Mangalore Election, Voting, Police, Sandeep Yekkur: ಕಪಿತಾನಿಯೋ ಮತಗಟ್ಟೆ ಬಳಿ ಪೊಲೀಸರು- ಬಿಜೆಪಿ ಕಾರ್ಯಕರ್ತರ ಜಟಾಪಟಿ ;  ಕಾರ್ಯಕರ್ತರ ಬೆವರಿಳಿಸಿದ ಇನ್ಸ್ ಪೆಕ್ಟರ್ 

26-04-24 09:22 am       Mangalore Correspondent   ಕರಾವಳಿ

ಕಪಿತಾನಿಯೋ ಶಾಲೆಯ ಮತಗಟ್ಟೆ ಹೊರಗಡೆ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆದಿದೆ. 

ಮಂಗಳೂರು, ಎ.25: ಕಪಿತಾನಿಯೋ ಶಾಲೆಯ ಮತಗಟ್ಟೆ ಹೊರಗಡೆ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆದಿದೆ. 

ಮತಗಟ್ಟೆ ಹೊರಗೆ ಮಾಧ್ಯಮಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪ್ರತಿಕ್ರಿಯೆ ನೀಡುತ್ತಿದ್ದಾಗ, ಅಲ್ಲಿ ಒಂದಷ್ಟು ಗುಂಪು ಸೇರಿದ್ದರು. ಈ ವೇಳೆ, ಬಿಜೆಪಿ ಕಾರ್ಯಕರ್ತನೊಬ್ಬ ಪ್ರಶ್ನೆ ಮಾಡಲು ಬಂದಿದ್ದಾನೆ. ಮಂಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ಟಿಡಿ ನಾಗರಾಜ್ ಬಳಿ ವಾಯ್ಸ್ ರೈಸ್ ಮಾಡಿ ಮಾತನಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಇನ್ಸ್ ಪೆಕ್ಟರ್, ಬಿಜೆಪಿ ಕಾರ್ಯಕರ್ತನ ಕಾಲರ್ ಹಿಡಿದು ಎಳೆದೊಯ್ದಿದ್ದಾರೆ. 

ಇತರೇ ಪೊಲೀಸರು ಕೂಡ ಸೇರಿಕೊಂಡು ಎಳೆದೊಯ್ದಿದ್ದು ಒಂದಷ್ಟು ಹೊತ್ತು ರಸ್ತೆ ಬದಿಯಲ್ಲಿ ಜಟಾಪಟಿಗೆ ಕಾರಣವಾಯಿತು. ಬಿಜೆಪಿ ಕಾರ್ಯಕರ್ತ ಸಂದೀಪ್ ಶೆಟ್ಟಿಗೆ ನಿನ್ನ ಮೇಲೆ ಎಫ್ಐಆರ್ ಹಾಕಿ ಒದ್ದು ಒಳಗೆ ಹಾಕುತ್ತೇನೆ, ಭಾರೀ ಮಾತಾಡ್ತೀಯಾ, ಇಲೆಕ್ಷನ್ ನಡೀತಿದೆ, ನಾವು ನಮ್ಮ ಡ್ಯೂಟಿ ಮಾಡುತ್ತಿದ್ದೇವೆ ಎಂದು ಆವಾಜ್ ಹಾಕಿದ್ದಾರೆ. ಕಾರ್ಯಕರ್ತರನ್ನು ದೂರಕ್ಕೆ ತಳ್ಳಿಕೊಂಡು ಹೋಗಿ ಬಿಟ್ಟಿದ್ದಾರೆ. 

ಆನಂತರ, ಬಿಜೆಪಿ ಕಾರ್ಯಕರ್ತರು ಮಾಧ್ಯಮದವರ ಮೇಲೆಯೂ ಹರಿಹಾಯ್ದಿದ್ದು ಬಳಿಕ ಎಲ್ಲರನ್ನೂ ಪೊಲೀಸರು ಶಾಂತಗೊಳಿಸಿದ್ದಾರೆ. ಮತಗಟ್ಟೆ ಹೊರಭಾಗದ ರಸ್ತೆಯಲ್ಲಿ ಘಟನೆ ನಡೆದಿದೆ.

Mangalore Fight erupts between police and BJP members during voting near Capitanio School near Pumpwell. BJP Sandeep Yekkur and Kankandy town inspector TD Nagraj had words of exchange when Sandeep was creating noisence during polling. Then video of this has gone viral on social media.