ಬ್ರೇಕಿಂಗ್ ನ್ಯೂಸ್
08-07-24 06:37 pm Udupi Correspondent ಕರಾವಳಿ
ಉಡುಪಿ, ಜುಲೈ 8: ಕರಾವಳಿಯ ದಕ್ಷಿಣ ಕನ್ನಡ, ಉಡುಪಿಯಲ್ಲಿ ಭತ್ತದ ಗದ್ದೆಗಳೇ ಮಾಯವಾಗುತ್ತಿವೆ. ಇದ್ದ ಗದ್ದೆಗಳಲ್ಲಿ ಉತ್ತು ಬೆಳೆ ತೆಗೆಯುವುದಕ್ಕೆ ಕೃಷಿ ಕಾರ್ಮಿಕರ ಕೊರತೆಯೂ ಇದೆ. ಉಡುಪಿ ಜಿಲ್ಲೆಯ ಕೋಟ ಆಸುಪಾಸಿನಲ್ಲೀಗ ಭತ್ತದ ಗದ್ದೆಗಳಲ್ಲಿ ಒಡಿಶಾ ಮೂಲದ ಮಹಿಳೆಯರು ಭತ್ತದ ಕೃಷಿ ಕೆಲಸದಲ್ಲಿ ತೊಡಗಿಸಿದ್ದಾರೆ.
ಗದ್ದೆಗಳು ಒಂದೆಡೆ ಮರೆಯಾಗುತ್ತಿದ್ದರೂ, ಅಕ್ಕಿಗೆ ಒಂದೇ ಸಮನೆ ದರ ಏರುತ್ತಿರುವುದರಿಂದ ಹಿಂದಿನಿಂದಲೂ ಗದ್ದೆ ಬೇಸಾಯ ಮಾಡಿಕೊಂಡಿದ್ದವರು ಬಿಟ್ಟಾಕುತ್ತಿಲ್ಲ. ಸಾಂಪ್ರದಾಯಿಕ ಕೃಷಿಯಿಂದ ಲಾಭ ಇದೆಯೆಂದು ಹೇಳುವವರು ಕಷ್ಟದಲ್ಲೂ ಭತ್ತದ ಒಂದು ಬೆಳೆ ತೆಗೆಯುತ್ತಿದ್ದಾರೆ. ಕೃಷಿಗೆ ಯಂತ್ರಕ್ಕಿಂತಲೂ ಕೂಲಿಗೆ ಜನ ಸಿಕ್ಕರೆ, ಅವರಲ್ಲೇ ನಾಟಿ ಮಾಡಿಸುವುದು ಒಳ್ಳೆದು ಅಂತಾರೆ. ಒಡಿಶಾದ ಮಹಿಳಾ ಕಾರ್ಮಿಕರು ಉಡುಪಿ, ಮಲ್ಪೆಯಲ್ಲಿ ಮೀನಿಗೆ ಸಂಬಂಧಿಸಿದ ಕೈಗಾರಿಕೆ, ಮಾರುಕಟ್ಟೆಗಳಲ್ಲಿ ದುಡಿಯುತ್ತಿದ್ದವರು. ಮಳೆಗಾಲದಲ್ಲಿ ಮೀನುಗಾರಿಕೆಗೆ ರಜೆ ಇರುವುದರಿಂದ ಸಾಮಾನ್ಯವಾಗಿ ಇವರು ತಮ್ಮೂರಿಗೆ ತೆರಳುತ್ತಿದ್ದರು. ಈ ಬಾರಿ, ತಮ್ಮೂರಿನ ರೀತಿಯಲ್ಲೇ ಕೃಷಿ ಕಾರ್ಯದ ಕೂಲಿ ಸಿಕ್ಕಿದ್ದು, ಕೋಟ, ಸಾಲಿಗ್ರಾಮ ಕಡೆಗಳಲ್ಲಿ ಗದ್ದೆಗಳಲ್ಲಿಳಿದು ಕೆಲಸ ಮಾಡುತ್ತಿದ್ದಾರೆ.
ಒಡಿಶಾದಲ್ಲಿಯೂ ಇಲ್ಲಿನ ರೀತಿಯಲ್ಲೇ ಸಾಂಪ್ರದಾಯಿಕ ಮಾದರಿಯಲ್ಲಿ ಭತ್ತದ ಗದ್ದೆ ಮಾಡುತ್ತಾರಂತೆ. ಭತ್ತದ ನೇಜಿ ನೆಡುವ ಕೆಲಸ ಗೊತ್ತಿರುವ ಮಹಿಳೆಯರು ಇದೀಗ ಉಡುಪಿ ಜಿಲ್ಲೆಯಲ್ಲಿ ಭತ್ತದ ಕೃಷಿ ಕೆಲಸಕ್ಕೆ ಮುಂದಾಗಿದ್ದಾರೆ. ತಮ್ಮೂರಿಗೆ ಹೋಲಿಸಿದರೆ, ಇಲ್ಲಿ ಸಂಬಳವೂ ಹೆಚ್ಚಿರುವುದರಿಂದ ಹೆಚ್ಚಿನ ಮಹಿಳೆಯರು ಊರಿಗೆ ಹಿಂತಿರುಗದೆ ಭತ್ತ ನಾಟಿಯಲ್ಲಿ ತೊಡಗಿದ್ದಾರೆ. ಇಲ್ಲಿ ಕೃಷಿ ಕೆಲಸದಲ್ಲಿ ತೊಡಗಿರುವ ಇವರೆಲ್ಲ ಮೂಲತಃ ಕೃಷಿ ಕಾರ್ಮಿಕರೇ ಆಗಿರುವುದು ವಿಶೇಷ. ತಂಡದ ಮಹಿಳೆಯರು ಉಡುಪಿ ಆಸುಪಾಸಿನಲ್ಲಿ ಬಿಡಾರದಲ್ಲಿದ್ದು, ಬೆಳಗ್ಗೆ 7ರಿಂದ ಸಂಜೆ 5.30ರ ತನಕ ನಾಟಿ ಮಾಡುತ್ತಾರೆ. ಪ್ರತಿದಿನ ಎಕ್ರೆಗಟ್ಟಲೆ ಗದ್ದೆ ನಾಟಿ ಮಾಡುವ ಇವರಿಗೆ ದಿನಕ್ಕೆ 550 ರೂ. ಸಂಬಳ ನೀಡಲಾಗುತ್ತದೆ.
ತಂಡದ ಸದಸ್ಯರು ನಾಟಿಯ ನಡುವೆ ಒಡಿಸ್ಸಿ ಜಾನಪದ ಹಾಡು ಹಾಡುತ್ತ ಖುಷಿ ಪಡೆದುಕೊಳ್ಳುತ್ತಾರೆ. ಇದರಿಂದಾಗಿ ಹಿಂದೆಲ್ಲಾ ಗದ್ದೆಗಳ ಎಡೆಯಿಂದ ಕೇಳುತ್ತಿದ್ದ ಓಬೇಲೇ ಹಾಡು ಕೇಳದಾಗಿದೆ. ಒಡಿಸ್ಸಿಗಳು ಕೂಡ ಸ್ಥಳೀಯ ಕಾರ್ಮಿಕರಿಗೆ ಕಡಿಮೆ ಇಲ್ಲದಂತೆ ವೇಗವಾಗಿ ಕೆಲಸ ಮಾಡುತ್ತಾರೆ ಎನ್ನುವುದು ಇವರ ಜೊತೆಗಿರುವ ಸ್ಥಳೀಯರ ಅನಿಸಿಕೆ. ಇವರ ಜತೆಗೆ ಕೊಪ್ಪಳ, ಗಂಗಾವತಿಯಿಂದಲೂ ನೂರಾರು ಕಾರ್ಮಿಕರು ಇಲ್ಲಿಗೆ ಆಗಮಿಸಿ ಭತ್ತ ಬೇಸಾಯದ ಕೆಲಸ ನಿರ್ವಹಿಸುತ್ತಿದ್ದಾರೆ.
Paddy fields in coastal Dakshina Kannada and Udupi are disappearing. There is also a shortage of agricultural labourers to plough the existing fields. Women from Odisha are now engaged in paddy cultivation in paddy fields around Kota in Udupi district.
06-10-24 05:32 pm
HK News Desk
Janardhan Reddy Ballari, Siddaramaiah: ಸಿದ್ದರ...
04-10-24 09:18 pm
ಬೆಂಗಳೂರು ; 3 ಪ್ರತಿಷ್ಠಿತ ಕಾಲೇಜುಗಳಿಗೆ ಹುಸಿ ಬಾಂ...
04-10-24 08:25 pm
Dinesh Gundu Rao, Savarkar: ಸಾವರ್ಕರ್ ಮಾಂಸಾಹಾರ...
04-10-24 12:38 pm
Vijay Tata, HD Kumaraswamy, Ramesh Gowda: ಚನ್...
04-10-24 12:02 pm
05-10-24 06:40 pm
HK News Desk
Tirupati laddu row, CBI: ತಿರುಪತಿ ಲಡ್ಡಿನಲ್ಲಿ ಕ...
04-10-24 07:10 pm
Isha foundation raid, Court: ಇಶಾ ಫೌಂಡೇಶನ್ ಆಶ್...
02-10-24 02:10 pm
Israel-Iran war: ಇಸ್ರೇಲ್ ಮೇಲೆ ಮುಗಿಬಿದ್ದ ಇರಾನ್...
02-10-24 11:43 am
Fire in Thailand: ಥಾಯ್ಲೆಂಡ್ ; ಸ್ಕೂಲ್ ಬಸ್ ಟಯರ...
01-10-24 07:36 pm
06-10-24 08:18 pm
Mangalore Correspondent
Mangalore, Mumtaz Ali latest news: ಉದ್ಯಮಿ ಮುಮ...
06-10-24 06:10 pm
Mumtaz Ali, Mangalore suicide; ಮಾಜಿ ಶಾಸಕ ಮೊಯ್...
06-10-24 09:08 am
Mangalore crime, kulur Video: ರಾತ್ರಿ ವೇಳೆ ವಿಡ...
05-10-24 10:54 pm
Mangalore crime, Arun Ullal: ಬೇರೆಯವರ ಹಾಲ್ ಗಳಲ...
05-10-24 10:06 pm
05-10-24 08:26 pm
Mangalore Correspondent
ಬೆಂಗಳೂರು ಏರ್ಪೋರ್ಟಲ್ಲಿ ಸಿಕ್ಕಿಬಿದ್ದಿದ್ದೇನೆ, ದೊಡ...
03-10-24 10:49 pm
BMTC Conductor Stabbed, Bangalore crime; ಫುಟ್...
02-10-24 05:44 pm
CCB Mangalore Police, Drugs: ತಲಪಾಡಿ ಗಡಿಭಾಗದಲ್...
02-10-24 04:45 pm
Vardhman Group, Digital Arrest, Fraud; ವರ್ಧಮಾ...
02-10-24 04:03 pm