ಲೋಕಸಭೆ ಚುನಾವಣೆ ; ಮಂಗಳೂರಿನಲ್ಲಿ ವಿಶ್ವ ಹಿಂದು ಪರಿಷತ್ತಿನ ಪ್ರಾಂತ ಬೈಠಕ್ 

09-03-24 10:47 pm       Mangalore Correspondent   ಕರಾವಳಿ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಂಘ ಪರಿವಾರ ಚಟುವಟಿಕೆ ಆರಂಭಿಸಿದೆ. ಮಂಗಳೂರಿನ ಸಂಘ ನಿಕೇತನದಲ್ಲಿ ವಿಶ್ವ ಹಿಂದು ಪರಿಷತ್ತಿನ ಪ್ರಾಂತ ಮಟ್ಟದ ಎರಡು ದಿನಗಳ ಬೈಠಕ್ ಆಯೋಜಿಸಿದೆ. 

ಮಂಗಳೂರು, ಮಾ.9: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಂಘ ಪರಿವಾರ ಚಟುವಟಿಕೆ ಆರಂಭಿಸಿದೆ. ಮಂಗಳೂರಿನ ಸಂಘ ನಿಕೇತನದಲ್ಲಿ ವಿಶ್ವ ಹಿಂದು ಪರಿಷತ್ತಿನ ಪ್ರಾಂತ ಮಟ್ಟದ ಎರಡು ದಿನಗಳ ಬೈಠಕ್ ಆಯೋಜಿಸಿದೆ. 

ವಿಶ್ವಹಿಂದೂ ಪರಿಷತ್, ಕರ್ನಾಟಕ ದಕ್ಷಿಣ ಪ್ರಾಂತ ಮಟ್ಟದ ಪದಾಧಿಕಾರಿಗಳ ಬೈಠಕ್ ಕರೆದಿದ್ದು ಚುನಾವಣೆ ಹಿನ್ನೆಲೆಯಲ್ಲಿ ಪ್ರಮುಖ ಸೂಚನೆಗಳನ್ನು ನೀಡಲಾಗಿದೆ. ಕರ್ನಾಟಕ ದಕ್ಷಿಣ ಪ್ರಾಂತದ 37 ಜಿಲ್ಲೆಗಳ ಪರಾಧಿಕಾರಿಗಳು ಬೈಠಕ್ ನಲ್ಲಿ ಭಾಗಿಯಾಗಿದ್ದಾರೆ. 

320 ಕ್ಕೂ ಹೆಚ್ಚು ಪದಾಧಿಕಾರಿಗಳು ಬೈಠಕ್ ನಲ್ಲಿ ಪಾಲ್ಗೊಂಡಿದ್ದಾರೆ. ಬೈಠಕ್ ನಲ್ಲಿ ಸಂಘಟನಾತ್ಮಕ ವಿಚಾರಗಳ ಬಗ್ಗೆ ಚರ್ಚೆಯಾಗಿದೆ ಎನ್ನಲಾಗಿದೆ. ಲೋಕಸಭಾ ಚುನಾವಣೆ, ರಾಮ ಮಂದಿರ ವಿಚಾರಗಳ ಕುರಿತಾಗಿಯೂ ಚರ್ಚೆಯಾಗಿದೆ. 

ಅಯೋಧ್ಯೆ ಬಳಿಕ ಕಾಶಿ, ಮಥುರಾ ದೇವಸ್ಥಾನಗಳ ವಿವಾದ ಬಗ್ಗೆಯೂ ಹೋರಾಟ ರೂಪಿಸಲಿ ಚರ್ಚಿಸುವ ಸಾಧ್ಯತೆಯಿದೆ. ವಿ ಎಚ್ ಪಿ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಡಾ.ಎಂ. ಬಿ ಪುರಾಣಿಕ್ ನೇತೃತ್ವದಲ್ಲಿ ಬೈಠಕ್ ನಡೆಯುತ್ತಿದ್ದ ಶನಿವಾರದಿಂದ ಭಾನುವಾರ ಸಂಜೆಯ ವರೆಗೆ ನಡೆಯಲಿದೆ.

The Sangh Parivar has started its activities in the run-up to the Lok Sabha elections. The Vishwa Hindu Parishad (VHP) is organising a two-day state-level baithak at Sangh Niketan in Mangaluru.