ಬ್ರೇಕಿಂಗ್ ನ್ಯೂಸ್
04-03-25 10:41 pm Mangalore Correspondent ಕರಾವಳಿ
ಮಂಗಳೂರು, ಮಾ.4 : ನಗರದ ಎಮ್ಮೆಕೆರೆಯಲ್ಲಿ ಸ್ಮಾರ್ಟ್ಸಿಟಿ ಯೋಜನೆಯಡಿ ನಿರ್ಮಿಸಲಾಗಿರುವ ಅಂತರಾಷ್ಟ್ರೀಯ ಮಟ್ಟದ ಈಜುಕೊಳದಲ್ಲಿ ರಾಜ್ಯ, ರಾಷ್ಟ್ರೀಯ ಮಟ್ಟದ ಈಜು ಪಟುಗಳಿಗೆ ದುಬಾರಿ ಶುಲ್ಕ ವಿಧಿಸಲಾಗುತ್ತದೆ ಎಂಬ ಆರೋಪದ ಬಗ್ಗೆ ಈಜುಕೊಳ ನಿರ್ವಹಣೆ ವಹಿಸಿಕೊಂಡಿರುವ ವಿ ವನ್ ಅಕ್ವಾ ಸೆಂಟರ್ ನಿರ್ದೇಶಕ ನವೀನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಈಜು ಕೊಳದಲ್ಲಿ ಉತ್ತಮ ಸೌಕರ್ಯಗಳಿದ್ದು ಇಂತಹ ಸ್ವಿಮ್ಮಿಂಗ್ ಪೂಲ್ ಮತ್ತು ನುರಿತ ಕೋಚ್ ಗಳಿಂದ ತರಬೇತಿ ಪಡೆಯಲು ಬೆಂಗಳೂರಿನಂತಹ ನಗರದಲ್ಲಿ 15 ಸಾವಿರ ಕೊಡಬೇಕು. ಮಂಗಳೂರಿನ ಈ ಈಜುಕೊಳದಲ್ಲಿ ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ತರಬೇತಿ ಸಿಗುತ್ತಿದ್ದು ಈಜುಕೇಂದ್ರಕ್ಕೆ ಖೇಲೊ ಇಂಡಿಯಾ ಕೇಂದ್ರ ಎಂಬ ಮಾನ್ಯತೆ ಲಭಿಸಿದರೆ ಇನ್ನಷ್ಟು ಸೌಲಭ್ಯ ಮತ್ತು ಉತ್ತಮ ತರಬೇತಿ ವ್ಯವಸ್ಥೆಯನ್ನೂ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನವೀನ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲೂ ಉತ್ತಮ ಪ್ರದರ್ಶನ ನೀಡುವಂತಹ ಈಜುಪಟುಗಳು ಮಂಗಳೂರಿನಲ್ಲಿದ್ದಾರೆ. ಅಂತಾರಾಷ್ಟ್ರೀಯ ಈಜು ಒಕ್ಕೂಟ (ಎಫ್ಐಎನ್ಎ) ನಿಗದಿಪಡಿಸಿದ ಮಾನದಂಡಗಳ ಪ್ರಕಾರ ನಿರ್ಮಾಣಗೊಂಡಿರುವ ಈಜುಕೊಳದ ಸದುಪಯೋಗ ಸಿಗಲಿ ಎಂಬ ಕಾರಣಕ್ಕೆ ಬೆಂಗಳೂರಿನಿಂದ ತರಬೇತುದಾರರನ್ನು ಕರೆಸಿ ಗುಣಮಟ್ಟದ ತರಬೇತಿ ಒದಗಿಸುತ್ತಿದ್ದೇವೆ. ಇಲ್ಲಿನ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಖೇಲೊ ಇಂಡಿಯಾ ಯೋಜನೆಗಳಲ್ಲಿ ಅವಕಾಶ ಪಡೆದಷ್ಟು ಮಂಗಳೂರು ಖೇಲೊ ಇಂಡಿಯಾ ಯೋಜನೆಗೆ ಆಯ್ಕೆ ಸುಲಭವಾಗುತ್ತದೆ ಎಂದರು.

ದೇಶದ 10 ಅಂತಾರಾಷ್ಟ್ರೀಯ ಈಜುಕೊಳಗಳಲ್ಲಿ ಎಮ್ಮೆಕೆರೆ ಈಜುಕೊಳ ಬೆಳಗ್ಗೆ 5.30ರಿಂದ ರಾತ್ರಿ 9.45ರ ವರೆಗೆ ತೆರೆದಿರುತ್ತದೆ. ಬೆಳಗ್ಗೆ 10ರಿಂದ ಮಧ್ಯಾಹ್ನ 3ರ ವರೆಗೆ ಈಜುಕೊಳ ನಿರ್ವಹಣೆ ಮತ್ತು ಶಾಲಾ ಮಕ್ಕಳ ತರಬೇತಿಗೆ ಅವಕಾಶವಿರುತ್ತದೆ. ನೀರಿನ ಪಿ.ಎಚ್ ಮಟ್ಟ 7.25 ರಿಂದ 7.50ರ ನಡುವೆ ಕಾಯ್ದುಕೊಂಡು ಬರಲಾಗುತ್ತಿದೆ. ತರಬೇತಿದಾರರು ಹಾಗೂ ಜೀವ ರಕ್ಷಕರು ಈಜುಕೊಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಶುಲ್ಕ ದುಬಾರಿ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, 50 ಲಕ್ಷ ರು. ಭದ್ರತಾ ಠೇವಣಿ ಹಾಗೂ ತಿಂಗಳಿಗೆ 2.61 ಲಕ್ಷ ರು. ಶುಲ್ಕ ನೀಡಿ ಮೂರು ತಿಂಗಳಿನಿಂದ ನಿರ್ವಹಣೆ ಮಾಡುತ್ತಿದ್ದೇವೆ. ಮೂರು ತಿಂಗಳುಗಳಲ್ಲಿ 3 ಸಾವಿರ ಮಂದಿ ತರಬೇತಿ ಪಡೆದಿದ್ದಾರೆ. 12 ವರ್ಷದೊಳಗಿನ ಮಕ್ಕಳಿಗೆ ಕೊಳದ ಶುಲ್ಕ ಸೇರಿ ತಿಂಗಳಿಗೆ 3500 ರೂ. ಪಡೆಯುತ್ತೇವೆ. ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಹಾಗೂ ರಾಜ್ಯ ಮಟ್ಟದಲ್ಲಿ ಪದಕ ಗೆದ್ದ ಈಜು ಪಟುಗಳಿಗೆ ರಿಯಾಯಿತಿ ಇದ್ದು ಒಂದು ಸಾವಿರ ಅಷ್ಟೇ ಶುಲ್ಕ ಪಡೆಯುತ್ತೇವೆ. ಇತರ ಸಾರ್ವಜನಿಕರಿಗೆ ತರಬೇತಿ ಸಹಿತ ನಾಲ್ಕು ಸಾವಿರ ಪಡೆಯುತ್ತೇವೆ. ಭದ್ರತಾ ಸಿಬ್ಬಂದಿ, ಮೇಲ್ವಿಚಾರಕರು ಹಾಗೂ ವ್ಯವಸ್ಥಾಪಕರ ವೇತನವನ್ನೂ ನೀಡಬೇಕು. ಎಲ್ಲ ಸೇರಿ ತಿಂಗಳಿಗೆ ನಮಗೆ 11 ಲಕ್ಷ ವೆಚ್ಚವಾಗುತ್ತದೆ. ಇದೇ ಗುಣಮಟ್ಟದ ತರಬೇತಿಯನ್ನು ಬೆಂಗಳೂರಿನಲ್ಲಿ ₹ 15 ಸಾವಿರದಷ್ಟು ಶುಲ್ಕ ನೀಡಬೇಕಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿ ವನ್ ಅಕ್ವಾ ಸೆಂಟರ್ ಅಧ್ಯಕ್ಷ ಮಧುರಾಜ್, ಗೌರವ ಅಧ್ಯಕ್ಷ ಡಾ.ನಾಗೇಂದ್ರ, ಆಡಳಿತ ಪಾಲುದಾರರಾದ ರೂಪಾ ಜಿ.ಪ್ರಭು, ಹಿರಿಯ ತರಬೇತುದಾರ ಲೋಕರಾಜ್ ವಿಟ್ಲ, ಶೆರ್ಲಿ ರೇಗೊ ಭಾಗವಹಿಸಿದ್ದರು.
National-level swimmers will get concession in user fees at the new Yemmekere swimming pool, which has been built using funds under the Mangaluru Smart City Limited. It will be similar to the concession they get at the Mangala swimming pool of Mangaluru City Corporation.
06-11-25 03:06 pm
Bangalore Correspondent
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
06-11-25 12:51 pm
Mangalore Correspondent
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
06-11-25 02:08 pm
Mangalore Correspondent
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm