳೂರು, ಸೆ.23: ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ, ಗೋ ಸೇವಾ ಗತಿವಿಧಿ ಕರ್ನಾಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ನವೆಂಬರ್ ತಿಂಗಳಲ್ಲಿ ನಡೆಯುವ ಶ್ರೀಮದ್ಭಾಗವತ ಕಥಾ ಪಾರಾಯಣ ಸಪ್ತಾಹ ಮಹಾಯಜ್ಞ ಮತ್ತು ಗೋ ನವರಾತ್ರಿ ಉತ್ಸವದ ಪ್ರಯುಕ್ತ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಗೋ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ.
ಫರಂಗಿಪೇಟೆ ಬಳಿಯ ಪುದು ಗ್ರಾಮದ ಗೋವಿನತೋಟ, ಬ್ರಹ್ಮಗಿರಿಯಲ್ಲಿರುವ ರಾಧಾ ಸುರಭಿ ಗೋಮಂದಿರದ ಭಕ್ತಿಭೂಷಣದಾಸ್ ಪ್ರಭೂಜಿ ನೇತೃತ್ವದಲ್ಲಿ ಸೆ.24ರಂದು ಬೆಳಗ್ಗೆ ಗೋ ರಥಯಾತ್ರೆ ಹೊರಡಲಿದೆ. ಗೋಶಾಲೆಯಲ್ಲೇ ಬೆಳೆದ ದೇಸಿ ಗಿಡ್ಡ ತಳಿಯ ಗೋವನ್ನು ಮುಂದಿಟ್ಟು ಮೂರು ಜಿಲ್ಲೆಗಳಲ್ಲಿ ಗೋರಥಯಾತ್ರೆ ಸಂಚರಿಸಲಿದೆ. ಸೆ.24ರಿಂದ ನವೆಂಬರ್ 8ರ ವರೆಗೆ ರಥಯಾತ್ರೆ ಸಂಚರಿಸಲಿದ್ದು, ದೇಸಿ ಗಿಡ್ಡ ತಳಿ ಗೋವಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿದೆ.


ಈ ಬಗ್ಗೆ ರಾಧಾ ಸುರಭಿ ಗೋಮಂದಿರದ ಪ್ರವರ್ತಕ ಭಕ್ತಿಭೂಷಣದಾಸ ಪ್ರಭೂಜಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ. ದೇಸಿ ಗೋವಿನಿಂದ 42 ವಿಧದ ಉತ್ಪನ್ನಗಳನ್ನು ತಯಾರಿಸಬಹುದಾಗಿದೆ. ಗೋವು ನಮ್ಮ ನಡುವೆ ಇರುವ ಚಲಿಸುವ ದೇವತೆಯಾಗಿದ್ದು, ಅದರ ಮಹತ್ವದ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಸೆಗಣಿಯಿಂದ ಹಿಡಿದು ತುಪ್ಪದ ವರೆಗೂ ಅಮೂಲ್ಯ ರತ್ನಗಳನ್ನು ದೇಸಿ ಗೋವು ನೀಡುತ್ತದೆ. ಈ ಬಗ್ಗೆ ಜನಜಾಗೃತಿ ಮೂಡಿಸುವುದು ಮತ್ತು ನವೆಂಬರ್ ನಲ್ಲಿ ನಡೆಯುವ ಗೋನವರಾತ್ರಿ ಉತ್ಸವದ ಬಗ್ಗೆ ಪ್ರಚಾರ ಕೈಗೊಳ್ಳುವುದು ಗೋ ರಥಯಾತ್ರೆಯ ಉದ್ದೇಶ ಎಂದು ಪ್ರಭೂಜಿ ತಿಳಿಸಿದ್ದಾರೆ.
ಗೋರಥಯಾತ್ರೆ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ಸಂಚರಿಸಲಿದ್ದು, ಜನರು ಆದರದಿಂದ ಬರಮಾಡಿಕೊಳ್ಳಬೇಕು. ನಮ್ಮ ಊರಿನ ದೇಸಿ ಗೋತಳಿಯ ಬಗ್ಗೆ ತಿಳಿದುಕೊಂಡು ಅದನ್ನು ಉಳಿಸುವಲ್ಲಿ ಪಣ ತೊಡಬೇಕಾಗಿದೆ. ಶ್ರೀಮದ್ಭಾಗವತ ಕಥಾ ಪಾರಾಯಣ ಮಹಾಯಜ್ಞ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ನಡೆಯುತ್ತಿದ್ದು, ಇದರ ಪ್ರಚಾರಾರ್ಥ ಮತ್ತು ಗೋವಿನ ಬಗ್ಗೆ ಜಾಗೃತಿ ಮೂಡಿಸಲು ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಯಾತ್ರೆಗೆ ಕದ್ರಿ ಜೋಗಿಮಠದ ನಿರ್ಮಲನಾಥಜೀ ಚಾಲನೆ ನೀಡಲಿದ್ದಾರೆ ಎಂದು ಯಜ್ಞ ಸಮಿತಿಯ ಅಧ್ಯಕ್ಷ ಕ್ಯಾ. ಬೃಜೇಶ್ ಚೌಟ ತಿಳಿಸಿದ್ದಾರೆ.
ರಥಯಾತ್ರೆ ಸಂದರ್ಭದಲ್ಲಿ ಗೋಪೂಜೆ, ನಾರಾಯಣ ಕವಚ ಯಾಗ ಸೇವೆ, ಅನ್ನದಾನ ಸೇವೆ, ಗೋಗ್ರಾಸ ಸೇವೆ ಇನ್ನಿತರ ಸೇವೆಗಳನ್ನು ಮಾಡುವುದಕ್ಕೆ ಸಾರ್ವಜನಿಕರಿಗೆ ಅವಕಾಶ ಇರಲಿದೆ. ಸುದ್ದಿಗೋಷ್ಟಿಯಲ್ಲಿ ತಾರನಾಥ ಕೊಟ್ಟಾರಿ, ರವಿ ಅಲೆವೂರಾಯ ಮತ್ತಿತರರಿದ್ದರು.
Go Ratayatra to be held in Mangalore on September 24th to November 8th covering three districts of Karnataka. A press meet was hele by Radha Surabi Gomandir Bhakthibushandas Prabuji.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 03:35 pm
Mangalore Correspondent
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
05-11-25 05:27 pm
Bangalore Correspondent
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm