ಬ್ರೇಕಿಂಗ್ ನ್ಯೂಸ್
21-05-24 07:15 pm Udupi Correspondent ಕರಾವಳಿ
ಉಡುಪಿ, ಮೇ 21: ಶಾಲೆಯಲ್ಲಿ ಮುಖ್ಯೋಪಾಧ್ಯಾಯರು ಟಿಸಿ ಕೊಟ್ಟಿಲ್ಲವೆಂದು ಮನನೊಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಬೈಂದೂರಿನಲ್ಲಿ ನಡೆದಿದೆ. ನಿತಿನ್ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಬೈಂದೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ನಿತಿನ್ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ. ಬೇರೆ ಕಾಲೇಜಿನಲ್ಲಿ ಪಿಯುಸಿಗೆ ಸೇರಲು ಟಿಸಿ ಪಡೆಯಲೆಂದು ನಿತಿನ್ ಶಾಲೆಗೆ ಬಂದಿದ್ದ ಎನ್ನಲಾಗಿದೆ.
ಆದರೆ ಶಾಲೆಯಲ್ಲಿ ಮುಖ್ಯೋಪಾಧ್ಯಾಯ ಸುರೇಶ್ ಭಟ್ ತನಗೆ ಬೈದಿದ್ದಾರೆ ಎಂದು ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೈಂದೂರು ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು ಸಾರ್ವಜನಿಕರು ಠಾಣೆ ಮುಂದೆ ಜಮಾಯಿಸಿ ಶಾಲೆಯ ಮುಖ್ಯೋಪಾಧ್ಯಾಯ ಸುರೇಶ್ ಭಟ್ ಬಂಧಿಸುವಂತೆ ಆಗ್ರಹಿಸಿದ್ದಾರೆ. ಪೊಲೀಸರು ತನಿಖೆ ನಡೆಸಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.
ಅಮ್ಮ ನಿಮ್ಮಲ್ಲಿ ಕೆಲವು ವಿಷಯ ಮುಚ್ಚಿಟ್ಟಿದ್ದೇನೆ !
ಅಮ್ಮ ನಾನು ನಿಮ್ಮ ಹತ್ತಿರ ತುಂಬಾ ಸತ್ಯವನ್ನು ಮುಚ್ಚಿಟ್ಟಿದ್ದೇನೆ. ನಾನು ಶಾಲೆಗೆ ಹೋದಾಗ, ನಿನಗೆ ಟಿಸಿ ಕೊಡೋದಕ್ಕೆ ಆಗೋದಿಲ್ಲ. ನೀನು ಸಿಸಿಟಿವಿ ಹಾಗೂ ಬೇರೆ ವಸ್ತುಗಳನ್ನು ಹಾಳು ಮಾಡಿದ್ದೀಯಾ. ನೀನು ನಿನ್ನ ಪೋಷಕರನ್ನು ಕರೆದುಕೊಂಡು ಬರಬೇಕು. ಜತೆಗೆ ಅದಕ್ಕೆ ದಂಡ ಕಟ್ಟಬೇಕು ಅಂತ ಮುಖ್ಯಗುರು ಹೇಳಿದ್ದಾರೆ. ಆದರೆ ನನಗೆ ನಿಮ್ಮ ಕಷ್ಟಗಳನ್ನು ನೋಡೋಕೆ ಆಗದೇ, ನಿಮ್ಮ ಹತ್ತಿರ ಏನನ್ನೂ ಹೇಳೋದಕ್ಕೆ ಆಗಲಿಲ್ಲ. ಅವರು ನನಗೆ ಶಾಲೆಯಲ್ಲಿ ತುಂಬಾನೇ ಅವಮಾನ ಮಾಡಿದ್ದಾರೆ. ಅದು ನನ್ನ ಹತ್ತಿರ ಸಹಿಸಿಕೊಳ್ಳಲು ಆಗಲಿಲ್ಲ. ಅವರಿಗೆ ನಾನೂ ಹೇಳಿದ್ದೆ, ನೀವು ಹೇಳಿದ ವಸ್ತುಗಳನ್ನು ನಾನು ಹಾಳು ಮಾಡಿಲ್ಲ ಅಂತ. ಆದರೆ ಅವರು ನೀನೇ ಇದನ್ನ ಮಾಡಿದ್ದು ಅಂತ ಹೇಳಿದ್ರು. ಅದಕ್ಕೆ ನಾನು ಟಿಸಿ ಕೊಡಿ ಸರ್ ಅಂತ ಹೇಳಿದ್ದೆ. ಆದರೆ ಆ ವಸ್ತಗಳನ್ನು ರಿಪೇರಿ ಮಾಡಿಸು, ಆಮೇಲೆ ಟಿಸಿ ಕೊಡುತ್ತೇನೆ ಅಂತ ಹೇಳಿದ್ದಾರೆ ಎಂದು ಡೆತ್ ನೋಟ್ನಲ್ಲಿ ವಿದ್ಯಾರ್ಥಿ ಬರೆದಿಟ್ಟಿದ್ದು ಮರುಕ ಹುಟ್ಟಿಸುತ್ತದೆ.
Members of the public and family of the deceased SSLC student, who killed himself for refusal to give him a Transfer Certificate (TC) to join PU college by Byndoor PU college high school authorities, held a protest in front of Byndoor police station calling for the arrest of those who abetted his suicide while also providing suitable justice.
22-09-24 07:10 pm
Bangalore Correspondent
Chikkaballapur, Accident: ಓವರ್ಟೇಕ್ ಮಾಡಲು ಹೋಗ...
22-09-24 06:52 pm
ಪ್ಯಾಲೆಸ್ತೀನ್ ಧ್ವಜದ ಬಗ್ಗೆ ಸಚಿವ ಜಮೀರ್ ಸಮರ್ಥನೆ ಬ...
21-09-24 11:17 pm
ಬಿಜೆಪಿ ಶಾಸಕ ಮುನಿರತ್ನ ಪ್ರಕರಣ ತನಿಖೆಗೆ ಎಸ್ಐಟಿ ರಚ...
21-09-24 10:42 pm
Nandini ghee; ತಿರುಪತಿ ಲಡ್ಡಿನಲ್ಲಿ ಪ್ರಾಣಿಜನ್ಯ ಕ...
20-09-24 11:01 pm
21-09-24 08:05 pm
HK News Desk
ರಾಜಕೀಯ ಬಿರುಗಾಳಿ ಎಬ್ಬಿಸಿದ ತಿರುಪತಿ ಲಡ್ಡು ವಿವಾದ ...
21-09-24 06:36 pm
ಲೆಬನಾನಲ್ಲಿ ಪೇಜರ್ ಸ್ಫೋಟ ; ವಯನಾಡಿನಲ್ಲಿ ಸುದ್ದಿ ಸ...
21-09-24 05:49 pm
Uttar Pradesh: ಗಂಡು ಮಗುವಿಗಾಗಿ ಪತ್ನಿ ಜೊತೆ ಜಗಳ...
20-09-24 07:39 pm
ತಿರುಪತಿ ಲಡ್ಡಿನಲ್ಲಿ ಪ್ರಾಣಿಜನ್ಯ ಕೊಬ್ಬು, ಮೀನಿನೆಣ...
20-09-24 04:42 pm
22-09-24 04:55 pm
Mangalore Correspondent
Shri Ram sene, Gangadhar Kulkarni, Mangalore:...
22-09-24 01:16 pm
Dasara 2024 School holiday; ಈ ಬಾರಿ ಅ.3ರಿಂದ 20...
21-09-24 01:15 pm
Nitte Tulu Study Centre, Mangalore: ನಿಟ್ಟೆ ತು...
20-09-24 11:08 pm
Mangalore Savad Sullia, NSUI: ಎನ್ಎಸ್ ಯುಐ ರಾಷ್...
20-09-24 10:57 pm
22-09-24 10:48 pm
HK News Desk
ಪಾರ್ಟ್ ಟೈಮ್ ಉದ್ಯೋಗದ ಹೆಸರಲ್ಲಿ ಹೂಡಿಕೆ ; ಹಣ ಡಬಲ್...
22-09-24 10:40 pm
Mangalore cyber fraud, stock market: ಯೂಟ್ಯೂಬ್...
22-09-24 08:25 pm
Karwar Murder, Crime: ಕಾರವಾರದಲ್ಲಿ ಬೆಳ್ಳಂಬೆಳಗ್...
22-09-24 02:37 pm
Mangalore crime, Theft: ಮೂಡುಬಿದ್ರೆಯಲ್ಲಿ ವೃದ್ಧ...
21-09-24 10:56 pm