ಬ್ರೇಕಿಂಗ್ ನ್ಯೂಸ್
06-05-25 12:32 pm Mangalore Correspondent ಕರಾವಳಿ
ಉಳ್ಳಾಲ, ಮೇ 6 : ಮಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಿದ್ದರೂ ಪೊಲೀಸರೇ ಅಘೋಷಿತ ಕರ್ಫ್ಯೂ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ರಾತ್ರಿ 9 ಗಂಟೆಗೆ ಪೊಲೀಸರು ಬಾರ್, ರೆಸ್ಟೋರೆಂಟ್ ಗಳಿಗೆ ನುಗ್ಗಿ ಗ್ರಾಹಕರನ್ನ ಓಡಿಸಿ ಬಲವಂತವಾಗಿ ಶಟರ್ ಎಳೆಸುತ್ತಿದ್ದಾರೆ. ಸುಗಮ ವ್ಯಾಪಾರ, ವಹಿವಾಟುಗಳನ್ನ ನಡೆಸಲು ರಕ್ಷಣೆ ನೀಡಬೇಕಾಗಿರುವ ಆರಕ್ಷಕರೇ ರಾತ್ರಿಯಾಗುತ್ತಿದ್ದಂತೆ ಜನ ಸಾಮಾನ್ಯರನ್ನ ಹೆದರಿಸುತ್ತಿರುವುದರ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಬಜ್ಪೆಯಲ್ಲಿ ನಡೆದಿದ್ದ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಕಗ್ಗೊಲೆಯನ್ನ ಖಂಡಿಸಿ ವಿಶ್ವ ಹಿಂದೂ ಪರಿಷತ್ ಮರುದಿವಸವೇ ಬಂದ್ ಗೆ ಕರೆ ನೀಡಿತ್ತು. ಬಂದ್ ಗೆ ಕರೆ ನೀಡಿ ಅದರ ನೆಪದಲ್ಲಿ ಬಸ್ಸಿಗೆ ಕಲ್ಲೆಸೆದಿದ್ದಕ್ಕೆ ವಿಹಿಂಪ ಮುಖಂಡ ಶರಣ್ ಪಂಪ್ವೆಲ್ ವಿರುದ್ಧ ಈಗಾಗಲೇ ಪೊಲೀಸರು ಕೇಸು ಜಡಿದಿದ್ದಾರೆ. ಬಂದ್ ಗೆ ಕರೆ ನೀಡಿದ್ದರ ವಿರುದ್ಧ ಕೇಸು ಜಡಿದ ಪೊಲೀಸರೇ ಇದೀಗ ಯಾವುದೇ ಮುನ್ಸೂಚನೆ ನೀಡದೆ ನಗರವನ್ನ ತಮಗಿಷ್ಟ ಬಂದಂತೆ ಬಂದ್ ಮಾಡಿಸುತ್ತಿದ್ದಾರೆ. ಮಂಗಳೂರು ನಗರದ ಕೆಲವು ಕಡೆ ಮತ್ತು ಉಳ್ಳಾಲದಲ್ಲಿ ಭಾನುವಾರ ಮತ್ತು ಸೋಮವಾರ ರಾತ್ರಿ 9.30 ಗಂಟೆಗೆ ಬಾರ್, ರೆಸ್ಟೋರೆಂಟ್, ಫಾಸ್ಟ್ ಪುಡ್, ಹೊಟೇಲ್, ಇನ್ನಿತರ ಅಂಗಡಿಗಳನ್ನ ಪೊಲೀಸರು ಏಕಾಏಕಿ ಬಂದ್ ಮಾಡಿಸಿದ್ದಾರೆ.
ಬಾರ್, ರೆಸ್ಟೋರೆಂಟ್ ಗಳಿಗೆ ನುಗ್ಗಿದ ಪೊಲೀಸರು ಗ್ರಾಹಕರಲ್ಲಿ ಬೇಗ ಬೇಗ ಎದ್ದು ಮನೆಗೆ ಹೋಗಿ ಎನ್ನುತ್ತ ಶಟರ್ ಗಳನ್ನು ಎಳೆದು ಭಯ ಹುಟ್ಟಿಸಿದ್ದಾರೆ. ಭಯಭೀತರಾದ ಗ್ರಾಹಕರು ಏನೋ ಮತ್ತೊಂದು ಕೊಲೆ ಆಗಿರಬೇಕು ಎಂದುಕೊಂಡು ತರಿಸಿಟ್ಟ ಕಬಾಬ್, ಮದ್ಯವನ್ನ ಅರ್ಧಕ್ಕೆ ಬಿಟ್ಟು ಮನೆಗೆ ಓಡಿದ್ದಾರೆ. ಯಾವುದೇ ಅಹಿತಕರ ಘಟನೆಗಳು ಇಲ್ಲದಿದ್ದರೂ ಮುಂಜಾಗ್ರತೆ ನೆಪದಲ್ಲಿ ರೆಸ್ಟೋರೆಂಟ್ ಗಳನ್ನ ಪೊಲೀಸರು 9 ಗಂಟೆಗೆ ಒಳನುಗ್ಗಿ ಬಂದ್ ಮಾಡಿಸುವುದು ಎಷ್ಟು ಸರಿ? ಮೊದಲೇ ಸೂಚನೆ ಕೊಟ್ಟಿದ್ದರೆ ಓಕೆ, ಯಾವುದೇ ಸೂಚನೆ ಇಲ್ಲದೆ ಹೊಟೇಲ್ ಬಂದ್ ಮಾಡಿಸಿದರೆ ಮಾಡಿಟ್ಟ ಊಟ, ತಿಂಡಿಗಳನ್ನು ಏನು ಮಾಡಬೇಕು ಎಂದು ಹೊಟೇಲ್ ಮಾಲಕರು ಪ್ರಶ್ನಿಸಿದ್ದಾರೆ.
ಡಿಸಿಎಂ ಡೆಡ್ ಸಿಟಿ ಹೇಳಿಕೆಗೆ ರಂಗು !
ಮಂಗಳೂರು ರಾತ್ರಿ 7 ಗಂಟೆಯಾಗುತ್ತಿದ್ದಂತೆ ಡೆಡ್ ಸಿಟಿ ಆಗುತ್ತಿದೆಯೆಂದು ಡಿಸಿಎಂ ಡಿಕೆ ಶಿವಕುಮಾರ್ ಇತ್ತೀಚೆಗೆ ಅಸೆಂಬ್ಲಿಯಲ್ಲಿ ಪ್ರಸ್ತಾಪಿಸಿದ್ದರು. ಈಗ ಬಜಪೆಯಲ್ಲಿ ನಡೆದಿರುವ ಕೊಲೆಯನ್ನ ಮುಂದಿಟ್ಟು ಪೊಲೀಸರೇ ನಗರದಲ್ಲಿ ಜನಸಂಚಾರ ಇಲ್ಲದಂತೆ ಮಾಡುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಿದ್ದರೂ ಸಹ ಪೊಲೀಸರು ರಸ್ತೆಯುದ್ಧಕ್ಕೂ ಸೈರನ್ ಮೊಳಗಿಸಿ ಅತ್ತಿಂದಿತ್ತ ಓಡಾಡಿ ಜನರಲ್ಲಿ ಭೀತಿ ಹುಟ್ಟಿಸುತ್ತಿದ್ದಾರೆ. ಸಣ್ಣ ವ್ಯಾಪಾರಿಗಳಿಗೆ ಉಗಿದು ಬಂದ್ ಮಾಡಿಸಿದರೆ, ರೆಸ್ಟೋರೆಂಟ್ ಗಳಲ್ಲಿ ಒಳನುಗ್ಗಿ ಗ್ರಾಹಕರನ್ನೇ ಹೆದರಿಸಿ ಓಡಿಸುವ ಯತ್ನ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಲ್ಲಿ ಪ್ರಶ್ನಿಸಿದರೆ ನಮಗೆ ಮೇಲಿನ ಆದೇಶ ಇದೆಯೆಂದು ಸಬೂಬು ನೀಡುತ್ತಾರೆ.
ಬಸ್ಸುಗಳ ಸಂಚಾರವೂ 8-9 ಗಂಟೆಗೆ ಕ್ಲೋಸ್ ಆಗುವಂತೆ ಮಾಡುತ್ತಿದ್ದಾರೆ. ನಗರ ಸಂಚಾರಿ ಬಸ್ಸುಗಳನ್ನು ಬೇಗನೆ ನಿಲ್ಲಿಸಿದರೆ ಜನಸಾಮಾನ್ಯರ ಪಾಡೇನು. ಎಂದಿನಂತೆ ಕೆಲಸಕ್ಕೆ ಬಂದು ಹೋಗುವ ಜನರು ಬಸ್ ಸೌಕರ್ಯ ಇಲ್ಲದೆ ಹಿಡಿಶಾಪ ಹಾಕುವ ಸ್ಥಿತಿಯಾಗಿದೆ. ಅಹಿತಕರ ಘಟನೆ ಆಗುವ ಮೊದಲು ಎಚ್ಚತ್ತುಕೊಳ್ಳದ ಆರಕ್ಷಕರು, ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ವಾರ್ ಆಗುತ್ತಿರುವ ನೆಪದಲ್ಲಿ ಈಗೇನೋ ಆಗುತ್ತೆ ಎನ್ನುವಂತೆ ರಾತ್ರಿ ಸಂಚಾರವನ್ನು ಕಡಿತ ಮಾಡಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗಲಿ, ಸಂಶಯಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿ. ಜನಸಾಮಾನ್ಯರಿಗೆ ರಕ್ಷಣೆ ನೀಡಲಿ. ಅದು ಬಿಟ್ಟು 9 ಗಂಟೆಗೆ ಸಂಚಾರ ಬಂದ್ ಆಗಬೇಕು ಎನ್ನುವುದು ಪರೋಕ್ಷವಾಗಿ ಕಿಡಿಗೇಡಿಗಳಿಗೆ ದುಷ್ಕೃತ್ಯ ಎಸಗಲು ಪ್ರೇರಣೆ ನೀಡಿದಂತಾಗುತ್ತದೆ ಎಂದು ತೊಕ್ಕೊಟ್ಟಿನ ರೆಸ್ಟೋರೆಂಟ್ ಮಾಲಕ ಯಶವಂತ್ ರಾವ್ ಹೇಳುತ್ತಾರೆ.
ನಾವು ಚಿಕನ್ ಕಬಾಬ್ ಮಾಡಲು ಮಸಾಲ ತಯಾರಿಸಿಟ್ಟು ಬಾಣಲೆಯಲ್ಲಿ ಬಿಸಿ ಎಣ್ಣೆಯೂ ಸುಡುತ್ತಿರುವಾಗಲೇ ಪೊಲೀಸರು ಏಕಾಏಕಿ ಬಂದ್ ಮಾಡಿಸಿದರೆ ನಾವೇನು ಮಾಡುವುದು. ಹತ್ತು ನಿಮಿಷದಲ್ಲಿ ಬಂದ್ ಮಾಡದಿದ್ದರೆ ಪೊಲೀಸರು ನಮ್ಮ ಮೇಲೆರಗಲು ಬರುತ್ತಾರೆಂದು ತೊಕ್ಕೊಟ್ಟಿನ ಫಾಸ್ಟ್ ಫುಡ್ ವ್ಯಾಪಾರಿ ಅಳಲು ಹೇಳಿಕೊಂಡಿದ್ದಾರೆ.
Unannounced Curfew at 9 PM Citing Untoward Incident, Police Storm Hotels, Evict Customers, Pull Down Shutters in Mangalore.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 03:35 pm
Mangalore Correspondent
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
05-11-25 05:27 pm
Bangalore Correspondent
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm